23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಅಬಲೆಯರ ಪುನರ್ವಸತಿ ಕೇಂದ್ರ “ಸೇವಾಶ್ರಮ”ದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಆಚರಣೆ

ವೇಣೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ಬಿ.ಜೆ.ಪಿ.ಮಂಡಲದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಹಯೋಗದಿಂದ ಗುಂಡೂರಿ ಗ್ರಾಮದಲ್ಲಿರುವ ಅಬಲೆಯರ ಪುನರ್ವಸತಿ ಕೇಂದ್ರ ಸೇವಾಶ್ರಮದಲ್ಲಿ ಪ್ರಧಾನಿ ಮೋದೀಜಿಯವರ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಸೆ.17 ರಂದು ಆಚರಿಸಲಾಯಿತು.


ಮೋದೀಜಿಯವರ ನಾಯಕತ್ವವು ಪ್ರಬಲವಾಗಲು ಮತ್ತು ದೇಶದ ಬಿ.ಜೆ.ಪಿ ಸರ್ವ ಕಾರ್ಯಕರ್ತರ ನಾಯಕತ್ವವು ಉತ್ತಮ ಗುಣಮಟ್ಟದ್ದಾಗಲು ಈ ಮೂಲಕ ಇನ್ನೂ ಹೆಚ್ಚಿನ ದೇಶದ ಅಭಿವೃದ್ಧಿ ಆಗಲು ಸೇವಾಶ್ರಮದ ಆರಾಧ್ಯ ಗುರು ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಸಲ್ಲಿಸಿ, ಸೇವಾಶ್ರಮದ ಆಶ್ರಮವಾಸಿಗಳಿಗೆ ಫಲವಸ್ತು ಹಾಗೂ ಒಂದು ಕಿಂಟ್ವಾಲ್ ಅಕ್ಕಿ ನೀಡಿ ಕಾರ್ಯಕರ್ತರಿಂದ ಸಂಭ್ರಮಾಚರಿಸಲಾಯಿತು.


ಈ ಸಂದರ್ಭದಲ್ಲಿ ವೇಣೂರು ಪಂಚಾಯತ್ ಅಧ್ಯಕ್ಷ ನೇಮಯ್ಯಕುಲಾಲ್, ಸದಸ್ಯರಾದ ಸಂಭಾಷಿಣಿ ಉದಯಕುಮಾರ್, ಹರೀಶ್ ಪಿ.ಎಸ್, ಅರುಣ್ ಹೆಗ್ಡೆ ಕರಿಮಣೇಲು ,ದಿನೇಶ್ ತಾರಿಪಡ್ಪು, ಕಾರ್ಯಕರ್ತರಾದ ಪ್ರಶಾಂತ್ ಹೆಗ್ಡೆ, ಗಿರೀಶ್ ಕುಲಾಲ್, ಪ್ರತೀಶ್ ಹೊಸಂಗಡಿ, ಸತೀಶ್ ಪೆರಿಂಜೆ, ಮತ್ತಿತ್ತರು ಉಪಸ್ಥಿತರಿದ್ದರು.


ಕೃಷಿ ಪತ್ತಿನ ಸಹಕಾರಿ ಸಂಘ ಇದರ ಅಧ್ಯಕ್ಷ ಸುಂದರ ಹೆಗ್ಡೆ‌ ಮೋದೀಜಿಯವರ ಜನ್ಮದಿನದ ಬಗ್ಗೆ ಪ್ರಸ್ತಾಪನೆ ಗೈದರು. ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಸ್ವಾಗತಿಸಿದರು.

Related posts

ಡಿ.17: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಕೋರಿ ಜಾತ್ರೆ’

Suddi Udaya

ವೇಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ಫ್ಯಾನ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಚಯರ್ ವಿತರಣೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಬೆಳ್ತಂಗಡಿ ರೈತ ಮೋರ್ಚಾ ಬೆಂಬಲ

Suddi Udaya

ಕಳೆಂಜ ಗ್ರಾ.ಪಂ. ಹಾಗೂ ಜನನಿ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ

Suddi Udaya

ಗಸ್ತಿನಲ್ಲಿದ್ದ ಉರ್ವಾ ಠಾಣಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಬೈಕ್ ಸಹಸವಾರನಿಂದ ಹಲ್ಲೆ

Suddi Udaya

ವೈದ್ಯರ ನಿರ್ಲಕ್ಷ್ಯಕ್ಕೆ ವೇಣೂರಿನ ಗರ್ಭಿಣಿ ಮಹಿಳೆ ಕೋಮಸ್ಥಿತಿಯಲ್ಲಿ

Suddi Udaya
error: Content is protected !!