23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಬೆಳ್ತಂಗಡಿ ಲೋಬೊ ಮೋಟಾರ್‍ಸ್‌ನಲ್ಲಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್: ಗ್ರಾಹಕರಿಗೆ ರೂ.10 ಸಾವಿರ ತನಕ ಉಳಿತಾಯ ಮಾಡುವ ಸುವರ್ಣ ಅವಕಾಶ

ಬೆಳ್ತಂಗಡಿ: ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್, ಬೆಳ್ತಂಗಡಿ ಸಂತೆಕಟ್ಟೆ ಬಳಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಪ್ರಸಿದ್ದ ಲೋಬೊ ಮೋಟಾರ್‍ಸ್‌ನಲ್ಲಿ ಮತ್ತು ಮಡಂತ್ಯಾರು ಕಾಲೇಜು ರಸ್ತೆ ಸೋಜಾ ಕಾಂಪ್ಲೆಕ್ಸ್‌ನಲ್ಲಿರುವ ಲೋಬೊ ಮೋಟಾರ್ಸ್‌ನಲ್ಲಿ ಟಿವಿಎಸ್ ಕಂಪೆನಿಯ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಟಿ.ವಿ.ಎಸ್ ಮೋಟಾರ್‌ನಲ್ಲಿ ಹಬ್ಬಗಳ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ ಎಂದು ಸಂಸ್ಥೆಯ ಮಾಲಕರಾದ ಆರ್. ಲೋಬೋ ತಿಳಿಸಿದ್ದಾರೆ.

ಅತೀ ಕಡಿಮೆ ಬಡ್ಡಿ ದರದಲ್ಲಿ ಆಯ್ದು ವಾಹನಗಳಿಗೆ ಸಾಲ ಸೌಲಭ್ಯ, ಖಾಸಗಿ ಮತ್ತು ಸರಕಾರಿ ನೌಕರ ಮಹಿಳೆಯರಿಗೆ ವಿಶೇಷ ರಿಯಾಯಿತಿ ಲಭ್ಯವಿದೆ. 4999 ರಿಂದ ಮುಂಗಡ ಪೇಮೆಂಟ್ ಹಾಗೂ ಬಡ್ಡಿ ಕೇವಲ ಶೇ.6.99 ಆಗಿರುತ್ತದೆ ಹಾಗೂ ನಿಮ್ಮ ಯಾವುದೇ ವಾಹನಗಳ ಹೊಸ ಇನ್ಸೂರೆನ್ಸ್ ಮತ್ತು ರಿನಿವಲ್ ಅತೀ ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು.

ಲೋಬೋ ಶೋರೂಮ್ ನಲ್ಲಿ ವಾಹನ ಖರೀದಿಸುವ ಗ್ರಾಹಕರಿಗೆ ಉಚಿತ ಪೆಟ್ರೋಲ್, ಉಚಿತ ಟಿವಿಎಸ್ ಹೆಲ್ಮೆಟ್, ಒಂದು ವರ್ಷ ಉಚಿತ ಹಾಗೂ ಎಕ್ಸ್‌ಪ್ರೆಸ್ ಸರ್ವಿಸ್, ೦% ಪೊಸೆಸ್ಸಿಂಗ್ ಚಾರ್ಜ್, 2 ಸಾವಿರ ಎಕ್ಸ್ಚೇಂಜ್ ಬೋನಸ್, ಉಚಿತ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್, ಸರಳ ದಾಖಲೆ ಪತ್ರದೊಂದಿಗೆ 95% ಸಾಲ ಸೌಲಭ್ಯ, ಅತೀ ಕಡಿಮೆ ಮುಂಗಡ ಪಾವತಿ ಯಾವುದೇ ಹಳೆಯ ದ್ವಿಚಕ್ರ ವಾಹನ ಟಿವಿಎಸ್ ನೊಂದಿಗೆ ಬದಲಾಯಿಸಿದಲ್ಲಿ ರೂ.2000 ಬೋನಸ್ ಪಡೆಯುವ ಸುವರ್ಣ ಅವಕಾಶ ಇದೆ. ಈ ಉತ್ಸವದಲ್ಲಿ ಗ್ರಾಹಕರಿಗೆ ರೂ. ಹತ್ತು ಸಾವಿರ ವರೆಗೆ ನಗದು ಉಳಿಸಬಹುದಾಗಿದೆ.

ವಿಶೇಷವಾಗಿ ಗ್ರಾಹಕರ ಅನುಕೂಲಕ್ಕಾಗಿ ಹಬ್ಬದ ಸಂದರ್ಭ ಆದಿತ್ಯವಾರವೂ ಲೋಬೋ ಶೋರೂಮ್ ಮಧ್ಯಾಹ್ನ ಗಂಟೆ 2ರವರೆಗೆ ತೆರೆದಿರುತ್ತದೆ. ಉಜಿರೆಯ ಚಾರ್ಮಾಡಿಯ ಹಳ್ಳಿ ಮನೆ ಬಳಿ ಫೆಸ್ಟಿವಲ್ ಕೌಂಟರ್ ತೆರೆಯಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶೋರೂಂನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Related posts

ಸಿ.ಬಿ.ಎಸ್.ಇ ಫಲಿತಾಂಶ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಬೆಳ್ತಂಗಡಿ: ವಾಣಿ ಪ.ಪೂ. ಕಾಲೇಜಿನ ಎನ್. ಎಸ್. ಎಸ್. ವಿದ್ಯಾರ್ಥಿ ತೇಜಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Suddi Udaya

ಉಜಿರೆ: ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಉಪಾಧ್ಯಕ್ಷರಾಗಿ ದಿವಾಕರ ಭಂಡಾರಿ

Suddi Udaya

ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆ: ಕೊಕ್ರಾಡಿ ಸ.ಪ್ರೌ. ಶಾಲೆಯ ಶಿಕ್ಷಕಿ ಅಕ್ಕಮ್ಮ ರವರಿಗೆ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ

Suddi Udaya

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಪಡಂಗಡಿಯಲ್ಲಿ ಎನ್.ಐ.ಎ ಅಧಿಕಾರಿಗಳ ಕಾರ್ಯಾಚರಣೆ: ನೌಷದ್ ತಂಗಿ, ತಾಯಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಚೈನೈನಿಂದ ಬಂದ ಡಿವೈಎಸ್ಪಿ ವಿಘ್ನೇಶ್ ನೇತೃತ್ವದ ತಂಡ

Suddi Udaya
error: Content is protected !!