September 13, 2026
Uncategorized

ಲಾಯಿಲ ಗ್ರಾಮದ ಕರಿಯ ಮೊಗೇರ ಕುಟುಂಬಕ್ಕೆ ಸಾಂತ್ವಾನವಾದ “ಹಿದಾಯ ಫೌಂಡೇಶನ್”

ಬೆಳ್ತಂಗಡಿ: ಮನೆ ಮಂದಿಯೆಲ್ಲರೂ ಬೇರೆ ಬೇರೆ ಅನಾರೋಗ್ಯಗಳಿಗೆ ತುತ್ತಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವ ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಅವರ ಬಗ್ಗೆ ವಿಶೇಷ ವರದಿ ವೀಕ್ಷಿಸಿದ ಜಿಲ್ಲೆಯ ಹೆಮ್ಮೆಯ ಸಮಾಜ ಸೇವಾ ಸಂಸ್ಥೆ “ಹಿದಾಯ ಫೌಂಡೇಶನ್” ತಕ್ಷಣಕ್ಕೆ ಆ ಕುಟುಂಬಕ್ಕೆ ಸ್ಪಂದಿಸಿದೆ.

ಸೆ. 13 ರಂದು ಕರಿಯ ಮೊಗೇರರ ಮನೆಗೆ ಭೇಟಿ ನೀಡಿದ ಸಂಸ್ಥೆಯ
ಅಧ್ಯಕ್ಷ ಲ. ಮುಹಮ್ಮದ್ ಹನೀಫ್ ಗೋಳ್ತಮಜಲು ನೇತೃತ್ವದ ನಿಯೋಗ ಕರಿಯ ಮೊಗೇರ ಅವರಿಗೆ ಅಗತ್ಯ ಬೇಕಾದ ಶೌಚಾಲಯವನ್ನು ನಿರ್ಮಿಸಿಕೊಡುವುದಲ್ಲದೆ ಪ್ರತೀ ತಿಂಗಳು ಬೇಕಾದ ದಿನಸಿ ಸಾಮಾಗ್ರಿ ಕೊಡುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಸಂಸ್ಥೆಯ ಟ್ರಸ್ಟಿ ಬಶೀರ್ ಎಂ.ಎಂ., ಆಹಾರ ವಿಭಾಗದ ಆಸಿಫ್ ಇಕ್ಬಾಲ್, ಸಮಿತಿಯ ಇತರ ಪ್ರಮುಖರಾದ ಇಬ್ರಾಹಿಂ ಕುಂಬಡ ಮಜಲು, ಹೈದರ್ ಫರಂಗಿಪೇಟೆ, ರಫೀಕ್ ಕಲ್ಲಡ್ಕ, ಲಾಯಿಲದ ಶ್ರೀ ಗುರು ಎಂಟರ್ ಪ್ರೈಸಸ್ ಮಾಲಿಕ ಅಶೋಕ್ ಶೆಟ್ಟಿ ಇವರು ಉಪಸ್ಥಿತರಿದ್ದರು.

ಕರಿಯ ಮೊಗೇರ ಅವರ ಮನೆಯ ಈ ದಯನೀಯ ಸ್ಥಿತಿಯ ಬಗ್ಗೆ ಸಮಾಜಕ್ಕೆ ತಿಳುವಳಿಕೆ ಮೂಡಿಸಿದ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಜಿ.ಪಂ ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಅವರ ಕಾರ್ಯವನ್ನು ಸಂಸ್ಥೆ ಈ ಸಂದರ್ಭ ಸ್ಲಾಘಿಸಿತು.

Related posts

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಖಂಡನೆ: ಜಿಲ್ಲಾ ಬಂದ್‌ಗೆ ಹಿಂದೂ ಸಂಘಟನೆಗಳ ಕರೆ : ಬೆಳ್ತಂಗಡಿ ತಾಲೂಕಿನ ಪೇಟೆಗಳಲ್ಲಿ ಭಾಗಶಃ ಅಂಗಡಿ-ಮುಂಗಟ್ಟುಗಳು ಬಂದ್

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ ತಾಲೂಕು ಮಟ್ಟದ ಸಭೆ

Suddi Udaya

ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ತಾಲೂಕು ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

Suddi Udaya

ಕನ್ಯಾಡಿ ಬ್ರಹ್ಮಾನಂದ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ಸೆ .13: ಶ್ರವಣಬೆಳಗೊಳದ ಮಹಾಸ್ವಾಮೀಜಿ ಬೆಳ್ತಂಗಡಿ ಪುರ ಪ್ರವೇಶ

Suddi Udaya

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya
error: Content is protected !!