22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬಳಂಜದಲ್ಲಿ ಪುರುಷರ ರಾಶಿ ಪೂಜೆ: ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿ

ಬಳಂಜ: ತುಳುನಾಡಿನ ಧಾರ್ಮಿಕ ಅಚರಣೆಗಳೊಂದಾದ ಪುರ್ಸರ ರಾಶಿ ಪೂಜೆಯು ಬಳಂಜ ದೇವಸ್ಥಾನದ ಬಳಿ ಅದ್ದೂರಿಯಿಂದ ಮತ್ತು ಅರ್ಥಪೂರ್ಣವಾಗಿ ನಡೆಯಿತು.
ಬಳಂಜ ಜೋಗಿ ಪುರುಷ ಭಕ್ತವೃಂದದ ನೇತೃತ್ವದಲ್ಲಿ ಗ್ರಾಮದ ಮಕ್ಕಳು, ಯುವಕರು ಹಿರಿಯರು ಸುಗ್ಗಿ ಹುಣ್ಣಿಮೆಯ ಸಂಧರ್ಭದಲ್ಲಿ 5 ದಿನಗಳ ಕಾಲ ವಿವಿಧ ವೇಷಭೂಷಣಗಳನ್ನು ತೊಟ್ಟು ಗ್ರಾಮದ ಮನೆಮನೆಗೆ ಸಂಚರಿಸಿದ್ದರು. ಬಳಿಕ ತಾವು ಸಂಗ್ರಹಿಸಿದ ಕಾಣಿಕೆಯನ್ನು ಕದ್ರಿ ಮಂಜುನಾಥೇಶ್ವರನ ಸನ್ನಿಧಿಗೆ ಅರ್ಪಿಸಿದರು. ಏ.13 ರಂದು ರಾತ್ರಿ ಅದ್ದೂರಿಯಾಗಿ ಪುರುಷರ ರಾಶಿ ಪೂಜೆಯನ್ನು ನಡೆಸಿ ಈ ವರ್ಷದ ಪುರುಷ ಕಟ್ಟುವ ಆಚರಣೆಯನ್ನು ಮುಕ್ತಾಯಗೊಳಿಸಿದರು.


ರಾಶಿ ಪೂಜೆಯ ಹಿನ್ನೆಲೆ ಬಳಂಜದ ಜೋಗಿ ಪುರುಷ ಭಕ್ತವೃಂದದ ವತಿಯಿಂದ ಬಳಂಜ ಪಂಚಲಿಂಗೇಶ್ವರ ಮತ್ತು ದುರ್ಗಾಪರಮೇಶ್ವರಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ದೇವಳದ ಆವರಣದಲ್ಲಿ ಕದ್ರಿ ಮಂಜುನಾಥೇಶ್ವರ ಸ್ವಾಮಿಯನ್ನು ಇಟ್ಟು ಅದರ ಎದುರು ಅವಲಕ್ಕಿಯ ದೊಡ್ಡ ರಾಶಿಯನ್ನು ಹಾಕಿ, ಪೂಜೆ ನಡೆಸಲಾಯಿತು.
ಇದೇ ವೇಳೆ ದೇವರ ಬಲಿ, ದೈವದ ದರ್ಶನ, ವಿವಿಧ ವೇಷಭೂಷಣಗಳ ಪ್ರದರ್ಶನ ನಡೆಯಿತು.

ಪೂಜೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಮಕ್ಕಳು – ಮಹಿಳೆಯರು ಭಾಗವಹಿಸಿದ್ದರು. ಎಲ್ಲರಿಗೂ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

Related posts

ಲಾಯಿಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ಕಾಲೇಜಿನ ಕಂಪೌಂಡಿಗೆ ಡಿಕ್ಕಿ

Suddi Udaya

ಎಸ್.ವೈ.ಎಸ್. ಮಡಂತ್ಯಾರ್ ಸರ್ಕಲ್ ವತಿಯಿಂದ ಸ್ವಚ್ಛತಾ ಅಭಿಯಾನ

Suddi Udaya

ಬೆಳ್ತಂಗಡಿ :ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಗೆ ರಾಜ್ಯಮಟ್ಟದ ಹಲವು ಪ್ರಶಸ್ತಿ

Suddi Udaya

ಉಜಿರೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆ ಅನುಗ್ರಹದಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

Suddi Udaya

ಶಿಬಾಜೆಯಲ್ಲಿ ಸಿಮೆಂಟ್ ಶೀಟ್ ಕಟ್ಟಡ ಕೆಡವಿದ ಪ್ರಕರಣ: ಎಂಟು ಮಂದಿಯ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಕೇಸು ದಾಖಲು

Suddi Udaya
error: Content is protected !!