July 24, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಪ್ರಸನ್ನ ಆಂ.ಮಾ. ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿನ ಪ್ರಸನ್ನ ಆಂಗ್ಲ ಮಾಧ್ಯಮ ವಸತಿ ಶಾಲೆ ಇದರ 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂ. 24ರಂದು ನೆರವೇರಿತು.

ದೀಪ ಪ್ರಜ್ವಲನ ಮಾಡಿದ ಪ್ರಸನ್ನ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಶ್ರೀನಿವಾಸ್, ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ವಿಕಾಸಕ್ಕೆ ಸಂಘಗಳು ಪೂರಕವಾಗಿವೆ ಎಂದು ಅಭಿಪ್ರಾಯ ಪಟ್ಟರು. ಪ್ರಸ್ತಾವನೆಗೈದ ಪ್ರಸನ್ನ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ಕೆ. ಶಂಕರ್ ನಾರಾಯಣ್ ಭಟ್, ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ನಿವಾರಿಸುವಲ್ಲಿ ಸಂಘಗಳು ಕಾರ್ಯಪ್ರವೃತ್ತರಾಗಲಿವೆ ಎಂದರು.

ಶಿಕ್ಷಕಿ ಭಾರತಿ. ಎನ್ ಸ್ವಾಗತಿಸಿದ ಸಭೆಗೆ, ವಿದ್ಯಾರ್ಥಿಗಳಾದ ಅಕ್ಷಾ ಶೆಟ್ಟಿ, ಆಯಿಷಾ, ಸಂಜ್ಞಾ, ನಹ್ಲಾ, ಐಸಿರಿ ಚೇತನ್, ಶಮ್ನಾ ಪ್ರಾರ್ಥಿಸಿ, ಶಿಕ್ಷಕಿ ಜೆರುಶಾ ಪ್ರತಿಜ್ಞಾ ವಿಧಿ ಬೋಧಿಸಿ, ಶಿಕ್ಷಕಿ ಮಿಲನಾ ಕೆ ಧನ್ಯವಾದವಿತ್ತು, ಶಿಕ್ಷಕ , ಅಶ್ವತ್ ಎನ್ ಸಂಘಗಳನ್ನು ರಚಿಸಿ, ಎಂ. ಕೆ ಕನ್ಯಾಡಿ ನಿರೂಪಿಸಿದರು.

ಶಿಕ್ಷಕರುಗಳಾದ ಪ್ರಭಾವತಿ, ಋತ್ವಿಕಾ, ಭಾರತಿ ಎನ್, ಪದ್ಮಲತಾ, ಮಿಲನಾ ಕೆ, ಅನುಪಮಾ, ರೂಪಶ್ರೀ, ಶಿವರಾಮ್ ಕೆ, ಅಶ್ವತ್ ಎನ್ ಸಂಘಗಳ ಯೋಜನೆ ಪ್ರಸ್ತಾಪಿಸಿದರು.

Related posts

ಗಾಳಿ-ಮಳೆ: ಮುಂಡಾಜೆ ಸೀಟು ಬಳಿ ರಸ್ತೆಗೆ ಬಿದ್ದ ಮರ

Suddi Udaya

ಕುತ್ಲೂರು ಹಾ.ಉ.ಸ.ಸಂಘದ ಅಧ್ಯಕ್ಷರಾಗಿ ರಾಜಶ್ರೀ, ಉಪಾಧ್ಯಕ್ಷರಾಗಿ ಸುಕುಮಾರ ಶೆಟ್ಟಿ ಆಯ್ಕೆ

Suddi Udaya

ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಸಂಭ್ರಮ ತಾಲೂಕಿನ ನಂಬರ್ 1 ವಾರಪತ್ರಿಕೆ ಸುದ್ದಿ ಉದಯ ಬಳಗದಿಂದ ಗೌರವಾರ್ಪಣೆ

Suddi Udaya

ಪದ್ಮುಂಜ: ಶ್ರೀ ವಿಷ್ಣು ಅಸೋಸಿಯೇಟ್ಸ್, ಗ್ರಾಮ ಒನ್, ಶ್ರೀ ವಿಷ್ಣು ಡಿಜಿಟಲ್ ಸೇವಾ ಕೇಂದ್ರದಲ್ಲಿ ಇ -ಸ್ಟ್ಯಾಂಪ್ (ಠಸ್ಸೆ) ಪೇಪರ್ ಸೇವೆಯ ಶುಭಾರoಭ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಹಾ.ಉ.ಸ.ಸಂಘದಿಂದ ಆರ್ಥಿಕ ನೆರವು

Suddi Udaya

ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!