September 6, 2026
ಗ್ರಾಮಾಂತರ ಸುದ್ದಿ

ಎತ್ತರದ ಸ್ಥಾನಲ್ಲಿ ಕೂರುವಂತೆ ಮಾಡುತ್ತೇನೆ
ಶಾಸಕ ಹರೀಶ್ ಪೂಂಜರಿಗೆ ದೈವದ ಅಭಯ

ಉಜಿರೆ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರಿಗೆ ರಾಜನ್ ದೈವ ಜುಮಾದಿ ಬಂಟ ನೀಡಿರುವ ಅಭಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಉಜಿರೆ ಗ್ರಾಮ ಪಂಚಾಯತ್‌ಉಪಾಧ್ಯಕ್ಷ ರವಿಕುಮಾರ್ ಬರೆಮೇಲುರವರ ಮನೆಯಲ್ಲಿ ಜ.6ರಂದು ನಡೆದ ಧರ್ಮ ದೈವಗಳ ನೇಮೋತ್ಸವದ ವೇಳೆ ರಾಜನ್ ದೈವ ಜುಮಾದಿ ಬಂಟನ ನುಡಿಕಟ್ಟಿನ ವೇಳೆ ಶಾಸಕ ಹರೀಶ್ ಪೂಂಜ ಆಗಮಿಸಿದ್ದರು. ಈ ವೇಳೆ ಪ್ರಸಾದ ನೀಡುವಾಗ ಊರಿನ ಅರಸ ಅಂತ ಶಾಸಕರನ್ನು ಸಂಬೋಧಿಸಿದ ದೈವ ಪಟ್ಟದಲ್ಲಿ ಕೂರಿಸಿದ್ದೇನೆ,ಇದ್ರಿಂದ ಕೆಳಗೆ ಇಳಿಯಲು ಬಿಡುವುದಿಲ್ಲ, ಇನ್ನೂ ಎತ್ತರದ ಸ್ಥಾನಲ್ಲಿ ಕೂರುವಂತೆ ಮಾಡುತ್ತೇನೆಂದು ಅಭಯ ನೀಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೈವದ ಅಭಯದ ನುಡಿ:
ನೆನಪಂದೆ ಪಟ್ಟೊಡು ಕುಲ್ಲದೆ,ಉಂದೆನ್ ನನ ತಿರ್ತ್ ಜಪ್ಪರೆ ಬುಡ್ಪುಜಿ. ಈ ಕಾಲೋಗು ಕಂಬುಲಗ್ ಜೈದರ್ ಮಂಜೊಟ್ಟಿಗ್ ಯಾನ್ ಎತ್ತವೆ. ಮಂಜೋಟ್ಟಿಗ್ ಎತ್ತದ್ ಇತ್ತೆ ಕುಲ್ದುನ ಸ್ಥಾನಮಾನೋರ್ದು ಏರಿಕೆದ ಸ್ಥಾನಡ್ ಕುಲ್ಲದ್, ಮೂಡಾಯಿ ಕ್ಷೇತ್ರೋಗು ಬೋಡಾಪುನ ಅರಸುಂದ್ ಪನ್ಪವೆ.
(ಹಿಂದಿನ ಬಾರಿ ಪಟ್ಟದಲ್ಲಿ ಕೂರಿಸಿದ್ದೇನೆ,ಇಲ್ಲಿಂದ ಕೆಳಗೆ ಇಳಿಯಲು ನಾನು ಬಿಡುವುದಿಲ್ಲ.ಈ ಸಲ ಮತ್ತೆ ಕಂಬಳಕ್ಕೆ ಇಳಿದಿದ್ದೀರಿ, ಮಂಜೊಟ್ಟಿಗೆ (ಕಂಬಳ ಕೋಣ ಗುರಿ ಮುಟ್ಟುವ ಸ್ಥಳ)ನಾನು ತಲುಪಿಸುತ್ತೇನೆ. ಅಷ್ಟೇ ಅಲ್ಲ ಈಗಿರುವ ಸ್ಥಾನಕ್ಕಿಂತ ಮೇಲಿನ ಸ್ಥಾನದಲ್ಲಿ ಕುಳ್ಳಿರಿಸಿ, ಮೂಡಾಯಿ ಕ್ಷೇತ್ರಕ್ಕೆ ಬೇಕೇ ಬೇಕಾದ ಅರಸ ಅಂತ ಹೇಳಿಸುತ್ತೇನೆ )
ಎಂದು ದೈವ ನೀಡಿದ ಅಭಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Related posts

ಬೆಳ್ತಂಗಡಿ: ಸಂಜೀವಿನಿ ಸಂಘಗಳಿಗೆ ರೂ.1.03 ಕೋಟಿ ಬ್ಯಾಂಕ್ ಸಾಲ ವಿತರಣೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯ ಬಾಲಕ ಬಾಲಕಿಯರ ನೂತನ ಶೌಚಾಲಯದ ಹಸ್ತಾಂತರ

Suddi Udaya

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿರುದ್ದದ ಪ್ರಕರಣ ಹೈಕೋರ್ಟ್‌ನಲ್ಲಿ ವಜಾ

Suddi Udaya

ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಮೀನು ಮಂಜೂರುಗೊಳಿಸಲು ಸಚಿವ ಸಂಪುಟ ಅನುಮೋದನೆ

Suddi Udaya

ಸ್ಪಂದನಾ ಲಯನ್ಸ್ ಪ್ರಾಂತೀಯ ಸಮ್ಮೇಳನ–2026 : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಾರಾವಿ: ಮರಕ್ಕೆ ಡಿಕ್ಕಿ ಹೊಡೆದ ಬೈಕ್ – ಇಬ್ಬರು ಸ್ಥಳದಲ್ಲಿಯೇ ಸಾವು

Suddi Udaya
error: Content is protected !!