23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

ಪುಂಜಾಲಕಟ್ಟೆ: ನಂಬಿಕೆ ಮತ್ತು ಪರಿಶುದ್ಧತೆಗೆ ಸಮನಾರ್ಥವಾಗಿ ಸುಮಾರು 86 ವರ್ಷಗಳ ಸುಧೀರ್ಘ ಅನುಭವದೊಂದಿಗೆ ಚಿನ್ನಾಭರಣ ಪ್ರೀಯರ ನೆಚ್ಚಿನ ಮಳಿಗೆಯಾದ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್ ವಿಸ್ತೃತ ನೂತನ ಮಳಿಗೆ ಮೇ.3 ರಂದು ಶುಭಾರಂಭಗೊಂಡಿತು.

ಕಳೆದ 8 ದಶಕಗಳ ಹಿಂದೆ ಬಿ. ಪುಂಡಲೀಕ ಬಾಳಿಗ ರವರು ಚಿನ್ನಾಭರಣ ಮಳಿಗೆಯನ್ನು ಸ್ಥಾಪಿಸಿ ಜಿಲ್ಲೆಯ ಪ್ರಸಿದ್ದ ಸಂಸ್ಥೆಗಳಲ್ಲಿ ಪುಂಜಾಲಕಟ್ಟೆಯ ಪುಂಡಲೀಕ ಬಾಳಿಗ ಕೂಡ ಒಂದಾಗಿದೆ.


ಸ್ವರ್ಣೋದ್ಯಮದೊಂದಿಗೆ ಸಮಾಜಸೇವೆಯನ್ನು ಉಸಿರಾಗಿಸಿಕೊಂಡು ಜಿಲ್ಲೆಯಾದ್ಯಂತ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬರುತ್ತಿರುವ ಸಂಸ್ಥೆಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ವಿಶೇಷವಾಗಿ ಸಂಸ್ಥೆಯು ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿ, ಉದ್ಯಮದಲ್ಲಿ ಬಲವಾದ ಪರಂಪರೆಯನ್ನು ಸೃಷ್ಟಿಸಿದೆ.


ವಿಶಾಲವಾದ ಸುಸಜ್ಜಿತ ಕಟ್ಟಡದಲ್ಲಿ ಬಂಗಾರದ ವಿನ್ಯಾಸ ಹೊಸತನವನ್ನು ಅನುಭವಿಸಿ, ಆಕರ್ಷಕ ಆಭರಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

ಮಳಿಗೆಯನ್ನು ಬಿ. ಪುರುಷೋತ್ತಮ ಬಾಳಿಗಾ- ಚಂದ್ರಕಲಾ ಬಾಳಿಗಾ, ಬಿ. ರವೀಂದ್ರ ಬಾಳಿಗಾ- ರೇಖಾ ಬಾಳಿಗಾ,ದಿನೇಶ್ ಪೈ-ಪ್ರಭಾ ಡಿ ಪೈ, ಬಿ. ಪ್ರಶಾಂತ ಬಾಳಿಗಾ-ದಿವ್ಯಾ ಬಾಳಿಗಾ ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು

ಶುಭಾರಂಭದ ಪ್ರಯುಕ್ತ ಮಳಿಗೆಗೆ ಗ್ರಾಹಕರು ಆಗಮಿಸಿ ಶುಭಹಾರೈಸುತ್ತಿದ್ದಾರೆ.

Related posts

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶ್ರೀ ಗಣಪತಿ ಹವನ, ಆಶ್ಲೇಷ ಪೂಜೆ, ಅನುಜ್ಞಾಕಲಶ ದುರ್ಗಾ ಪೂಜೆ

Suddi Udaya

ಕಾಶಿಪಟ್ಣ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸುವ ಬಗ್ಗೆ ಶಿಕ್ಷಣ ಸಚಿವರಿಗೆ ಸತೀಶ್ ಕಾಶಿಪಟ್ಣರವರಿಂದ ಮನವಿ

Suddi Udaya

ಎಂಡೋ ಪೀಡಿತ ಮಗುವಿನ ಚಿಕಿತ್ಸೆಗೆ ನೇರವಾದ ರಕ್ಷಾಸಮಿತಿ ಸದಸ್ಯ ಕರೀಮ್‌ ಗೇರುಕಟ್ಟೆ

Suddi Udaya

ಮುಂಡೂರುನಲ್ಲಿ ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 4ನೇ ನೂತನ ಮುಂಡೂರು ಶಾಖೆಯನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

Suddi Udaya

ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನ: ಶ್ರೀ ಧ. ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಅಮೃತಾ 622 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ

Suddi Udaya

ಅಜ್ಞಾತ ಸಂತ ಹರ್ಡೇಕರ್ ಮಂಜಪ್ಪ ಪುಸ್ತಕ ಬಿಡುಗಡೆ

Suddi Udaya
error: Content is protected !!