25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿ

ಬೆಳಾಲು: ಕೊಯ್ಯೂರು ಅರಣ್ಯದಲ್ಲಿ ಬೆಂಕಿ

ಬೆಳಾಲು ಗ್ರಾಮದ ಕೊಯ್ಯೂರು ಅರಣ್ಯದ ಪೆರಿಯಡ್ಕ ಪ್ರದೇಶದಲ್ಲಿ ಭಾನುವಾರ ಬೆಂಕಿ ಪ್ರಕರಣ ಉಂಟಾಗಿದ್ದು ಸುಮಾರು ಎರಡು ಎಕರೆ ಪ್ರದೇಶದ ವನ್ಯ ಸಂಪತ್ತಿಗೆ ಹಾನಿ ಉಂಟಾಗಿದೆ.
ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ಕಣಿಯೂರು ಉಪವಲಯ ವ್ಯಾಪ್ತಿಯ ಈ ಕಾಡಿನಲ್ಲಿ ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂದು ತಿಳಿದುಬಂದಿಲ್ಲ.


ಡಿ ಆರ್ ಎಫ್ ಒ ಲೋಕೇಶ್ ,ಗಸ್ತು ಅರಣ್ಯ ಪಾಲಕ ವಿನಯ ಚಂದ್ರ, ಶೌರ್ಯ ವಿಪತ್ತು ತಂಡಗಳ ಸದಸ್ಯರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತಂದರು.
ಮುಂಡಾಜೆ-ಧರ್ಮಸ್ಥಳ ಅರಣ್ಯದ ಅಲ್ಲಲ್ಲಿ ಬೆಂಕಿ.
ಮುಂಡಾಜೆ-ಧರ್ಮಸ್ಥಳ ಮೀಸಲು ಅರಣ್ಯದ ನೇರ್ತನೆ, ಎಕ್ಕೆಲ, ಕೋಟಿ ಹಿತ್ತಿಲು ಮೊದಲಾದ ಪ್ರದೇಶಗಳಲ್ಲಿ ಅರಣ್ಯದಲ್ಲಿ ಬೆಂಕಿ ಉಂಟಾಗಿದ್ದು ಅದು ಒಂದಿಷ್ಟು ಹತೋಟಿಗೆ ಬರುತ್ತಿದ್ದಂತೆ ಮುಂಡ್ರುಪಾಡಿ, ಫಿಲತಡ್ಕ ಮೊದಲಾದ ಪ್ರದೇಶಗಳಲ್ಲಿ ಬೆಂಕಿ ಹರಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಅನೇಕ ಮಂದಿ ಸೇರಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.ಬೆಂಕಿ ಒಂದೆಡೆ ಹತೋಟಿಗೆ ಬರುತ್ತಿದ್ದಂತೆ ಇನ್ನೊಂದೆಡೆಯಿಂದ ಆವರಿಸುತ್ತಿದೆ. ಭಾರಿ ಬಿಸಿಲಿನ ವಾತಾವರಣ ಕಾರ್ಯಾಚರಣೆಗೆ ಅಡ್ಡಿ ನೀಡುತ್ತಿದೆ.
ಬೆಂಕಿಗೆ ಕಾರಣ.


ಕಾಡಿನಿಂದ ಕಟ್ಟಿಗೆ, ತರಗೆಲೆ ಇತ್ಯಾದಿ ಸಂಗ್ರಹಿಸಲು ಹೋಗುವ ಮಂದಿ ಒಣ ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಬೆಂಕಿ ಪ್ರಕರಣಗಳು ಉಂಟಾಗುತ್ತಿವೆ ಎಂಬ ಕೆ ವ್ಯಕ್ತವಾಗಿದೆ. ಕಾಡುಪ್ರಾಣಿಗಳನ್ನು ಓಡಿಸಲು ಅರಣ್ಯ ಪ್ರದೇಶಗಳಿಗೆ ಬೆಂಕಿ ಹಚ್ಚುವವರು ಇದ್ದಾರೆ. ಇದೀಗ ಕಾಡು ಜೇನು ಸಂಗ್ರಹದ ಸಮಯವಾಗಿದ್ದು ಜೇನು ನೊಣಗಳನ್ನು ಓಡಿಸಲು ಹೊಗೆ ಹಾಕಿ ಬಳಿಕ ಬೆಂಕಿಯನ್ನು ಆರಿಸದೆ ವಾಪಸ್ ಆಗುವವರು ಇದ್ದಾರೆ ಇವರೆಲ್ಲರ ಜತೆ ಕಿಡಿಗೇಡಿಗಳು ಕೆಲವೊಂದು ಪ್ರಕರಣಗಳಿಗೆ ಕಾರಣವಾಗುತ್ತಿದ್ದಾರೆ.

Related posts

ಬಂಗ್ವಾಡಿ ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ಮಹಾರಥೋತ್ಸವ: ಧ್ವಜಾರೋಹಣ

Suddi Udaya

ಕಲಾಯಿತೊಟ್ಟು: ನಾಗರ ಪಂಚಮಿ ಪ್ರಯುಕ್ತ ನಾಗದೇವರ ಕಟ್ಟೆಯಲ್ಲಿ ಹಾಲಾಭಿಷೇಕ, ಪರ್ವ ಸೇವೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಧರ್ಮಸ್ಥಳ ಸಿಎ ಬ್ಯಾಂಕಿಗೆ ಸತತ 3 ನೇ ಬಾರಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಗುತ್ತಿನಬೈಲು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಶಿರ್ಲಾಲು ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಸ.ಕಿ.ಪ್ರಾ. ಶಾಲೆಯಲ್ಲಿ ಜನಗಣಮನ ಬರವಣಿಗೆ ಸ್ಪರ್ಧೆ

Suddi Udaya
error: Content is protected !!