23.5 C
ಪುತ್ತೂರು, ಬೆಳ್ತಂಗಡಿ
June 8, 2026
ಸಾಧಕರು

ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ, ಜಯರಾಮ ನೆಲ್ಲಿತ್ತಾಯರಿಗೆ “ಸಮಾಜ ಭೂಷಣ”ಪ್ರಶಸ್ತಿ

ಬೆಳ್ತಂಗಡಿ: ಹತ್ತೊಂಬತ್ತು ವರ್ಷಗಳ ಕಾಲ ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ,
ಇಡೀ ರಾಜ್ಯದಲ್ಲಿ ಮಹತ್ವದ ಭಕ್ತಿ ಸಂಸ್ಕೃತಿಯ ಸಂಚಲನ ಮೂಡಿಸಿದ್ದ,‌ ಬಿ. .ಜಯರಾಮ ನೆಲ್ಲಿತ್ತಾಯರಿಗೆ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್
“ಧಾರ್ಮಿಕ ಸಮಾಜ ಭೂಷಣ”ಪ್ರಶಸ್ತಿಯಿಂದ ನೀಡಿ ಗೌರವಿಸಿದೆ.
‌ಬೆಳ್ತಂಗಡಿಯ ಶಿಶಿಲ ಗ್ರಾಮದಲ್ಲಿ ಜನಿಸಿ, ಧರ್ಮಸ್ಥಳದ ಧಾರ್ಮಿಕ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಲ್ಲವಿಸಿ, ಮೈಸೂರು ವಿಭಾಗದ ಸಾಮಾಜಿಕ ಸೇವೆಯ ಮಹಾಸಾಧಕರೆನಿಸಿರುವ ಬಿ.ಜಯರಾಮ ನೆಲ್ಲಿತ್ತಾಯರು, ನಿರಂತರವಾಗಿ ನಲವತ್ತು ವರ್ಷಗಳ ಕಾಲ ನಿಸ್ವಾರ್ಥ ಜನಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಭಜನಾ ಸಂಘಟನೆಗಳ ಸರದಾರರೆನಿಸಿಕೊಂಡು, ಸತತವಾಗಿ ತನ್ನ ಸೇವಾವಧಿಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ಇಡೀ ರಾಜ್ಯದಲ್ಲಿ ಮಹತ್ವದ ಭಕ್ತಿ ಸಂಸ್ಕೃತಿಯ ಸಂಚಲನ ಮೂಡಿಸಿದ್ದಾರೆ.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ದೇವಾಲಯ ಜೀರ್ಣೋದ್ಧಾರ, ಬ್ರಹ್ಮಕಲಶದಂತಹ ನೂರಾರು, ಮಹತ್ವದ ಕಾರ್ಯಕ್ರಮಗಳ ರೂವಾರಿಯಾಗಿ, ಹಿರಿತನದ ಗಾಂಭೀರ್ಯ, ಮೌಲಿಕ ವಿಚಾರಧಾರೆ, ಹೃದಯವಂತಿಕೆ, ಸಮಾಜಮುಖಿ ಚಿಂತನೆಗಳಿಂದ ಲಕ್ಷ ಲಕ್ಷ ಜನರ ಆತ್ಮೀಯ ದಾರಿದೀವಿಗೆಯಾಗಿರುವ ಅವರನ್ನು. ಗುರುತಿಸಿ, ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್ ಬಿ.ಜಯರಾಮ ನೆಲ್ಲಿತ್ತಾಯರಿಗೆ “‘ಧಾರ್ಮಿಕ ಸಮಾಜ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ರಿಗೆ ದಿ| ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ

Suddi Udaya

ಬಾಯ೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ 10ನೇ ಬಾರಿಗೆ’ ಸಾಧನ ಶ್ರೀ ಪ್ರಶಸ್ತಿ ‘

Suddi Udaya

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ.‌ಸದಾನಂದ ಪೂಜಾರಿ ಯವರಿಗೆ ಡಾ. ಬಿಸಿ ರಾಯ್ ರಾಜ್ಯ ಪ್ರಶಸ್ತಿ,

Suddi Udaya

ರಕ್ರೇಶ್ವರಿ ಪದವು ಅಂಗನವಾಡಿ
ಕಾರ್ಯಕರ್ತೆ ನಾಗವೇಣಿ ಅವರಿಗೆ
ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಜಿಲ್ಲಾ ಪ್ರಶಸ್ತಿಗೆ ಆಯ್ಕೆ

Suddi Udaya

ಸುಳ್ಯ ಕೆರ್ಪಳ ಪಯಸ್ಸಿನಿ ಯುವಕ ಮಂಡಲ ವತಿಯಿಂದ ಲಕ್ಷ್ಮಿನಾರಾಯಣರವರಿಗೆ ಪಯಸ್ಸಿನಿ ಗೌರವ

Suddi Udaya

ರಿಷಿಕಾ ಕುಂದೇಶ್ವರರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರ

Suddi Udaya
error: Content is protected !!