September 6, 2026
ಸಾಧಕರು

ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ, ಜಯರಾಮ ನೆಲ್ಲಿತ್ತಾಯರಿಗೆ “ಸಮಾಜ ಭೂಷಣ”ಪ್ರಶಸ್ತಿ

ಬೆಳ್ತಂಗಡಿ: ಹತ್ತೊಂಬತ್ತು ವರ್ಷಗಳ ಕಾಲ ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ,
ಇಡೀ ರಾಜ್ಯದಲ್ಲಿ ಮಹತ್ವದ ಭಕ್ತಿ ಸಂಸ್ಕೃತಿಯ ಸಂಚಲನ ಮೂಡಿಸಿದ್ದ,‌ ಬಿ. .ಜಯರಾಮ ನೆಲ್ಲಿತ್ತಾಯರಿಗೆ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್
“ಧಾರ್ಮಿಕ ಸಮಾಜ ಭೂಷಣ”ಪ್ರಶಸ್ತಿಯಿಂದ ನೀಡಿ ಗೌರವಿಸಿದೆ.
‌ಬೆಳ್ತಂಗಡಿಯ ಶಿಶಿಲ ಗ್ರಾಮದಲ್ಲಿ ಜನಿಸಿ, ಧರ್ಮಸ್ಥಳದ ಧಾರ್ಮಿಕ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಲ್ಲವಿಸಿ, ಮೈಸೂರು ವಿಭಾಗದ ಸಾಮಾಜಿಕ ಸೇವೆಯ ಮಹಾಸಾಧಕರೆನಿಸಿರುವ ಬಿ.ಜಯರಾಮ ನೆಲ್ಲಿತ್ತಾಯರು, ನಿರಂತರವಾಗಿ ನಲವತ್ತು ವರ್ಷಗಳ ಕಾಲ ನಿಸ್ವಾರ್ಥ ಜನಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಭಜನಾ ಸಂಘಟನೆಗಳ ಸರದಾರರೆನಿಸಿಕೊಂಡು, ಸತತವಾಗಿ ತನ್ನ ಸೇವಾವಧಿಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ಇಡೀ ರಾಜ್ಯದಲ್ಲಿ ಮಹತ್ವದ ಭಕ್ತಿ ಸಂಸ್ಕೃತಿಯ ಸಂಚಲನ ಮೂಡಿಸಿದ್ದಾರೆ.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ದೇವಾಲಯ ಜೀರ್ಣೋದ್ಧಾರ, ಬ್ರಹ್ಮಕಲಶದಂತಹ ನೂರಾರು, ಮಹತ್ವದ ಕಾರ್ಯಕ್ರಮಗಳ ರೂವಾರಿಯಾಗಿ, ಹಿರಿತನದ ಗಾಂಭೀರ್ಯ, ಮೌಲಿಕ ವಿಚಾರಧಾರೆ, ಹೃದಯವಂತಿಕೆ, ಸಮಾಜಮುಖಿ ಚಿಂತನೆಗಳಿಂದ ಲಕ್ಷ ಲಕ್ಷ ಜನರ ಆತ್ಮೀಯ ದಾರಿದೀವಿಗೆಯಾಗಿರುವ ಅವರನ್ನು. ಗುರುತಿಸಿ, ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್ ಬಿ.ಜಯರಾಮ ನೆಲ್ಲಿತ್ತಾಯರಿಗೆ “‘ಧಾರ್ಮಿಕ ಸಮಾಜ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಉಪನ್ಯಾಸಕ ಕೇಶವ ಬಂಗೇರರಿಗೆ ಡಾಕ್ಟರೇಟ್ ಪದವಿ

Suddi Udaya

ಮಂಗಳೂರು ವಿವಿ ಸ್ನಾತಕ ಪದವಿ ಪರೀಕ್ಷೆ ಫಲಿತಾಂಶ: ಎಂ.ಎಸ್.ಡಬ್ಲ್ಯೂನಲ್ಲಿ ಅಜಿರದ ಯಶಸ್ವಿನಿಗೆ ಪ್ರಥಮ ರ‍್ಯಾಂಕ್

Suddi Udaya

ವಿಶ್ವ ಛಾಯಾಗ್ರಾಹಣ ದಿನಾಚರಣೆ ಪ್ರಯುಕ್ತ ಬೆಳ್ತಂಗಡಿಯ ಸಿಲ್ವಿಯಾ ಅವರಿಗೆ ಸನ್ಮಾನ

Suddi Udaya

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದಿಂದ ಹತ್ಯಡ್ಕ ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಗೌರವಾರ್ಪಣೆ

Suddi Udaya

ಗೇರುಕಟ್ಟೆ ದಿವಾಕರ ಆಚಾರ್ಯ ರವರಿಗೆ ಯಕ್ಷಗಾನದಲ್ಲಿ ಡಿಪ್ಲೊಮಾ ಪದವಿ ಪ್ರದಾನ

Suddi Udaya
error: Content is protected !!