September 13, 2026
ಗ್ರಾಮಾಂತರ ಸುದ್ದಿ

ಕರಿಯ ಮೊಗೇರ ಕುಟುಂಬಕ್ಕೆ ಗ್ರಾ.ಪಂ ಮಾಜಿ ಸದಸ್ಯೆ ಸವಿತಾ ಸಂತೋಷ್ ಶೆಟ್ಟಿ ಆರ್ಥಿಕ ನೆರವು, ವಸ್ರ್ತ ಕೊಡುಗೆ

ಬೆಳ್ತಂಗಡಿ; ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಅವರ ಕುಟುಂಬದ ಸಂಕಷ್ಟಕ್ಕೆ ಲಾಯಿಲ ಗ್ರಾ.ಪಂ ನಿಕಟಪೂರ್ವ ಸದಸ್ಯೆ ಸವಿತಾ ಸಂತೋಷ್ ಶೆಟ್ಟಿ ಅವರು ಸ್ಪಂದಿಸಿದ್ದಾರೆ‌.

ಸುದ್ದಿ ಉದಯಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿ ಕೂಡಲೇ
ಸೆ.13 ರಂದು ಕರಿಯ ಮೊಗೇರ ಅವರ ಮನೆಗೆ ಭೇಟಿ ಮಾಡಿದ ಅವರು ಕರಿಯ ಮೊಗೇರ ಅವರ ಪತ್ನಿಗೆ ತನ್ನ ವೈಯಕ್ತಿಕ ವತಿಯಿಂದ ವಸ್ರ್ತಗಳು ಹಾಗೂ ಚಿಕಿತ್ಸೆಗೆ ಸಹಾಯಿಯಾಗಿ ಆರ್ಥಿಕ ಸಹಕಾರದ ಚೆಕ್ ಹಸ್ತಾಂತರಿಸಿದರು.

ಪಂಚಾಯತ್ ಮೂಲಕ ಅವರ ಮನೆಗೆ ನಳ್ಳಿನೀರಿನ‌‌ ಸೌಕರ್ಯವನ್ನೂ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡಿಕೊಡುವುದಾಗಿಯೂ ಅವರು ಈ ವೇಳೆ ಭರವಸೆ ನೀಡಿದರು. ಈ ಸಂದರ್ಭ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಮತ್ತು ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ, ಕರಿಯ‌ ಮುಗೇರ ಬಂಧುಗಳಾದ ಕೇಶವ ಮತ್ತು ಪತ್ನಿ ವೇದಾವತಿ ಉಪಸ್ಥಿತರಿದ್ದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜಿತೇಶ್, ಕಾರ್ಯದರ್ಶಿಯಾಗಿ ರಕ್ಷಿತ್ ಅಂಡಿಂಜೆ ಆಯ್ಕೆ

Suddi Udaya

ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಬಗ್ಗೆ ಬೆಳ್ತಂಗಡಿ ವಲಯದ ಪೂರ್ವಭಾವಿ ಸಭೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಬಿಸಿಎ ವಿಭಾಗದಿಂದ ಎನಿಗ್ಮಾ- 2024

Suddi Udaya

ಏರುತ್ತಿರುವ ತಾಪಮಾನ: ಅಂಗನವಾಡಿ ಕೇಂದ್ರಗಳ ಸಮಯ ಪರಿಷ್ಕರಣೆ- ಬೆಳಗ್ಗೆ 8ರಿಂದ ಮಧ್ಯಾಹ್ನ 12 ರವರೆಗೆ ಕಾರ್ಯ ನಿರ್ವಹಣೆಗೆ ಆದೇಶ

Suddi Udaya

ನಡ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿಯಿಂದ ದಿ. ಕೆ ವಸಂತ ಬಂಗೇರರಿಗೆ ನುಡಿನಮನ

Suddi Udaya

ವಲಯ ಮಟ್ಟದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ: ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!