25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ವೇಣೂರು ಎಸ್.ಡಿ.ಎಮ್. ಐಟಿಐ ಮತ್ತು ಟೊಯೋಟಾ ಒಡಂಬಡಿಕೆ

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಮತ್ತು ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಟೊಯೋಟ ಕಿರ್ಲೊಸ್ಕರ್ ಮೋಟರ್ಸ್, ಬೆಂಗಳೂರು ನಡುವೆ ಉತ್ಕೃಷ್ಟ ಕೌಶಲ್ಯ ತರಬೇತಿಗಾಗಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದದಂತೆ ಕಿರ್ಲೋಸ್ಕರ್ ಮೋಟರ್ಸ್ ರವರು ಐಟಿಐ ವೇಣೂರಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉತ್ಕೃಷ್ಟ ತರಬೇತಿಯನ್ನು ನೀಡಲಿದ್ದು ತರಬೇತಿಯ ಮೊದಲ ಹಂತದಲ್ಲಿ ಬೆಂಗಳೂರಿನ ಟೊಯೋಟಾ ಕಂಪನಿಯಲ್ಲಿ ತರಬೇತಿಯನ್ನು ನೀಡಿ ಬಳಿಕ ವೇಣೂರಿನ ಐಟಿಐಯಲ್ಲಿ ಕೌಶಲ್ಯವೃದ್ಧಿ ತರಬೇತಿಯನ್ನು ನೀಡಲಿದ್ದಾರೆ.

ಈ ಉನ್ನತ ಕೌಶಲ್ಯ ಸಾಧನೆಗಾಗಿ ಸಂಸ್ಥೆಯು ವಿಶೇಷ ವಿನ್ಯಾಸದ ತರಬೇತಿ ಉಪಕರಣಗಳನ್ನು ಹೊಂದಬೇಕಾಗಿದೆ. ತರಬೇತಿಯ ಬಳಿಕ ಕಂಪೆನಿಯು ಉದ್ಯೋಗದ ಸಮಯದಲ್ಲಿ ಪ್ರಥಮ ಆದ್ಯತೆಯ ಮೇರೆಗೆ ಇಲ್ಲಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಪರಿಗಣಿಸಲಾಗುತ್ತದೆ. ಈ ಮೂಲಕ ವೇಣೂರಿನ ಐಟಿಐಯು ತನ್ನ ಉತ್ಕೃಷ್ಟತೆಯ ಇನ್ನೊಂದು ಮೈಲುಗಲ್ಲನ್ನು ಸ್ಥಾಪಿಸಿದಂತಾಗಿದೆ. ಒಡಂಬಡಿಕೆಗೆ ಟೊಯೋಟಾ ಕಂಪನಿಯ ಪರವಾಗಿ ವೆಂಕಟೇಶ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಮತ್ತು ಐಟಿಐ ಪರವಾಗಿ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಸಹಿ ಮಾಡಿದರು. ಸಂಸ್ಥೆಯ ಈ ಸಾಧನೆಗಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಆಡಳಿತ ಮಂಡಳಿಯವರು ಸಂಸ್ಥೆಗೆ ಅಭಿನಂದನೆಯನ್ನು ತಿಳಿಸುತ್ತಾರೆ.

Related posts

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ

Suddi Udaya

ಗುರುವಾಯನಕೆರೆಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ.

Suddi Udaya

ಉಜಿರೆಯಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ

Suddi Udaya

ಜ.17 ಮಡಂತ್ಯಾರು ಜೆಸಿಐ ಪದ ಪ್ರಧಾನ ಸಮಾರಂಭ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಧರ್ಮಸ್ಥಳಕ್ಕೆ ಪ್ರವೇಶ

Suddi Udaya

ಮೇಲಂತಬೆಟ್ಟು: ಹಾನಿಗೊಳಗಾದ ಪ್ರದೇಶಗಳಿಗೆ ವಿ.ಪ. ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ; ಪರಿಶೀಲನೆ

Suddi Udaya
error: Content is protected !!