September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಎಸ್. ಎಮ್ .ಎ. ಉಜಿರೆ ರೀಜಿನಲ್ ವತಿಯಿಂದ ರಂಝನ್ ಕಿಟ್ ವಿತರಣೆ

ಬೆಳ್ತಂಗಡಿ; ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ (ಎಸ್‌ಎಮ್‌ಎ) ಉಜಿರೆ ರೀಜಿನಲ್ ಸಮಿತಿಯ ವತಿಯಿಂದ19 ಮೊಹಲ್ಲಾಗಳ ಧರ್ಮಗುರುಗಳಿಗೆ ರಂಝಾನ್ ಸ್ಪೆಷಲ್ ಕಿಟ್ ವಿತರಣೆ ಹಾಗೂ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆ‌ಎಮ್) ಉಜಿರೆ ರೇಂಜ್ ಜಲ್ಸತುಲ್ ವಿದಾಅ್ ಕಾರ್ಯಕ್ರಮ ಉಜಿರೆಯಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಎಸ್‌ಎಮ್‌ಎ ಉಜಿರೆ ರೀಜಿನಲ್ ಅಧ್ಯಕ್ಷ ಮುಹ್ಯುದ್ದೀನ್ ವಹಿಸಿದ್ದರು. ರೇಂಜ್ ಕೋಶಾಧಿಕಾರಿ ಖಾಲಿದ್‌ ಮುಸ್ಲಿಯಾರ್ ಕುಂಟಿನಿ ಉದ್ಘಾಟಿಸಿದರು. ಎಸ್‌ಎಮ್‌ಎ ಕೋಶಾಧಿಕಾರಿ ಹನೀಫ್ ಮುಸ್ಲಿಯಾರ್ ಶುಭಾಶಯ ಕೋರಿದರು.
ಝೋನ್ ಅಧ್ಯಕ್ಷ ಹಮೀದ್ ನೆಕ್ಕರೆ ಮುಂಡಾಜೆ, ಎಸ್‌ಜೆಎಮ್ ರೇಂಜ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕಬಕ, ಹೈದರ್ ಮದನಿ, ಇಬ್ರಾಹಿಂ ಅತ್ತಾಜೆ‌, ಯೂಸುಫ್ ಕುಂಟಿನಿ ಇವರು ವೇದಿಕೆಯಲ್ಲಿದ್ದರು.

ಉಜಿರೆ ರೀಜಿನಲ್ ವ್ಯಾಪ್ತಿಯ 19 ಮೊಹಲ್ಲಾಗಳ 42 ಮಂದಿಗೆ ಕಿಟ್ ಹಸ್ತಾಂತರಿಸಲಾಯಿತು.
ಎಸ್‌ಎಮ್‌ಎ ರೀಜನಲ್ ಪ್ರಧಾನ ಕಾರ್ಯದರ್ಶಿ
ಅಬ್ದುಲ್ ಜಲೀಲ್ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ‌ ನಿರೂಪಿಸಿದರು.
ಅಶ್ರಫ್ ಹಿಮಮಿ ಧನ್ಯವಾದವಿತ್ತರು.

Related posts

ಫೆ.19-24: ಉಜಿರೆಯಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya

ಉಜಿರೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಗೃಹಲಕ್ಷ್ಮೀ ಯೋಜನೆ: ಬ್ಯಾಂಕ್‌ಖಾತೆಗೆ ಆಧಾರ್ ಜೋಡಣೆ ಪರಿಶೀಲನೆ ; ಕೊಕ್ಕಡ ಗ್ರಾ.ಪಂದಲ್ಲಿ ನಡೆದ ಕಾರ್ಯಕ್ರಮದ ಮಾಹಿತಿ ನೀಡದಿರುವುದನ್ನು ವಿರೋಧಿಸಿ, ಪಂಚಾಯತು ಎದುರು ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರ ಪ್ರತಿಭಟನೆ

Suddi Udaya

ಆರಂಬೋಡಿಯಲ್ಲಿ ಬೃಹತ್ ಮೀಲಾದ್ ಜಾಥಾ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಹೊಕ್ಕಾಡಿಗೋಳಿ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಹೆಗ್ಡೆ ಮೆಡಿಕಲ್ ವತಿಯಿಂದ ಆರ್ಥಿಕ ಸಂಕಷ್ಟಗೊಳಗಾದವರಿಗೆ ಉಚಿತ ಔಷಧಿ

Suddi Udaya
error: Content is protected !!