32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೆಂಟ್ ಅಲ್ಫೋನ್ಸ ಎಸ್ ಎಂ ವೈ ಎಂ ಪ್ರಾಯೋಜಿತ ಅಲ್ಫಾ ಪ್ರಿಮಿಯರ್ ಲೀಗ್

​ನೆಲ್ಯಾಡಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಸೆಂಟ್ ಅಲ್ಫೋನ್ಸಾ ಎಸ್.ಎಂ.ವೈ.ಎಮ್. (SMYM) ನೇತೃತ್ವದಲ್ಲಿ ನಡೆದ ‘ಅಲ್ಫಾ ಪ್ರಿಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಿಳಿನೆಲೆ ಬ್ಲಾಸ್ಟರ್ಸ್ ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

​ಒಟ್ಟು 11 ತಂಡಗಳು ಭಾಗವಹಿಸಿದ್ದ ಈ ಕೂಟದ ಫೈನಲ್ ಹಣಾಹಣಿಯಲ್ಲಿ ಮಂಗಳೂರು ಅದ್ವೈಕ್ ತಂಡದ ವಿರುದ್ಧ ಸೆಣಸಿದ ಬಿಳಿನೆಲೆ ಬ್ಲಾಸ್ಟರ್ಸ್, ಅತ್ಯಂತ ಕುತೂಹಲಕಾರಿಯಾಗಿ ನಡೆದ ಸೂಪರ್ ಓವರ್‌ನಲ್ಲಿ ಎದುರಾಳಿಯನ್ನು ಪರಾಭವಗೊಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.


​ಸಾಮಾಜಿಕ ಕಳಕಳಿ:
ಕೇವಲ ಪಂದ್ಯಾಟಕ್ಕಷ್ಟೇ ಸೀಮಿತವಾಗದೆ, ‘ಕ್ಯಾನ್ಸರ್ ಕೇರ್’ ಯೋಜನೆಯಡಿ ಅಸಹಾಯಕ ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ನೆರವು ನೀಡುವ ಸದುದ್ದೇಶದಿಂದ ಎಸ್.ಎಂ.ವೈ.ಎಮ್. ಈ ಸಮಾಜಮುಖಿ ಕ್ರಿಕೆಟ್ ಕೂಟವನ್ನು ಆಯೋಜಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಳ್ತಂಗಡಿಯ ‘ಕಲ್ಪತರು ಸ್ಕೂಲ್ ಆಫ್ ಎಜುಕೇಶನ್ ಟ್ರಸ್ಟ್ ಪಂದ್ಯಾವಳಿಯ ಪ್ರಥಮ ಬಹುಮಾನ ರೂ. 25,000/- ವನ್ನು ಕೊಟ್ಟು ಸಹಕರಿಸಿದರು. ಎಸ್ ಎಂ ವೈ ಎಂ ಯುವಕರ ಸಾಮಾಜಿಕ ಬದ್ಧತೆಯನ್ನು ವಂದನಿಯ ಫಾ. ಷಾಜಿ ಮಾತ್ಯು ಅಭಿನಂದಿಸಿದರು.

Related posts

ಶಿಬಾಜೆ ಶಾಲಾ ಮಕ್ಕಳಿಗೆ ಓಣಂ ಪ್ರಯುಕ್ತ ಓಣಂ ಭೋಜನ

Suddi Udaya

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಮೊದಲ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Suddi Udaya

ಕರಾಯ ಶ್ರೀ ಕೃಷ್ಣ ಭಜನಾಮಂದಿರದಲ್ಲಿ ಕುಣಿತ ಭಜನಾ ತರಬೇತಿ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಎಲ್ ಐ ಸಿ ನಿವೃತ್ತ ಎಂ.ಡಿ. ಸುಶೀಲ್ ಕುಮಾರ್ ಭೇಟಿ

Suddi Udaya

ಚಿತ್ರಕಲಾ ಸ್ಪರ್ಧೆ: ಬೆಳ್ತಂಗಡಿ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆರಾಧ್ಯ ಪ್ರಥಮ ಸ್ಥಾನ

Suddi Udaya

ಬಜಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

Suddi Udaya
error: Content is protected !!