23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ದಂತ ವೈದ್ಯಕೀಯ ಪರೀಕ್ಷೆ : ಗೇರುಕಟ್ಟೆಯ ಡಾ|ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

ಬೆಳ್ತಂಗಡಿ: ಕಳೆದ ಸಾಲಿನ ದಂತ ವೈದ್ಯಕೀಯ ಅಂತಿಮ ವರ್ಷದ ಪರೀಕ್ಷೆಯಲ್ಲಿ ಗೇರುಕಟ್ಟೆಯ ನಿವಾಸಿ ಡಾ| ಅನುದೀಕ್ಷಾ ಎಸ್. ಆರ್ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಇವರು ನಡೆಸಿದ ಫ್ರೀ ಕ್ಲಿನಿಕಲ್ ಪ್ರೋಸ್ಟೊಡಾಂಟಿಕ್ಸ್‌ನಲ್ಲಿ 4ನೇ ರ‍್ಯಾಂಕ್, ಪ್ರಾಸ್ಟೊಡಾಂಟಿಕ್ಸ್ ಕ್ರೌನ್ ಮತ್ತು ಬ್ರಿಡ್ಜ್‌ನಲ್ಲಿ 5ನೇ ರ‍್ಯಾಂಕ್, ಪಿರಿಯೋಡೆಂಟಿಕ್ಸ್‌ನಲ್ಲಿ 8ನೇ ರ‍್ಯಾಂಕ್ ಮತ್ತು ಜನರಲ್ ಸರ್ಜರಿಯಲ್ಲಿ 9ನೇ ರ‍್ಯಾಂಕ್ ಪಡೆದಿರುತ್ತಾರೆ.

ಇವರು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಆಂಡ್ ಹಾಸ್ಪಿಟಲ್ ನಲ್ಲಿ ಓವರ್ ಆಲ್ ಅಕಾಡೆಮಿಕ್ ಟಾಫರ್ ಇನ್ ಬಿಡಿಎಸ್ ಎಂಬ ಕೀರ್ತಿಯನ್ನು ಪಡೆದುಕೊಂಡು, ಶಿಕ್ಷಣ ಪಡೆದ ಕಾಲೇಜು ಹಾಗೂ ಊರಿಗೆ ಕೀರ್ತಿಯನ್ನು ತಂದಿದ್ದಾರೆ. ಇವರು ಗೇರುಕಟ್ಟೆ ನಿವಾಸಿ ಶಿವರಾಂ ಮತ್ತು ಗುಲಾಬಿ ಶಿವರಾಂ ದಂಪತಿಯ ಪುತ್ರಿಯಾಗಿದ್ದಾರೆ.

Related posts

ದೇಹದಾನ ನೋಂದಣಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದ ವಸಂತ ಪೂಜಾರಿ ಮತ್ತು ಸುಶೀಲ ಹೆಗ್ಡೆ

Suddi Udaya

ಪುತ್ತಿಲ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕುತ್ಲೂರು: ಸೇತುವೆಗೆ ಅಡ್ದಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ತೆರವುಗೊಳಿಸಿದ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಯುವಕರು

Suddi Udaya

ಅಳದಂಗಡಿ ವಲಯದ ಬಡಗಕಾರಂದೂರು ಎ ಮತ್ತು ಬಿ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ”

Suddi Udaya

ಪೆರಿಂಜೆ ಪಡ್ಡoದಡ್ಕ ನಿವಾಸಿ ಸಫೀಯಾ ನಿಧನ

Suddi Udaya
error: Content is protected !!