22.6 C
ಪುತ್ತೂರು, ಬೆಳ್ತಂಗಡಿ
July 23, 2026
ಪ್ರಮುಖ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸರ್ಕಾರಿ ಇಲಾಖಾ ಸುದ್ದಿ

ಅಂಚೆ ಕಛೇರಿ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಏರಿಕೆ

ಏಪ್ರಿಲ್-ಜೂನ್ ತ್ರೈಮಾಸಿಕ ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೇ.0.7 ರವರೆಗೆ ಏರಿಸಿ ಕೇಂದ್ರ ಸರಕಾರ ಮಾ.31 ರಂದು ಆದೇಶ ಹೊರಡಿಸಿದೆ.

ಪಿಪಿಎಫ್ ಮತ್ತು ಉಳಿತಾಯ ಠೇವಣಿಗಳ ಬಡ್ಡಿಯನ್ನು ಶೇ.7.1 ಹಾಗೂ ಶೇ.4ರಲ್ಲೇ ಉಳಿಸಿಕೊಳ್ಳಲಾಗಿದೆ. ಇತರ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಶೇ.0.1 ರಿಂದ ಶೇ. 0.7 ರವರೆಗೆ ಏರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಏ.1 ರಿಂದ ಜೂ.30 ರವರೆಗೆ ಈ ಏರಿಕೆಗಳು ಅನ್ವಯವಾಗಿತ್ತದೆ. ರಾಷ್ಟ್ರೀಯ ುಳಿತಾಯ ಸರ್ಟಿಫಿಕೆಟ್ (ಎನ್ ಎಸ್ ಸಿ) ಬಡ್ಡಿಯನ್ನು ಈಗಿನ ಶೇ.7 ರಿಂದ ಶೇ.7.5 ಕ್ಕೆ ಏರಿಸಲಾಗಿದೆ. ಬಡ್ಡಿ ದರಗಳನ್ನು 3 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವುದು.

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ಶೇ.7.6 ರಿಂದ ಶೇ.8ಕ್ಕೆ ಏರಿದೆ. ಹಿರಿಯ ನಾಗರಿಕರ ಉಳಿತಾಯ ಬಡ್ಡಿ ದರ ಶೇ.8 ರಿಂದ ಶೇ.8.2 ಮತ್ತು ಕಿಸಾನ್ ವಿಕಾಸದ ಪತ್ರದ ಮೇಲಿನ ಬಡ್ಡಿ ಶೇ.7.2 ರಿಂದ ಶೇ.7.6ಕ್ಕೆ ಏರಿಕೆಯಾಗಿದೆ.

Related posts

ಬೆಳ್ತಂಗಡಿ ಪ್ರಾ.ಸ.ಕೃಷಿ ಮತ್ತು ಗ್ರಾ. ಅಭಿವೃದ್ಧಿ ಬ್ಯಾಂಕ್ ನ ವ್ಯವಸ್ಥಾಪಕರಾದ ಕೆ. ಗಿರಿಧರರಿಗೆ ಬೀಳ್ಕೊಡುಗೆ

Suddi Udaya

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ : ಸಿಬಿಐ ಮೇಲ್ಮನವಿ

Suddi Udaya

ಕಳೆಂಜ ಸರ್ವೆ ನಂ. 309ರ ಅರಣ್ಯ ಇಲಾಖೆಯ ಜಂಟಿ ಸರ್ವೇಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳ ಸಭೆ

Suddi Udaya

ದಕ್ಷಿಣ ಕನ್ನಡ: ಬೆಳ್ತಂಗಡಿ ಸೇರಿದಂತೆ 5 ತಾಲೂಕುಗಳಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ

Suddi Udaya

ಉಜಿರೆ ಪ್ರಾಥಮಿಕ ಸಹಕಾರಿ ಸಂಘದ ಚುನಾವಣೆ: ಬಿಜೆಪಿ 7 – ಕಾಂಗ್ರೆಸ್ 5, ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya
error: Content is protected !!