22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗದ ಮಹಾಸಭೆ

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗ, ಉಜಿರೆ-ಬೆಳ್ತಂಗಡಿ ಇದರ ವಿಶೇಷ ಮಹಾಸಭೆ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾವನದಲ್ಲಿ ಆ.6 ರಂದು ನಡೆಯಿತು.
ಬಳಗದ ಅಧ್ಯಕ್ಷ ಯೋಗೀಶ್ ಆರ್.ಭಿಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೈಲಾವನ್ನು ಸ್ವೀಕರಿಸಿ, ಬಳಗವನ್ನು ರಾಜ್ಯದ ಸಂಘ- ಸಂಸ್ಥೆಗಳ ನೋಂದಾವಣೆ ಕಾನೂನಿನ ಪ್ರಕಾರ ನೋಂದಾವಣೆ ಮಾಡುವುದೆಂದು ತೀರ್ಮಾನಿಸಲಾಯಿತು.


ಬಳಗದ ವತಿಯಿಂದ ಆ.19 ರಂದು ಬೆಳ್ತಂಗಡಿಯ ಬಜಕ್ಕಿರೆ ಸಾಲು ಎಂಬಲ್ಲಿ ಔಷಧೀಯ ಸಸ್ಯಗಳ ಚಿತ್ಪಾವನದ ನಿರ್ಮಾಣದ ಶುಭಾರಂಭ ನಡೆಯಲಿದೆ. ಸೆ.10 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ವಿಷ್ಣುಸಹಸ್ರನಾಮದ ಸಾಮೂಹಿಕ ಪಠಣ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.


ವೇದಿಕೆಯಲ್ಲಿ ಬಳಗದ ಗೌರವಾಧ್ಯಕ್ಷ ಶಂಕರ ಪಟವರ್ಧನ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಜತೆ ಕಾರ್ಯದರ್ಶಿ ಗಂಗಾರಾಣಿ ಜೋಶಿ, ಖಜಾಂಜಿ ಶ್ರೀಕಾಂತ ಗೋರೆ ಇದ್ದರು.
ಬಳಗದ ಕಾನೂನು ಸಲಹೆಗಾರ ವಕೀಲ ಶೈಲೇಶ್ ಠೋಸರ್ ಬೈಲಾವನ್ನು ವಿವರಿಸಿದರು. ಕಾರ್ಯದರ್ಶಿ ಗಣೇಶ್ ಶೆಂಡ್ಯೆ ಸ್ವಾಗತಿಸಿ, ವಂದಿಸಿದರು.

Related posts

ಶ್ರೀ ರಾಮ ಮಂದಿರದ ಹನುಮ ರಥಕ್ಕೆ ಸ್ವಾಗತ

Suddi Udaya

ಬಂದಾರು ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಕೊಡೆ ವಿತರಣೆ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಜ.15: ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರ 79ನೇ ಹುಟ್ಟುಹಬ್ಬದ ಪ್ರಯುಕ್ತ ‘ಬೃಹತ್ ರಕ್ತದಾನ’ ಶಿಬಿರ

Suddi Udaya

ಉಜಿರೆ: ಕುಂಜರ್ಪ ನಿವಾಸಿ ತಿಮ್ಮಪ್ಪ ಪೂಜಾರಿ ನಿಧನ

Suddi Udaya

ಗುರುವಾಯನಕೆರೆ ಪಾಲಡ್ಕ ಒಕ್ಕೂಟದ ಬೆಳ್ಳಿ ಹಬ್ಬ ಕಾರ್ಯಕ್ರಮ

Suddi Udaya
error: Content is protected !!