ಗುರುವಾಯನಕೆರೆ: ಬೆಳ್ತಂಗಡಿ ತಾಲೂಕಿನಲ್ಲಿ ಪ್ರಖ್ಯಾತಿಯನ್ನು ಪಡೆದ ಬೆಳ್ತಂಗಡಿಯ ಸುವರ್ಣ ಸ್ಟುಡಿಯೋ ಮಾಲಕ ಪಾಲಾಕ್ಷ ಸುವರ್ಣ ಅವರು ಗುರುವಾಯನಕೆರೆ ಶಾಲಾ ಬಳಿಯ ತಮ್ಮ ಮನೆಯ ಸಮೀಪ ನೂತನವಾಗಿ ನಿರ್ಮಿಸಿದ ‘ಸುವರ್ಣ ಕಾಂಪ್ಲೇಕ್ಸ್’ ಹಾಗೂ ‘ಸುವರ್ಣ ಸ್ಟುಡಿಯೋ’ ಇದರ ಪ್ರಾರಂಭೋತ್ಸವವು ಸೆ.13ರಂದು ನಡೆಯಿತು.

ನೂತನ ಸುವರ್ಣ ಕಾಂಪ್ಲೇಕ್ಸ್ ಹಾಗೂ ಸುವರ್ಣ ಸ್ಟುಡಿಯೋವನ್ನು ಹಿರಿಯರಾದ ಪಾಲಾಕ್ಷ ಸುವರ್ಣ ಅವರ ಮಾತೃಶ್ರೀ ಶ್ರೀಮತಿ ನಾರಾಯಣಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಆಶೀರ್ವದಿಸಿದರು. ನಿವೃತ್ತ ಅಧಿಕಾರಿ ವಸಂತ ಸುವರ್ಣ ಲಾಯಿಲ, ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರವಿ ನಾರಾವಿ, ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್.ಕುಲಾಲ್, ಪದ್ಮನಾಭ ಸುವರ್ಣ ಮಡಂತ್ಯಾರು ನೂತನ ಸಂಸ್ಥೆಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಶ್ರೀಮತಿ ಜಾಜೀವಿ, ಸರೋಜಿನಿ ಬಳ್ಳಮಂಜ, ರಾಘವ ಸುವರ್ಣ ಉಜಿರೆ, ಶ್ರೀಮತಿ ವಾರಿಜ ಲಾಯಿಲ, ಹರೀಶ್ ಮಂಗಳೂರು, ಪ್ರಸನ್ನ ಶಕ್ತಿನಗರ, ದೀಪಕ್ ಸುರತ್ಕಲ್, ತಿಮ್ಮಪ್ಪ ಕಾಫಿನಡ್ಕ, ಗಿರೀಶ್ ಸುವರ್ಣ, ಛಾಯಾಗ್ರಾಹಕರಾದ ಗೋಪಾಲ್ ಅಳದಂಗಡಿ, ರತ್ನಕರ್ ಪುಂಜಾಲಕಟ್ಟೆ, ಉಮೇಶ್ ಉಜಿರೆ, ಹರ್ಷ ಬಳ್ಳಮಂಜ, ಪ್ರಭಾಕರ ಪುಂಜಾಲಕಟ್ಟೆ, ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.
ಸೆ.12ರಂದು ರಾತ್ರಿ ಸುವರ್ಣ ಕಾಂಪ್ಲೇಕ್ಸ್ನಲ್ಲಿ ವಾಸ್ತು ಹೋಮ, ಸುದರ್ಶನ ಹೋಮ ಹಾಗೂ ಸೆ.13 ರಂದು ಬೆಳಿಗ್ಗೆ ಗಣಹೋಮ ಮೊದಲಾದ ಧಾರ್ಮಿಕ ವಿಧಿಗಳು ನಡೆಯಿತು. ಸಂಸ್ಥೆಯ ಮಾಲಕ ಪಾಲಾಕ್ಷ ಸುವರ್ಣ ಹಾಗೂ ಶ್ರೀಮತಿ ವಿಜಯಲಕ್ಷ್ಮೀ ಅವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು. ಮದ್ದಡ್ಕ ಮನು ಸ್ಟುಡಿಯೋ ಮಾಲಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಪಾಲಾಕ್ಷ ಸುವರ್ಣ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.











