28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಗ್ರಾ. ಪಂ. ನಲ್ಲಿ ಮೀನು ಕೃಷಿ ಮತ್ತು ಸಿಹಿ ನೀರಿನ ಮುತ್ತು ಕೃಷಿ ಕಾರ್ಯಾಗಾರ

ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮೀನುಗಾರಿಕಾ ಇಲಾಖೆಯ ನೇತೃತ್ವದಲ್ಲಿ ಬೆಳಾಲು ಗ್ರಾ. ಪಂ. ಹಾಗೂ ಬೆಳಾಲು C. A. ಬ್ಯಾಂಕ್ ಸಹಯೋಗದಲ್ಲಿ ಸೆ. 08 ರಂದು ತಾಲೂಕಿನ ಪ್ರಥಮ ಸಮಗ್ರ ಮೀನು ಕೃಷಿ ಮತ್ತು ಸಿಹಿ ನೀರಿನ ಮುತ್ತು ಕೃಷಿ ಕಾರ್ಯಾಗಾರ ಹಾಗೂ ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಬೆಳಾಲು ಗ್ರಾ.ಪಂ. ಅಧ್ಯಕ್ಷರು ವಿದ್ಯಾ ಶ್ರೀನಿವಾಸ ಗೌಡರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಅಧ್ಯಕ್ಷತೆ ವಹಿಸಿದ್ದರು.

ಬೆಳಾಲಿನ ಶಾಲಿನಿ ಮತ್ತು ತಂಡದವರು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು.ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಮಂಜುಳಾಶ್ರೀ ಶೆಣೈ ಸ್ವಾಗತಿಸಿ, ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮೀನು ಮತ್ತು ಸಿಹಿ ನೀರಿನ ಮುತ್ತು ಕೃಷಿಯ ಬಗ್ಗೆ ತರಬೇತಿದಾರರಾದ ನವೀನ್ ಐವರ್ನಾಡು ವಿಡಿಯೋ ಪ್ರದರ್ಶನದ ಮೂಲಕ ವಿವರವಾದ ಮಾಹಿತಿ ನೀಡಿದರು. ಬೆಳ್ತಂಗಡಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಇಲಾಖೆಯ ಸೌಲಭ್ಯಗಳ ಬಗ್ಗೆ ಹಾಗೂ ಕೃಷಿಕರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ, ಬೆಳಾಲಿನ ಜನರಿಗೆ ಇಲಾಖೆಯೊಂದಿಗೆ ಇರುವ ನಿಕಟ ಸಂಪರ್ಕದ ಬಗ್ಗೆ ತಿಳಿಸಿದರು.

ಅತಿಥಿಗಳಾಗಿದ್ದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಮಧುರ ಹಾಗೂ ಬೆಳಾಲು C. A. ಬ್ಯಾಂಕಿನ CEO ನಾರಾಯಣ ಗೌಡರು ಕಾರ್ಯಾಗಾರದ ಕುರಿತು ತಮ್ಮ ಅನಿಸಿಕೆ ಹೇಳಿದರು.

ಕಾರ್ಯಾಗಾರದ ಮುಖ್ಯ ಸಂಯೋಜಕರಾಗಿದ್ದ ಬೆಳಾಲು C. A. ಬ್ಯಾಂಕಿನ ನಿರ್ದೇಶಕ ಸುಲೈಮಾನ್ ಬೆಳಾಲು ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಕೃಷಿಕರು ಅಲ್ಲದೆ ಬೇರೆ ಬೇರೆ ಊರುಗಳಿಂದ ರೈತರು ಭಾಗವಹಿಸಿದ್ದರು. ಮಂಜುಳಶ್ರೀ ಧನ್ಯವಾದ ಸಲ್ಲಿಸಿದರು.

Related posts

ಬಳಂಜ : ಬೋಂಟ್ರೊಟ್ಟುಗುತ್ತು ದೈವಸ್ಥಾನದಲ್ಲಿ ಮಹಾ ಚಂಡಿಕಾಯಾಗ: ವಿಧಾನಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಸಹಿತ ನೂರಾರು ಭಕ್ತರು ಭಾಗಿ

Suddi Udaya

ಮದ್ದಡ್ಕದಲ್ಲಿ ಸ್ಕೂಟಿ ಹಾಗೂ ಆಪೆ ರಿಕ್ಷಾ ಡಿಕ್ಕಿ

Suddi Udaya

ಮದ್ದಡ್ಕದಿಂದ ಪಲ್ಕೆ ಬಲ್ಕತ್ಯಾರು ಸಮೀಪ ಟ್ರಾನ್ಸ್‌ಫಾರ್ಮರಿಗೆ ಸುತ್ತುವರಿದ ಬಳ್ಳಿ, ಗಿಡ ಗಂಟಿಗಳು: ತೆರವಿಗೆ ಮೆಸ್ಕಾಂ ಇಲಾಖೆಗೆ ಗ್ರಾಮಸ್ಥರ ಒತ್ತಾಯ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಉಪ್ಪಿನಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ವಾರ್ಷಿಕ ಜಾತ್ರೋತ್ಸವ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಸತೀಶ್ ಕಾಶಿಪಟ್ಣ ಅವರಿಗೆ ಸನ್ಮಾನ

Suddi Udaya
error: Content is protected !!