22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗಡಾಯಿಕಲ್ಲಿಗೆ ಸಿಡಿಲು ಬಡಿದು ಕಾಣಿಸಿಕೊಂಡ ಬೆಂಕಿ

ನಡ: ಇಲ್ಲಿಯ ಯಾತ್ರಿಕರ ನೆಚ್ಚಿನ ತಾಣ ಗಡಾಯಿಕಲ್ಲಿಗೆ ಮೇ 23 ರಂದು ಸಂಜೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ.


ಸಂಜೆ ತಾಲೂಕಿನಾದ್ಯಂತ ಸಿಡಿಲು ಸಹಿತ ಮಳೆ ಬಂದಿದ್ದು, ಗಡಾಯಿಕಲ್ಲಿನ ಒಂದು ಭಾಗಕ್ಕೆ ಸಿಡಿಲು ಬಡಿದಿದೆ. ಇದರಿಂದಾಗಿ ಬೆಂಕಿ ಕಾಣಿಸಕೊಂಡು ಹೊತ್ತಿ ಹುರಿದಿದೆ. ಅದಾಗಾಲೆ ಮಳೆ ಆರಂಭಗೊಂಡಿದ್ದರಿಂದ ಬೆಂಕಿ ನಂದಿ ಹೋಗಿದೆ ಎಂದು ನಡ ಗ್ರಾಮದ ಸಮಾಜ ಸೇವಕ ಶ್ಯಾಮಸುಂದರ್ ತಿಳಿಸಿದ್ದಾರೆ. ಕಳೆದ ವರ್ಷವೂ ಇದೇ ಭಾಗಕ್ಕೆ ಸಿಡಿಲು ಬಡಿದು, ಕಲ್ಲಿನ ಸ್ವಲ್ಪ ಭಾಗ ಸಿಡಿದು ಹೋಗಿತ್ತು. ಆಗ ದೊಡ್ಡ ಶಬ್ದವಾಗಿ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.

ಆದರೆ ಈ ಭಾರಿ ಅಂತಹ ಶಬ್ದ ಕೇಳಿ ಬಂದಿಲ್ಲ ಎಂದು ಶ್ಯಾಮಸುಂದರ್ ತಿಳಿಸಿದ್ದಾರೆ. ಸಿಡಿಲು ಬಡಿದು ಬೆಂಕಿ ಕಂಡು ಬಂದಾಗ ಸ್ಥಳೀಯರು ಇದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

Related posts

ಕಳೆಂಜ ರಾಜೇಶ್ ಎಂ.ಕೆ ರವರ ಪೋಕ್ಸೋ ಪ್ರಕರಣ: ಅಪ್ರಾಪ್ತ ವಯಸ್ಕಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಕಾನೂನು ವ್ಯವಸ್ಥೆಯ ದುರ್ಬಳಕೆ ಮಾಡಿದ ಬಗ್ಗೆ ಮಂಗಳೂರು ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಕಳೆಂಜ ಗ್ರಾಮಸ್ಥರಿಂದ ಮನವಿ

Suddi Udaya

ಪತ್ನಿಯಿಂದ ಪತಿಯ ಕೊಲೆ ಪ್ರಕರಣ: ಕೊಲೆ ಪ್ರಕರಣ ಸಾಬೀತಾದರೂ ಪತ್ನಿಗಿಲ್ಲ ಶಿಕ್ಷೆ

Suddi Udaya

ತಣ್ಣೀರುಪoತ: ಪಣೆಕ್ಕರ ಸುಪಾರಿ ಟ್ರೇಡರ್ಸ್ ಅಡಿಕೆ, ಕಾಡುತ್ಪತಿ ಮಳಿಗೆ ಶುಭಾರಂಭ

Suddi Udaya

ಫೆ.27-29: ಶಿಬಾಜೆ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಬೆಳಾಲು: ವಿದ್ಯುತ್ ಕಂಬಕ್ಕೆ ಇನೋವಾ ಡಿಕ್ಕಿ

Suddi Udaya

ಗುರುವಾಯನಕೆರೆ ಮೆಡೆಕ್ಸ್ ಪಾಲಿಕ್ಲಿನಿಕ್ಸ್ ನಲ್ಲಿ ಖಾಸಗಿ ಬಸ್ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!