September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗದ ಮಹಾಸಭೆ

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗ, ಉಜಿರೆ-ಬೆಳ್ತಂಗಡಿ ಇದರ ವಿಶೇಷ ಮಹಾಸಭೆ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾವನದಲ್ಲಿ ಆ.6 ರಂದು ನಡೆಯಿತು.
ಬಳಗದ ಅಧ್ಯಕ್ಷ ಯೋಗೀಶ್ ಆರ್.ಭಿಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೈಲಾವನ್ನು ಸ್ವೀಕರಿಸಿ, ಬಳಗವನ್ನು ರಾಜ್ಯದ ಸಂಘ- ಸಂಸ್ಥೆಗಳ ನೋಂದಾವಣೆ ಕಾನೂನಿನ ಪ್ರಕಾರ ನೋಂದಾವಣೆ ಮಾಡುವುದೆಂದು ತೀರ್ಮಾನಿಸಲಾಯಿತು.


ಬಳಗದ ವತಿಯಿಂದ ಆ.19 ರಂದು ಬೆಳ್ತಂಗಡಿಯ ಬಜಕ್ಕಿರೆ ಸಾಲು ಎಂಬಲ್ಲಿ ಔಷಧೀಯ ಸಸ್ಯಗಳ ಚಿತ್ಪಾವನದ ನಿರ್ಮಾಣದ ಶುಭಾರಂಭ ನಡೆಯಲಿದೆ. ಸೆ.10 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ವಿಷ್ಣುಸಹಸ್ರನಾಮದ ಸಾಮೂಹಿಕ ಪಠಣ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.


ವೇದಿಕೆಯಲ್ಲಿ ಬಳಗದ ಗೌರವಾಧ್ಯಕ್ಷ ಶಂಕರ ಪಟವರ್ಧನ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಜತೆ ಕಾರ್ಯದರ್ಶಿ ಗಂಗಾರಾಣಿ ಜೋಶಿ, ಖಜಾಂಜಿ ಶ್ರೀಕಾಂತ ಗೋರೆ ಇದ್ದರು.
ಬಳಗದ ಕಾನೂನು ಸಲಹೆಗಾರ ವಕೀಲ ಶೈಲೇಶ್ ಠೋಸರ್ ಬೈಲಾವನ್ನು ವಿವರಿಸಿದರು. ಕಾರ್ಯದರ್ಶಿ ಗಣೇಶ್ ಶೆಂಡ್ಯೆ ಸ್ವಾಗತಿಸಿ, ವಂದಿಸಿದರು.

Related posts

ಬದ್ಯಾರ್: ರಸ್ತೆಯಲ್ಲಿ ಬಾಯಿ ತೆರದ ಗುಂಡಿ: ಅಪಾಯದ ಸೂಚನೆ

Suddi Udaya

ಕುದ್ರಡ್ಕ ಶ್ರೀ‌ ಮಹಾಗಣಪತಿ ಭಜನಾ ಮಂದಿರದಲ್ಲಿ ‌ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ: ಶಶಾಂಕ ಕುಳಮರ್ವ ರವರಿಗೆ ಸುರತ್ಕಲ್ ಎನ್.ಐ.ಟಿ.ಕೆ. ಯಿಂದ ಪಿ.ಎಚ್.ಡಿ. ಪದವಿ

Suddi Udaya

ಕೊಕ್ಕಡ: ತೆಂಕುಬೈಲು ಪತ್ತನಾಜೆಯ ವಾರ್ಷಿಕ ನೇಮೋತ್ಸವದ ಪೂರ್ವಭಾವಿ ಸಭೆ ಹಾಗೂ ಸೇವಾ ಸಮಿತಿ ರಚನೆ

Suddi Udaya

ಧರ್ಮಸ್ಥಳ: ಶ್ರೀ ಮಂ.ಅ. ಪ್ರೌ. ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ ಮತ್ತು ನಿವೃತ್ತ ಮುಖ್ಯ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ

Suddi Udaya

ಮದ್ದಡ್ಕ: ಪ್ರದೀಪ್ ನಾಯಕ್ ಬಲ್ಕತ್ಯಾರು ಇವರಿಂದ ಇ ಸಿ ಜಿ ಯಂತ್ರ ಕೊಡುಗೆ

Suddi Udaya
error: Content is protected !!