32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯ ಸುವರ್ಣ ಸ್ಟುಡಿಯೋ ಮಾಲಕ ಪಾಲಾಕ್ಷ ಸುವರ್ಣ ಮಾಲಕತ್ವದಲ್ಲಿ ಗುರುವಾಯನಕೆರೆಯಲ್ಲಿ ‘ಸುವರ್ಣ ಕಾಂಪ್ಲೇಕ್ಸ್’ ಹಾಗೂ ‘ಸುವರ್ಣ ಸ್ಟುಡಿಯೋ’ ಉದ್ಘಾಟನೆ

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕಿನಲ್ಲಿ ಪ್ರಖ್ಯಾತಿಯನ್ನು ಪಡೆದ ಬೆಳ್ತಂಗಡಿಯ ಸುವರ್ಣ ಸ್ಟುಡಿಯೋ ಮಾಲಕ ಪಾಲಾಕ್ಷ ಸುವರ್ಣ ಅವರು ಗುರುವಾಯನಕೆರೆ ಶಾಲಾ ಬಳಿಯ ತಮ್ಮ ಮನೆಯ ಸಮೀಪ ನೂತನವಾಗಿ ನಿರ್ಮಿಸಿದ ‘ಸುವರ್ಣ ಕಾಂಪ್ಲೇಕ್ಸ್’ ಹಾಗೂ ‘ಸುವರ್ಣ ಸ್ಟುಡಿಯೋ’ ಇದರ ಪ್ರಾರಂಭೋತ್ಸವವು ಸೆ.13ರಂದು ನಡೆಯಿತು.

ನೂತನ ಸುವರ್ಣ ಕಾಂಪ್ಲೇಕ್ಸ್ ಹಾಗೂ ಸುವರ್ಣ ಸ್ಟುಡಿಯೋವನ್ನು ಹಿರಿಯರಾದ ಪಾಲಾಕ್ಷ ಸುವರ್ಣ ಅವರ ಮಾತೃಶ್ರೀ ಶ್ರೀಮತಿ ನಾರಾಯಣಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಆಶೀರ್ವದಿಸಿದರು. ನಿವೃತ್ತ ಅಧಿಕಾರಿ ವಸಂತ ಸುವರ್ಣ ಲಾಯಿಲ, ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರವಿ ನಾರಾವಿ, ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್.ಕುಲಾಲ್, ಪದ್ಮನಾಭ ಸುವರ್ಣ ಮಡಂತ್ಯಾರು ನೂತನ ಸಂಸ್ಥೆಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಶ್ರೀಮತಿ ಜಾಜೀವಿ, ಸರೋಜಿನಿ ಬಳ್ಳಮಂಜ, ರಾಘವ ಸುವರ್ಣ ಉಜಿರೆ, ಶ್ರೀಮತಿ ವಾರಿಜ ಲಾಯಿಲ, ಹರೀಶ್ ಮಂಗಳೂರು, ಪ್ರಸನ್ನ ಶಕ್ತಿನಗರ, ದೀಪಕ್ ಸುರತ್ಕಲ್, ತಿಮ್ಮಪ್ಪ ಕಾಫಿನಡ್ಕ, ಗಿರೀಶ್ ಸುವರ್ಣ, ಛಾಯಾಗ್ರಾಹಕರಾದ ಗೋಪಾಲ್ ಅಳದಂಗಡಿ, ರತ್ನಕರ್ ಪುಂಜಾಲಕಟ್ಟೆ, ಉಮೇಶ್ ಉಜಿರೆ, ಹರ್ಷ ಬಳ್ಳಮಂಜ, ಪ್ರಭಾಕರ ಪುಂಜಾಲಕಟ್ಟೆ, ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.


ಸೆ.12ರಂದು ರಾತ್ರಿ ಸುವರ್ಣ ಕಾಂಪ್ಲೇಕ್ಸ್‌ನಲ್ಲಿ ವಾಸ್ತು ಹೋಮ, ಸುದರ್ಶನ ಹೋಮ ಹಾಗೂ ಸೆ.13 ರಂದು ಬೆಳಿಗ್ಗೆ ಗಣಹೋಮ ಮೊದಲಾದ ಧಾರ್ಮಿಕ ವಿಧಿಗಳು ನಡೆಯಿತು. ಸಂಸ್ಥೆಯ ಮಾಲಕ ಪಾಲಾಕ್ಷ ಸುವರ್ಣ ಹಾಗೂ ಶ್ರೀಮತಿ ವಿಜಯಲಕ್ಷ್ಮೀ ಅವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು. ಮದ್ದಡ್ಕ ಮನು ಸ್ಟುಡಿಯೋ ಮಾಲಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಪಾಲಾಕ್ಷ ಸುವರ್ಣ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Related posts

ಅರಸಿನಮಕ್ಕಿ: ವೀಸಾ ಕೊಡಿಸುವುದಾಗಿ ನಂಬಿಸಿ ರೂ. 2.50 ಲಕ್ಷ ವಂಚನೆ-ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಸಂಗೀತ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾನ್ವಿ ಪೂಜಾರಿ ಮಡಂತ್ಯಾರು ಆಯ್ಕೆ

Suddi Udaya

ಸೇವಾ ನಿವೃತ್ತಿಗೊಳ್ಳುತ್ತಿರುವ ಕಳಿಯ ಪ್ರಾ.ಕೃ.ಪ.ಸ.ಸಂಘದ ಮಾರಾಟ ಸಹಾಯಕ ಶಿವರಾಮ್ ನಾಯ್ಕ್ ರಿಗೆ ಬೀಳ್ಕೊಡುಗೆ

Suddi Udaya

ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

Suddi Udaya

ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಿಂದ ಈದ್ ಮಿಲಾದ್ ರ್‍ಯಾಲಿ

Suddi Udaya

ಬಂಗ್ವಾಡಿ ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ಮಹಾರಥೋತ್ಸವ: ಧ್ವಜಾರೋಹಣ

Suddi Udaya
error: Content is protected !!