ಬೆಳ್ತಂಗಡಿ: ಅರುಣೋದಯ ಭಜನಾ ಮಂದಿರ ಬಡೆಕೊಟ್ಟು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ನಡೆದ ಸಮಾರಂಭದಲ್ಲಿ ಅರುಣೋದಯ ಕುಣಿತ ಭಜನಾ ಮಂಡಳಿಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ವಿದ್ಯಾರ್ಥಿವೇತನ ನೀಡಲಾಯಿತು.
ವಿಷ್ಣುಮೂರ್ತಿ ದೇವಸ್ಥಾನ ಇಳಿಯೂರು ಇದರ ಅರ್ಚಕರಾದ ಸುಧೀಂದ್ರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.. ಭಜನಾ ಮಂದಿರದ ಅಧ್ಯಕ್ಷ ಲೋಕೇಶ್ ಅಗಚ್ಚರಿ ಕೊಡಿ ಅಧ್ಯಕ್ಷತೆಯನ್ನು ವಹಿಸಿದರು. ಭಜನಾ ಮಂಡಳಿಯ ವಿದ್ಯಾರ್ಥಿಗಳಿಗೆ ಭಜನಾ ತಂಡದ ಗುರುಗಳಾದ ಸಂದೇಶ್ ಮದ್ದಡ್ಕ ಇವರು ಸಮವಸ್ತ್ರವನ್ನು ವಿತರಿಸಿದರು.
ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷ ಕೇಶವ ಪೂಜಾರಿ ಮಜಲು ವಿದ್ಯಾರ್ಥಿ ವೇತನವನ್ನು ವಿತರಿಸಿದರು. ವೇದಿಕೆಯಲ್ಲಿ
ಮಣಿನಾಲ್ಕೂರು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕಟದಡೆ, ಭಜನಾ ಗುರುಗಳಾದ ಆಕಾಶ್, ಗುರುವಾಯನಕೆರೆ ಹಿರಿಯರಾದ ವಾಸು ಪೂಜಾರಿ ಮಜಲು, ಮಹಿಳಾ ಮಂಡಳದ ಅಧ್ಯಕ್ಷೆ ಚಂದ್ರಿಕಾ ಮಜಲು ರಾಮ ನಲ್ಕೆ, ಭಜನಾ ಮಂಡಳಿಯ ಮೇಲುಸ್ತುವಾರಿಯಾದ ಹೊನ್ನಪ್ಪ ಪೂಜಾರಿ ಮುದಲಾಡಿ, ಸವಿತಾ ಬಾರೈತಿಯಾರು, ಆಶಾ ಬತ್ತನಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೀತಾ ಬತ್ತನಾಡಿ ನಿರೂಪಿಸಿದರು.











