25.5 C
ಪುತ್ತೂರು, ಬೆಳ್ತಂಗಡಿ
June 8, 2026
ತಾಲೂಕು ಸುದ್ದಿಸಾಧಕರು

ಬೆಳ್ತಂಗಡಿ ಶ್ರೀ ಸೋಮನಾಥೇಶ್ವರ ಬಯಲಾಟ ಸೇವಾ ಸಮಿತಿ

ಅಧ್ಯಕ್ಷ ಪೃಥ್ವಿರಂಜನ್‌ ರಾವ್‌, ಪ್ರಧಾನ ಕಾಯ೯ದಶಿ೯ ಹೆಚ್‌. ಪದ್ಮಕುಮಾರ್‌

ಬೆಳ್ತಂಗಡಿ: ಶ್ರೀ ಸೋಮನಾಥೇಶ್ವರ ಬಯಲಾಟ ಸೇವಾ ಸಮಿತಿಯ ಸಭೆಯು ಬೆಳ್ತಂಗಡಿ ಜೇಸಿ ಭವನದಲ್ಲಿ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಫೆ.12ರಂದು ಜರುಗಿತು.
ಕಾಯ೯ದಶಿ೯ ಸುರೇಂದ್ರ ಬಂಗೇರ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ಹೆಚ್‌. ಪದ್ಮಕುಮಾರ್‌2022ನೇ ಸಾಲಿನ 35ನೇ ವಷ೯ದ ಶ್ರೀ ಧಮ೯ಸ್ಥಳ ಮೇಳದ ಯಕ್ಷಗಾನ ಬಯಲಾಟದ ಖಚು೯-ವೆಚ್ಚದ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. ಲೆಕ್ಕಪತ್ರವನ್ನು ಸವಾ೯ನುಮತದಿಂದ ಮಂಜೂರು ಮಾಡಲಾಯಿತು. ಈ ಸಂದಭ೯ದಲ್ಲಿ 2023ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪೃಥ್ವಿರಂಜನ್‌ ರಾವ್‌ ಅಧ್ಯಕ್ಷರು, ಸತೀಶ್‌ ಆಚಾರ್‌ ಉಪಾಧ್ಯಕ್ಷರು, ಹೆಚ್‌. ಪದ್ಮಕುಮಾರ್‌ ಪ್ರಧಾನ ಕಾಯ೯ದಶಿ೯, ಸುರೇಂದ್ರ ಬಂಗೇರ ಕೋಶಾಧಿಕಾರಿ, ಸುರೇಶ್‌ ಶೆಟ್ಟಿ ಜೊತ್ ಕಾಯ೯ದಶಿ೯, ಸಲಹಾ ಸಮಿತಿ ಸದಸ್ಯರಾಗಿ ವಿಠಲ ಶೆಟ್ಟಿ, ಸುಬ್ರಹ್ಮಣ್ಯ ಕುಮಾರ್‌, ಕಮಲಾಕ್ಷ ಆಚಾರ್‌, ರಂಜಿತ್‌ ಬೆಳ್ತಂಗಡಿ, ವಿವೇಕಾನಂದ ಪ್ರಭು ಮೂಜೆ೯, ಗೋಪಾಲ ರಾವ್‌, ಪ್ರಶಾಂತ್‌, ಅನಂತಕೃಷ್ಣ, ಗಣೇಶ್‌ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ನೂತನ ಕಾಯ೯ದಶಿ೯ ಪದ್ಮಕುಮಾರ್‌ ವಂದಿಸಿದರು.

Related posts

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್

Suddi Udaya

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಗಣೇಶ್ ಕನ್ನಾಜೆ ಆಯ್ಕೆ

Suddi Udaya

ಮಚ್ಚಿನ: ಎ.30-ಮೇ.03, ತರವಾಡು ಮನೆಯ ಗೃಹಪ್ರವೇಶ ಹಾಗೂ ದೈವ ದೇವರುಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya

ಎಕ್ಸೆಲ್ ನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಒರಿಯಂಟೇಶನ್

Suddi Udaya

ಆರಂಬೋಡಿ : ಪಿಲ್ಲಂಬುಗೋಳಿ ಕಾಂತರಬೆಟ್ಟು ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮ ಪಂಚಾಯತ್ ಗೆ ಮನವಿ

Suddi Udaya

ಡಿ.17: ಕರಾಯ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!