22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹತ್ವದ ಸಭೆ

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಇದರ ಮಹತ್ವದ ಸಭೆಯು ಆ. 5 ರಂದು ಉಜಿರೆಯ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಿತು.

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ಹೆದ್ದಾರಿಯ ಬದಿಯಲ್ಲಿ ಸರ್ವೀಸ್ ರೋಡ್ ನಿರ್ಮಿಸಿದಲ್ಲಿ ವ್ಯಾಪಾರವನ್ನೆ ನಂಬಿ ಜೀವಿಸುತ್ತಿರುವ ವರ್ತಕರ ಜೀವನ ಬೀದಿಗೆ ಬೀಳುವ ಸಾಧ್ಯತೆ ಇದೆ. ಆದ್ದರಿಂದ ರಸ್ತೆ ಅಗಲೀಕರಣ ಆಗಬೇಕಾದದ್ದೆ, ಅದಕ್ಕೆ ಉಜಿರೆ ವರ್ತಕರ ಸಹಕಾರ ಸದಾ ಇದೆ. ಆದರೆ ಸರ್ವೀಸ್ ರೋಡನ್ನು ಮಾಡದೇ ರಸ್ತೆ ಅಗಲೀಕರಣ ಮಾಡಿ ಎಂಬ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಂಘಟಕರು ತಿಳಿಸಿದರು. ಸರಿಯಾದ ಪಾರ್ಕಿಂಗ್ ನಿರ್ಮಿಸಿಕೊಡಬೇಕಾಗಿಯು ಮನವಿ ನೀಡುವುದೆಂದು ತೀರ್ಮಾನಿಸಿದರು.

ಸೆಪ್ಟಂಬರ್ 10 ಉಜಿರೆ ವರ್ತಕರಿಗಾಗಿ ಸ್ಪೋಡ್ಸ್ ಡೇ ಆಯೋಜಿಸುವುದು ಸೆಪ್ಟಂಬರ್ 24 ಸಂಘದ ಮಹಾಸಭೆಯನ್ನು ನಡೆಸುವುದು ಮತ್ತು ಉಜಿರೆ ವರ್ತಕ ಸಂಘದ ನೂತನ ಸಮಿತಿಯನ್ನು ರಚನೆ ಮಾಡುವುದೆಂದು ಸಂಘ ತೀರ್ಮಾನಿಸಿತು ಎಂದರು.

ಸಭೆಯಲ್ಲಿ ಅಧ್ಯಕ್ಷರಾದ ಅರವಿಂದ್ ಕಾರಂತ್, ಕಾರ್ಯದರ್ಶಿಗಳಾದ ಪ್ರಸಾದ್ ಬಿ ಎಸ್ ,ವಿಶ್ವನಾಥ ಭಂಡಾರಿ ವಿಶ್ವ ದುರ್ಗ ಮೊಬೈಲ್ ಉಪಾಧ್ಯಕ್ಷರಾದ ದಿನೇಶ್ ದಿಶಾ, ಪ್ರವೀಣ್ ಹಳ್ಳಿಮನೆ, ಹುಕುಂ ರಾಮ್ ಶಾರದಾ ಹರೀಶ್ ಕುಮಾರ್ ಆಶಿಕ ಹಾಗೂ ಇನ್ನಿತರ ವರ್ತಕರು ಉಪಸ್ಥಿತರಿದ್ದರು.

Related posts

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ರವರಿಂದ ದೇವೆಂದ್ರ ಹೆಗ್ಡೆ ಕೊಕ್ರಾಡಿಯವರಿಗೆ ಸನ್ಮಾನ

Suddi Udaya

ಉಜಿರೆ : ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಭಾರತೀಯ ಜೈನ್ ಮಿಲನ್ ಸಭೆ

Suddi Udaya

ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ಳಿ ಪದಕ ಗೆದ್ದ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

Suddi Udaya

ಹತ್ಯಡ್ಕ: ನೆಕ್ಕರಡ್ಕ ನಿವಾಸಿ ಅನಸೂಯ ನಿಧನ

Suddi Udaya

ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ನಿನಾದ 90.4 ಎಫ್.ಎಂ. ವತಿಯಿಂದ ‘ನಮ್ಮ ಹಿರಿಯರು ನಮ್ಮ ಗೌರವ’ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!