22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಚಾರ್ಮಾಡಿ, ಕಡಿರುದ್ಯಾವರ ಕಾಡಾನೆ ಹಾವಳಿ

ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದ ಘಟನೆ ನಡೆದಿದೆ.

ಹೊಸಮಠ ಪರಿಸರದ ಚಂದ್ರನ್ ಎಂಬವರ ಕೃಷಿತೋಟದಲ್ಲಿ 114 ಅಡಕೆ ಮರ, ಸಿಂಧೂ ರವಿ ಅವರ ತೋಟದ 36 ಅಡಕೆ ಮರ ಹಾಗೂ ಪುರುಷೋತ್ತಮ್ ಎಂಬುವರ ತೋಟದ 33 ಅಡಕೆ ಮರಗಳನ್ನು ಮುರಿದು ಹಾಕಿದೆ.ಕಾಡಾನೆಗಳು ಚಾರ್ಮಾಡಿ- ಕನಪಾಡಿ ಮೀಸಲು ಅರಣ್ಯದಿಂದ ಮೃತ್ಯುಂಜಯ ನದಿ ಮೂಲಕ ಆಗಮಿಸಿ, ಕೃಷಿ ನಾಶಗೊಳಿಸಿದ ಬಳಿಕ ಅದೇ ಹಾದಿಯಲ್ಲಿ ಅರಣ್ಯದ ಕಡೆ ನಿರ್ಗಮಿಸಿರುವ ಕುರುಹುಗಳು ಪತ್ತೆಯಾಗಿವೆ.

ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಸರದಲ್ಲಿ ಪರಿಶೀಲನೆ ನಡೆಸಿ ಪರಿಹಾರ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಮಾಹಿತಿ ನೀಡಿದೆ.

ಕಡಿರುದ್ಯಾವರ ಒಂಟಿ ಸಲಗ: ಬುಧವಾರ ತಡರಾತ್ರಿ ಕಡಿರುದ್ಯಾವರ ಗ್ರಾಮದ ಸಿರಿಬೈಲು ಕಿರಣ ಹೆಬ್ಬಾರ್ ರವರ ತೋಟಕ್ಕೆ ದಾಳಿ ನಡೆಸಿದ ಒಂಟಿ ಸಲಗ ಸುಮಾರು 15ಕ್ಕಿಂತ ಅಧಿಕ ಬಾಳೆ ಗಿಡಗಳನ್ನು ಧ್ವಂಸಗೈದಿದೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಇನ್ನೊಬ್ಬ ಕೃಷಿಕರ ತೋಟಕ್ಕೆ ಒಂಟಿ ಸಲಗ ಆಗಮಿಸಿದ್ದರು ಹೆಚ್ಚಿನ ಕೃಷಿ ನಾಶ ಮಾಡಿರಲಿಲ್ಲ.ಬುಧವಾರ ಸಂಜೆ ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ಕಂಡು ಬಂದ ಒಂಟಿ ಸಲಗ ಹಲವು ಹೊತ್ತು ಟ್ರಾಫಿಕ್ ಜಾಮ್ ಗೆ ಕಾರಣವಾಗಿತ್ತು.

Related posts

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ-2024

Suddi Udaya

ಅ.7: ಪುತ್ತೂರಿಗೆ ಶೌರ್ಯ ಜಾಗರಣ ರಥಯಾತ್ರೆ: ಹಿಂದು ಶೌರ್ಯ ಸಂಗಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಗೆ ದೇಣಿಗೆ ಹಸ್ತಾಂತರ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ಕಕ್ಕಿಂಜೆ: ರವಿ ಗುರುಸ್ವಾಮಿ ಅಸೌಖ್ಯದಿಂದ ನಿಧನ

Suddi Udaya

ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿ ಕುಣಿತ ಭಜನಾ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!