22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಅಬಲೆಯರ ಪುನರ್ವಸತಿ ಕೇಂದ್ರ “ಸೇವಾಶ್ರಮ”ದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಆಚರಣೆ

ವೇಣೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ಬಿ.ಜೆ.ಪಿ.ಮಂಡಲದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಹಯೋಗದಿಂದ ಗುಂಡೂರಿ ಗ್ರಾಮದಲ್ಲಿರುವ ಅಬಲೆಯರ ಪುನರ್ವಸತಿ ಕೇಂದ್ರ ಸೇವಾಶ್ರಮದಲ್ಲಿ ಪ್ರಧಾನಿ ಮೋದೀಜಿಯವರ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಸೆ.17 ರಂದು ಆಚರಿಸಲಾಯಿತು.


ಮೋದೀಜಿಯವರ ನಾಯಕತ್ವವು ಪ್ರಬಲವಾಗಲು ಮತ್ತು ದೇಶದ ಬಿ.ಜೆ.ಪಿ ಸರ್ವ ಕಾರ್ಯಕರ್ತರ ನಾಯಕತ್ವವು ಉತ್ತಮ ಗುಣಮಟ್ಟದ್ದಾಗಲು ಈ ಮೂಲಕ ಇನ್ನೂ ಹೆಚ್ಚಿನ ದೇಶದ ಅಭಿವೃದ್ಧಿ ಆಗಲು ಸೇವಾಶ್ರಮದ ಆರಾಧ್ಯ ಗುರು ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಸಲ್ಲಿಸಿ, ಸೇವಾಶ್ರಮದ ಆಶ್ರಮವಾಸಿಗಳಿಗೆ ಫಲವಸ್ತು ಹಾಗೂ ಒಂದು ಕಿಂಟ್ವಾಲ್ ಅಕ್ಕಿ ನೀಡಿ ಕಾರ್ಯಕರ್ತರಿಂದ ಸಂಭ್ರಮಾಚರಿಸಲಾಯಿತು.


ಈ ಸಂದರ್ಭದಲ್ಲಿ ವೇಣೂರು ಪಂಚಾಯತ್ ಅಧ್ಯಕ್ಷ ನೇಮಯ್ಯಕುಲಾಲ್, ಸದಸ್ಯರಾದ ಸಂಭಾಷಿಣಿ ಉದಯಕುಮಾರ್, ಹರೀಶ್ ಪಿ.ಎಸ್, ಅರುಣ್ ಹೆಗ್ಡೆ ಕರಿಮಣೇಲು ,ದಿನೇಶ್ ತಾರಿಪಡ್ಪು, ಕಾರ್ಯಕರ್ತರಾದ ಪ್ರಶಾಂತ್ ಹೆಗ್ಡೆ, ಗಿರೀಶ್ ಕುಲಾಲ್, ಪ್ರತೀಶ್ ಹೊಸಂಗಡಿ, ಸತೀಶ್ ಪೆರಿಂಜೆ, ಮತ್ತಿತ್ತರು ಉಪಸ್ಥಿತರಿದ್ದರು.


ಕೃಷಿ ಪತ್ತಿನ ಸಹಕಾರಿ ಸಂಘ ಇದರ ಅಧ್ಯಕ್ಷ ಸುಂದರ ಹೆಗ್ಡೆ‌ ಮೋದೀಜಿಯವರ ಜನ್ಮದಿನದ ಬಗ್ಗೆ ಪ್ರಸ್ತಾಪನೆ ಗೈದರು. ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಸ್ವಾಗತಿಸಿದರು.

Related posts

ಅಶ್ರಫ್ ಆಲಿಕುಂಞಿ (ಅಚ್ಚು) ಮುಂಡಾಜೆ ಅವರಿಗೆ ಲಯನ್ಸ್ ಜಿಲ್ಲಾ “ಗೋಲ್ಡನ್ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್” ಪುರಸ್ಕಾರ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ವಿಜೃಂಭಣೆಯ ಎಕ್ಸೆಲ್ ಪರ್ಬ, ಪ್ರತಿಭಾ ಪುರಸ್ಕಾರ

Suddi Udaya

ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನಕ್ಕೆ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಬಾರ್ಯ: ಅಕ್ರಮ ಗೋ ಮಾಂಸ ಮಾರಾಟ: ಪ್ರಕರಣ ದಾಖಲು

Suddi Udaya

ಜ.11: ನಾರಾವಿಯಲ್ಲಿ ನೂತನ ಗುರು ಮಂದಿರ, ಭಜನಾ ಮಂದಿರ ಉದ್ಘಾಟನೆ ಹಾಗೂ 171ನೇ ವರ್ಷದ ಗುರು ಜಯಂತಿ ಆಚರಣೆ

Suddi Udaya

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

Suddi Udaya
error: Content is protected !!