July 23, 2026
ಸಾಧಕರು

ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ, ಜಯರಾಮ ನೆಲ್ಲಿತ್ತಾಯರಿಗೆ “ಸಮಾಜ ಭೂಷಣ”ಪ್ರಶಸ್ತಿ

ಬೆಳ್ತಂಗಡಿ: ಹತ್ತೊಂಬತ್ತು ವರ್ಷಗಳ ಕಾಲ ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ,
ಇಡೀ ರಾಜ್ಯದಲ್ಲಿ ಮಹತ್ವದ ಭಕ್ತಿ ಸಂಸ್ಕೃತಿಯ ಸಂಚಲನ ಮೂಡಿಸಿದ್ದ,‌ ಬಿ. .ಜಯರಾಮ ನೆಲ್ಲಿತ್ತಾಯರಿಗೆ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್
“ಧಾರ್ಮಿಕ ಸಮಾಜ ಭೂಷಣ”ಪ್ರಶಸ್ತಿಯಿಂದ ನೀಡಿ ಗೌರವಿಸಿದೆ.
‌ಬೆಳ್ತಂಗಡಿಯ ಶಿಶಿಲ ಗ್ರಾಮದಲ್ಲಿ ಜನಿಸಿ, ಧರ್ಮಸ್ಥಳದ ಧಾರ್ಮಿಕ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಲ್ಲವಿಸಿ, ಮೈಸೂರು ವಿಭಾಗದ ಸಾಮಾಜಿಕ ಸೇವೆಯ ಮಹಾಸಾಧಕರೆನಿಸಿರುವ ಬಿ.ಜಯರಾಮ ನೆಲ್ಲಿತ್ತಾಯರು, ನಿರಂತರವಾಗಿ ನಲವತ್ತು ವರ್ಷಗಳ ಕಾಲ ನಿಸ್ವಾರ್ಥ ಜನಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಭಜನಾ ಸಂಘಟನೆಗಳ ಸರದಾರರೆನಿಸಿಕೊಂಡು, ಸತತವಾಗಿ ತನ್ನ ಸೇವಾವಧಿಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ಇಡೀ ರಾಜ್ಯದಲ್ಲಿ ಮಹತ್ವದ ಭಕ್ತಿ ಸಂಸ್ಕೃತಿಯ ಸಂಚಲನ ಮೂಡಿಸಿದ್ದಾರೆ.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ದೇವಾಲಯ ಜೀರ್ಣೋದ್ಧಾರ, ಬ್ರಹ್ಮಕಲಶದಂತಹ ನೂರಾರು, ಮಹತ್ವದ ಕಾರ್ಯಕ್ರಮಗಳ ರೂವಾರಿಯಾಗಿ, ಹಿರಿತನದ ಗಾಂಭೀರ್ಯ, ಮೌಲಿಕ ವಿಚಾರಧಾರೆ, ಹೃದಯವಂತಿಕೆ, ಸಮಾಜಮುಖಿ ಚಿಂತನೆಗಳಿಂದ ಲಕ್ಷ ಲಕ್ಷ ಜನರ ಆತ್ಮೀಯ ದಾರಿದೀವಿಗೆಯಾಗಿರುವ ಅವರನ್ನು. ಗುರುತಿಸಿ, ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್ ಬಿ.ಜಯರಾಮ ನೆಲ್ಲಿತ್ತಾಯರಿಗೆ “‘ಧಾರ್ಮಿಕ ಸಮಾಜ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ನಿವೃತ್ತ ಯೋಧ ಉಜಿರೆಯ ಗೋಪಾಲಕೃಷ್ಣ ಕಾಂಚೋಡು‌ರಿಗೆ ಗೌರವ

Suddi Udaya

ಉಪನ್ಯಾಸಕ ಕೇಶವ ಬಂಗೇರರಿಗೆ ಡಾಕ್ಟರೇಟ್ ಪದವಿ

Suddi Udaya

ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಕೃಷಿ ಕ್ಷೇತ್ರ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ : ನಿವೃತ್ತ ಯೋಧ ಉಜಿರೆಯ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಗೌರವ ಡಾಕ್ಟರೇಟ್ ಪದವಿ

Suddi Udaya

“ನಮ್ಮೂರು ನಮ್ಮ ಕೆರೆ” ವಿಶಿಷ್ಟ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿ

Suddi Udaya

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ
ಸರಸ್ವತಿ ಸ್ವಾಮೀಜಿಯವರಿಂದ ಸುದ್ದಿ ಉದಯ ವಾರಪತ್ರಿಕೆ ಬಿಡುಗಡೆ

Suddi Udaya
error: Content is protected !!