September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವೀರಗಾಥ 3.0 ಪ್ರಾಜೆಕ್ಟ್ ನಲ್ಲಿ ಎಸ್ ಡಿ ಎಂ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ : ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ ” ಶ್ರೀ ಮಂಜುನಾಥ ದಳ” ದ ಕಬ್ಸ್ , ಬುಲ್ ಬುಲ್ಸ್, ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಬೆಳ್ತಂಗಡಿ ಇವರ ಮಾರ್ಗದರ್ಶನದಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಲಹೆ ಮೇರೆಗೆ ವೀರಗಾಥ 3.0 ಆನ್ಲೈನ್ ಸ್ಪರ್ಧೆಯಲ್ಲಿ 9ನೇ ತರಗತಿಯ ಸ್ಕೌಟ್ ವಿದ್ಯಾರ್ಥಿಯಾದ ಆಯುಷ್ ಕೆ. , ಏಳನೇ ತರಗತಿ ಚಿತ್ರಕಲೆ , ಗೈಡ್ ವಿದ್ಯಾರ್ಥಿಯಾದ ಬೃಂದಾ ಎಸ್ 7ನೇ ತರಗತಿ ಚಿತ್ರಕಲೆ, ಗೈಡ್ ವಿದ್ಯಾರ್ಥಿಯಾದ ರಿತಿಕಾ ಶೆಣೈ 7ನೇ ತರಗತಿ ಚಿತ್ರಕಲೆ, ಸ್ಕೌಟ್ ವಿದ್ಯಾರ್ಥಿಯಾದ ಶಾಶ್ವತ್ ಎಸ್ ಕುಮಾರ್ ಎಂಟನೇ ತರಗತಿ ಕವನ ರಚನೆ, ಗೈಡ್ ವಿದ್ಯಾರ್ಥಿಯಾದ ಸಿಂಚನ 9ನೇ ತರಗತಿ ಪ್ರಬಂಧ ಸ್ಪರ್ಧೆ, ಗೈಡ್ ವಿದ್ಯಾರ್ಥಿಯಾದ ಯಶ್ವಿತಾ ಏಳನೇ ತರಗತಿ ಪ್ರಬಂಧ ಸ್ಪರ್ಧೆ, ಬುಲ್ ಬುಲ್ ವಿದ್ಯಾರ್ಥಿಯಾದ ಉನ್ನತಿ ಎಸ್ ನಾಲ್ಕನೇ ತರಗತಿ ಚಿತ್ರಕಲೆ, ಸ್ಕೌಟ್ ವಿದ್ಯಾರ್ಥಿಯಾದ ರಕ್ಷಣ್ ಶೆಟ್ಟಿ 7ನೇ ತರಗತಿ ಕವನ ರಚನೆ, ಗೈಡ್ ವಿದ್ಯಾರ್ಥಿಯಾದ ಗೌತಮಿ ಚಿತ್ರಕಲೆ 7ನೇ ತರಗತಿ, ಸ್ಕೌಟ್ ವಿದ್ಯಾರ್ಥಿಯಾದ ಆಶಿಶ್ ಆರ್ ಕಾಮತ್ ಏಳನೇ ತರಗತಿ ಚಿತ್ರಕಲೆ ಇವರುಗಳು ಭಾಗವಹಿಸಿ ಪ್ರಶಸ್ತಿ ಪತ್ರವನ್ನು ತಮ್ಮದಾಗಿಸಿಕೊಂಡಿರುತ್ತಾರೆ.

ಇವರಿಗೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತರು ಆಗಿರುವ ಬಿ ಸೋಮಶೇಖರ್ ಶೆಟ್ಟಿ ಅವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ರವರ ಪ್ರೋತ್ಸಾಹ ಹಾಗೂ ಸಹಕಾರದೊಂದಿಗೆ ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪತ್ರವನ್ನು ತಮ್ಮದಾಗಿಸಿಕೊಂಡಿರುತ್ತಾರೆ.

Related posts

ಹುಣ್ಸೆಕಟ್ಟೆ ಪಲ್ಕೆ ನಿವಾಸಿ ನಾರಾಯಣ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಎಕ್ಸಲೆಂಟ್ ಕಾಲೇಜಿನಲ್ಲಿ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಸಮಾರೋಪ

Suddi Udaya

ಮದ್ದಡ್ಕ ಮಸ್ಜಿದ್‌ನ ನೂತನ ಆಡಳಿತ ಕಚೇರಿ ಉದ್ಘಾಟನೆ

Suddi Udaya

ಗೇರುಕಟ್ಟೆ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯಿಂದ ಗೇರುಕಟ್ಟೆ ಶ್ರೀ ಗಣೇಶೋತ್ಸವ ಸಮಿತಿಯ ಸಭಾಂಗಣಕ್ಕೆ 50 ಚಯರ್ ಕೊಡುಗೆ

Suddi Udaya

ಮಹಿಳೆಯ ಕುತ್ತಿಗೆಯಿಂದ ಸರ ಎಳೆದು ಪರಾರಿ ಪ್ರಕರಣ: 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರರ 79ನೇ ಹುಟ್ಟು ಹಬ್ಬದ ಆಚರಣೆ, ಬೃಹತ್ ರಕ್ತದಾನ ಶಿಬಿರ ಹಾಗೂ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಲ್ಲಿ ಸಹಕರಿಸಿದ ದಾನಿಗಳಿಗೆ ಅಭಿನಂದನೆ

Suddi Udaya
error: Content is protected !!