22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಾಪಿನಡ್ಕ: ಶಿವಗಿರಿ ಕೃಪಾದಲ್ಲಿ ಅಂಧರ ಗೀತಾ ಗಾಯನ ಕಾರ್ಯಕ್ರಮ

ಕಾಪಿನಡ್ಕ : ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ, ಹಿರಿಯರಾದ ವಸಂತ ಕೆ ಸಾಲ್ಯಾನ್ ರವರ ಶಿವಗಿರಿ ಕೃಪಾ ಮನೆಯಲ್ಲಿ ಎ.23 ರಂದು ಸತ್ಯನಾರಾಯಣ ಪೂಜೆ, ಅಂದ್ರ ಗೀತಾ ಗಾಯನ ಕಾರ್ಯಕ್ರಮ ಜರುಗಿತು.

ಪ್ರತೀವರ್ಷ ನಡೆಯುವ ಈ ಪೂಜಾ ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾ ಸಂಘ ಮಂಗಳೂರು ಇವರ ಸಂಗೀತ ಕಾರ್ಯಕ್ರಮವನ್ನು ನಡೆಸಲಾಯಿತು.‌ ಅತ್ಯಂತ ಮಹತ್ವಪೂರ್ಣವಾದ ಸಂದೇಶವನ್ನು ಸಾರಿದ ಈ ಕಾರ್ಯಕ್ರಮ ಬಂದವರ ಮನಸು ಗೆದ್ದಿತು.

ತುಮಕೂರು, ಕಾರವಾರ, ಕಡೂರು, ಶೃಂಗೇರಿಯ ಒಂಬತ್ತು ಅಂಧ ಕಲಾವಿದರು ನಡೆಸಿಕೊಟ್ಟ ಈ ಕಾರ್ಯಕ್ರಮ‌ ಬದುಕಿಗೆ ಸ್ಫೂರ್ತಿಯನ್ನ ತುಂಬಿತು.ಕಾರ್ಯಕ್ರಮದಲ್ಲಿ ವಸಂತ ಸಾಲಿಯಾನ್ ಕುಟುಂಬಿಕರು ಎಲ್ಲಾ ಕಲಾವಿದರನ್ನು ಗುರುತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಹಿರಿಯರಾದ ವಸಂತ ಸಾಲ್ಯಾನ್, ಶ್ರೀಮತಿ ಜಲಜಾ ವಿ ಸಾಲಿಯಾನ್ , ಸಂತೋಷ್ ಕುಮಾರ್-ಭಾರತಿ ಸಂತೋಷ್, ಸುಜಯ ಆರ್ ಸಾಲಿಯಾನ್-ರಮೇಶ್ ಸಾಲಿಯಾನ್ ಇರ್ವತ್ತೂರು, ಯೋಗೀಶ್ ಪೂಜಾರಿ ಕಡ್ತಿಲ- ಸಂಧ್ಯಾಲಕ್ಷ್ಮಿ ಮಡಂತ್ಯಾರು, ಸೌಮ್ಯಲಕ್ಷ್ಮಿ- ರತ್ನಾಕರ ಸುವರ್ಣ ಮಂಗಳೂರು,ದಿವ್ಯಾಲಕ್ಷ್ಮಿ ಮತ್ತು ಮನೋಜ್ ಕುಮಾರ್ ಇರ್ವತ್ತೂರು,ರಾಜಲಕ್ಷ್ಮಿ- ಜೀವನ್ ಎನ್ ಉಪಸ್ಥಿತರಿದ್ದರು.

ಯುವಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.

Related posts

ಮಾಲಾಡಿ ಸರ್ಕಾರಿ ಐಟಿಐ ಯಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನಿಧ್ಯದ ಸೇವೆಗೆ ವರ್ಷದ ಸಂಭ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ತಂದೆಯಂದಿರ ದಿನಾಚರಣೆ

Suddi Udaya

ಡಿಕ್ಕಿ ಹೊಡೆದು ವಾಹನ ಸಹಿತ ಚಾಲಕ ಪರಾರಿ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ

Suddi Udaya

ನಿಡ್ಲೆಯ ಪ್ರತಿಷ್ಠಿತ ಸಂಸ್ಥೆ ಅಗ್ರಿಲೀಫ್ ಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya
error: Content is protected !!