ಬೆಳ್ತಂಗಡಿ: ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುಳಿಯ ಜ್ಯುವೆಲ್ಸ್ ಪ್ರಸ್ತುತ ಪಡಿಸುವ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮವು ಸೆ.9 ರಂದು ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ನಡೆಯಿತು.

ಕಾರ್ಯಕ್ರಮದ ತೀರ್ಪುಗಾರರಾಗಿ ವಾಣಿಜ್ಯ ಶಾಸ್ತ್ರದ ಉಪನ್ಯಾ ಸಕಿ ಹಾಗೂ ಜಾನಪದ ಕಲಾವಿದೆ ಹೇಮಾವತಿ ಹಾಗೂ ಎಸ್. ಡಿ.ಎಂ ಶಿಕ್ಷಣ ಸಂಸ್ಥೆಯ ಯಕ್ಷಗಾನ ತರಬೇತುದಾರರಾದ ಅರುಣ್ ಧರ್ಮಸ್ಥಳ ಆಗಮಿಸಿ, ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಪ್ರಿಯಾ, ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನ ಶಾಖಾ ಪ್ರಬಂಧಕರಾದ ಅಶೋಕ್ ಬಿ ಬಂಗೇರ, ಉಪ ಶಾಖಾ ಪ್ರಬಂಧಕರಾದ ಲೋಹಿತ್ ಕುಮಾರ್, ಕೃಷ್ಣ ವೇಷ ಸ್ಪರ್ಧೆಗಳಾದ ಮುದ್ದು ಕೃಷ್ಣ, ಬಾಲ ಕೃಷ್ಣ, ಹಾಗೂ ರಾಧಾ ಕೃಷ್ಣ ಸ್ಪರ್ಧೆ ಭಾಗವಹಿಸಿದ್ದ ಮಕ್ಕಳು ಪೋಷಕರು ಹಾಗೂ ಮುಳಿಯ ಜ್ಯುವೆಲ್ಸ್ ನ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದಯ್ ಕುಮಾರ್ ಲಾಯಿಲ ನಿರೂಪಿಸಿದರು.













