23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ: ಉಪ್ಪಾರಪಳಿಕೆ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಆಚರಣೆ

ಕೊಕ್ಕಡ: ಶ್ರೀ ಕೃಷ್ಟ ಭಜನಾಮಂದಿರ ಉಪ್ಪಾರಪಳಿಕೆ ಕ್ರೀಡಾಂಗಣದಲ್ಲಿ 24ನೇ ವರ್ಷದ ಅಷ್ಟಮಿ ಆಚರಣೆ ಶ್ರದ್ದಾ ಗೆಳೆಯರ ಬಳಗ ಅಷ್ಟಮಿ ಆಚರಣ ಸಮಿತಿ ಮೂಲಕ ನಡೆಯಿತು.

ಕಾರ್ಯಕ್ರಮವು ಶ್ರದ್ದಾ ಗೆಳೆಯರ ಬಳಗ ಅಧ್ಯಕ್ಷ ಶ್ರೀಧರ್ ದೇರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೌತಡ್ಕ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಮುಂಡ್ರುಪ್ಪಾಡಿ ಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿ ಸನಾತನ ಧರ್ಮದ ಅಷ್ಟಮಿ ಆಚರಣೆ ಹಿಂದೂ ಧರ್ಮ ಒಗ್ಗೂಡುವಿಕೆ ಮೂಲಕ ಸಮಾಜಕ್ಕೆ ಧರ್ಮ ಸಂದೇಶ ಸಾರುತದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷರು ಶ್ರೀಮತಿ ಬೇಬಿ ಮಾತನಾಡಿ ಶುಭ ಹಾರೈಸಿದರು.. ಕೊಕ್ಕಡ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಗೌಡ ಮಲ್ಲಿಗೆ ಉಪಸ್ಥಿತರಿದ್ದರು.

ಶ್ರದ್ದಾ ಗೆಳೆಯರ ಬಳಗದ ಗೌರವ ಸಲಹೆಗಾರರು ಯೋಗೀಶ್ ಅಲಂಬಿಲ ಕಾರ್ಯಕ್ರಮ ನಿರೂಪಿಸಿದರು.. ಕುಶಾಂತ್ ಸ್ವಾಗತಿಸಿ, ಗೋಪಾಲ ಅಲಂಬಿಲ ವಂದಿಸಿದರು, ಬಳಿಕ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ಶ್ರೀನಾಥ್ ಬಡೆಕಾಯಿಲ್, ನವೀನ್ ಅಲಂಬಿಲ, ಶಿವಾನಂದ್ ಸಂಕೇಶ, ದಾಮೋದರ್ ಅಜ್ಜಾವರ, ಬಾಲಕೃಷ್ಣ ಬಳಕ್ಕ, ಶ್ರೀಕಾಂತ್ ಬಡೆಕಾಯಿಲ್, ಆನಂದ ಅಡೈ, ರಮೇಶ್ ಕುಡ್ಲ ಶ್ರದ್ದಾ ಗೆಳೆಯರ ಬಳಗ ಸದಸ್ಯರು, ಗ್ರಾಮಸ್ಥರು ಸಹಕರ ನೀಡಿದರು.

Related posts

ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ “ಮುದ್ದಿಗೆ ಶಾಖೆ” ಉದ್ಘಾಟನೆ

Suddi Udaya

ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬಜಿರೆ ಒಕ್ಕೂಟದ ಪದಗ್ರಹಣ ಹಾಗೂ 19ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಶುಭವಿವಾಹ ಐಶ್ವರ್ಯ-ಸ್ಕಂದ

Suddi Udaya

ಉಜಿರೆ ಶ್ರೀ ಧ.ಮಂಜುನಾಥೇಶ್ವರ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya
error: Content is protected !!