ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಅರಸಿನಮಕ್ಕಿ ಪಂ.ಅ. ಅಧಿಕಾರಿಯವರಿಗೆ ಮನವಿ

Suddi Udaya

ಅರಸಿನಮಕ್ಕಿ: ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಅರಸಿನಮಕ್ಕಿ ಗ್ರಾ.ಪಂ. ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ನೀಡಿದರು.

ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಪೇಟೆಯಿಂದ ಕೊಕ್ಕಡದ ಕಾಪಿನಬಾಗಿಲಿನ ವರೆಗೆ ಡಾಮರು ರಸ್ತೆಯ ಎರಡೂ ಬದಿಯಿಂದ ಮರಗಳು ಗಿಡಗಂಟಿಗಳು ಬೆಳೆದು ವಾಹನ ಸವಾರರಿಗೆ ಭಾರಿ ಅನಾನುಕೂಲವಾಗಿರುತ್ತದೆ ಹಾಗೂ ರಸ್ತೆ ಬದಿ ಮರಗಿಡಗಳು ಬೆಳೆದು ರಸ್ತೆ ಕಾಣದ ಹಾಗೆ ಇರುವುದರಿಂದ ಅಪಘಾತಗಳು ಆಗುವ ಸಂಭಾವ ಇದೆ ಎಂದು ಕೂಡಲೇ ತೆರವುಗೊಳಿಸುವಂತೆ ಅರಸಿನಮಕ್ಕಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಅರಸಿನಮಕ್ಕಿಯವರಾದ ಅವಿನಾಶ್ ಬಿಢೆ, ಬಿ ಅಚ್ಚುತ, ಬಿ ಅಬ್ಬಾಸ್, ರವಿ ಶೆಟ್ಟಿ, ಕಾಶಿನಾಥ್, ಪಿ ರವಿ, ಪರಮೇಶ್ವರ, ರಾಕೇಶ್ ಶೆಟ್ಟಿ, ಗುರುಪ್ರಸಾದ್, ಕೆ.ಕೆ ರಾಜ, ಶ್ರೀಕರ ಬಿಢೆ, ಸ್ತುತಿ ಬಿಢೆ, ಭವ್ಯ, ಕೃಷ್ಣಪ್ಪ ಗೌಡ, ವಿಜಯ್ ಕುಮಾರ್, ಸುಂದರ ಶೆಟ್ಟಿಗಾರ್ ಹಾಗೂ ಇನ್ನೀತರರು ಮನವಿಯನ್ನು ನೀಡಿದ್ದಾರೆ.

Leave a Comment

error: Content is protected !!