22.6 C
ಪುತ್ತೂರು, ಬೆಳ್ತಂಗಡಿ
July 23, 2026
ಜಿಲ್ಲಾ ಸುದ್ದಿ

ಕುಲಶೇಖರ ಬ್ರಹ್ಮಕಲಶೋತ್ಸವ ಸಂಭ್ರಮ: ಶ್ರೀ ವೀರ ನಾರಾಯಣ ದೇವರಿಗೆ ದಾನಿಗಳಿಂದ ನೂತನ ರಥ ಸಮರ್ಪಣೆ


ಬೆಳ್ತಂಗಡಿ : ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನವು ಶಿಲಾಮಯವಾಗಿ ರೂ. 10 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಮೇ 14 ರಿಂದ 25 ವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಬಹಳ ವಿಜೃಂಭಣೆಯಿಂದ ಜರಗಲಿದ್ದು, ದಾನಿಗಳಿಂದ ನಿನ್ನೆ ಮೇ 12ರಂದು
ಸಂಜೆ ದೇವರಿಗೆ ನೂತನ ರಥ ಸಮರ್ಪಣೆ ಮಾಡಲಾಯಿತು.

ಬರ್ಕೆ ಫ್ರೆಂಡ್ಸ್‌ನ ಗೌರವಾಧ್ಯಕ್ಷರಾದ ಯಜ್ಞೇಶ್ ಬರ್ಕೆ ಹಾಗೂ ಅಧ್ಯಕ್ಷರಾಗಿರುವ ಸುಚೀಂದ್ರ ಅಮೀನ್ ಅವರು ರೂ. 10 ಲಕ್ಷ ವೆಚ್ಚದಲ್ಲಿ ಶ್ರೀ ದೇವರಿಗೆ ಕೊಡುಗೆಯಾಗಿ ನೀಡಿದ ನೂತನ ರಥವನ್ನು ಕ್ಷೇತ್ರದ ಕ್ಷೇತ್ರದ ಸಮಿತಿಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಿದರು.

ದೇವಸ್ಥಾನದ ಪ್ರಧಾನ ಗೋಪುರ
ರೂ. 25 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಮುಖ ಪ್ರಧಾನ ಗೋಪುರದ ವೆಚ್ಚವನ್ನು ಮುಂಬೈ ಉದ್ಯಮಿ ಸುನಿಲ್‌ರಾಜೀವ್ ಸಾಲ್ಯಾನ್ ಮತ್ತು ದೇವಕಿ ಎಸ್. ಸಾಲ್ಯಾನ್ ನೀಡಿದ್ದಾರೆ.

ಮಾರ್ಬಲ್ ಅಳವಡಿಕೆ:
ಸುತ್ತುಪೌಳಿಯ ಒಳಾಂಗಣಕ್ಕೆ ರೂ. 15 ಲಕ್ಷ ವೆಚ್ಚದಲ್ಲಿ ಮಾರ್ಬಲ್ ಅಳವಡಿಸಲಾಗಿದ್ದು, ಇದರ ವೆಚ್ಚವನ್ನು ಬೆಂಗಳೂರಿನ ಅಮೂಲ್ಯ ರಬ್ಬರ್ ಇಂಡಸ್ಟ್ರೀಸ್‌ನ ಮಾಲಕ ಉದ್ಯಮಿ ದಿವಾಕರ ಮೂಲ್ಯ ಅವರು ನೀಡಿದ್ದಾರೆ.

ಬೆಳ್ಳಿ ಕವಚ ಪಲ್ಲಕ್ಕಿ :
ಶ್ರೀ ವೀರನಾರಾಯಣ ದೇವರ ಬೆಳ್ಳಿ ಕವಚದ ಪಲ್ಲಕ್ಕಿಯನ್ನು ರೂ. 10 ಲಕ್ಷ ವೆಚ್ಚದಲ್ಲಿ ಮುಂಬೈ ಉದ್ಯಮಿ ಅಶೋಕ್ ಮೂಲ್ಯ ಥಾಣೆ ಅವರು ಕೊಡುಗೆಯಾಗಿ ನೀಡಿದ್ದಾರೆ. ಅತ್ಯಾಕರ್ಷಕ ಪಲ್ಲಕ್ಕಿಯನ್ನು ಕೋಟೇಶ್ವರದ ಗೋಪಾಲ ಆಚಾರ್ಯ ನಿರ್ಮಿಸಿದ್ದಾರೆ.

Related posts

ಗೃಹಲಕ್ಷ್ಮಿ ಯೋಜನೆಯಲ್ಲಿ ತಾಂತ್ರಿಕ ತೊಡಕು, ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಂಪೂರ್ಣವಾಗಿ ದೊರೆಯಲು ಕ್ರಮ ವಹಿಸುವಂತೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ರಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಪತ್ರ ಬರೆದು ಒತ್ತಾಯ

Suddi Udaya

ಬುರುಡೆ ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ಬುರುಡೆ ಪೋಟೋ ರಿವಿಲ್

Suddi Udaya

ಮಹಾಮಂಡಲೇಶ್ವರ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ ಮಾ.17:ಉಡುಪಿಯ ಅಮೃತ ಗಾರ್ಡನ್ ನಲ್ಲಿ ಬೃಹತ್ ಅಪ್ರೆಂಟಿಸ್ಶಿಪ್ ಮೇಳ ಹಾಗೂ ಬೃಹತ್ ಉದ್ಯೋಗ ಮೇಳ

Suddi Udaya

ಅಪರ ಜಿಲ್ಲಾಧಿಕಾರಿಯಾಗಿ ಡಾ. ಸಂತೋಷ್ ಕುಮಾರ್ ಅಧಿಕಾರ ಸ್ವೀಕಾರ

Suddi Udaya

ಸೋಣಂದೂರು: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Suddi Udaya

ನೆರಿಯದಲ್ಲಿ ಹಿಂದೂ ರುದ್ರಭೂಮಿಗಾಗಿ ಗ್ರಾಮಸ್ಥರ ಪ್ರತಿಭಟನೆ: ಮೃತದೇಹವನ್ನು ಪಂಚಾಯತ್ ಎದುರಿನಲ್ಲಿಟ್ಟು ಪ್ರತಿಭಟನೆಗೆ ಸಿದ್ದತೆ: ಸ್ಥಳಕ್ಕೆ ತಹಶೀಲ್ದಾರರು ಬರಬೇಕು,ಇಂದೇ ಹಿಂದೂ ರುದ್ರಭೂಮಿಗೆ ಸ್ಥಳ ಮಂಜೂರುಗೊಳಿಸಬೇಕೆಂದು ಒತ್ತಾಯ

Suddi Udaya
error: Content is protected !!