ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ ಸಂಘ ಬೆಳ್ತಂಗಡಿ ಇದರ 2023-24 ನೇ ಸಾಲಿನ ಮಹಾಸಭೆಯು ವಿಶ್ವಕರ್ಮ ಸಭಾಭವನದಲ್ಲಿ ಇತ್ತೀಚೆಗೆ ಸಂಘದ ಅಧ್ಯಕ್ಷ ಗೋಪಾಲ ಆಚಾರ್ಯ ಕನ್ನಾಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿ.ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಉಪಾಧ್ಯಕ್ಷರಾಗಿ ಎನ್. ರಾಘವೇಂದ್ರ ಆಚಾರ್ಯ ನೈಕುಳಿ, ಕಾರ್ಯದರ್ಶಿಯಾಗಿ ರಾಮ್ ಪ್ರಸಾದ್ ಎನ್ ಎಸ್ ಗುಂಪಲಾಜೆ, ಕೋಶಾಧಿಕಾರಿಯಾಗಿ ಸದಾನಂದ ಆಚಾರ್ಯ ಅಳದಂಗಡಿ, ಜೊತೆ ಕಾರ್ಯದರ್ಶಿಯಾಗಿ ನಾಗಪ್ರಸಾದ್ ಕುಂಠಿನಿ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಕೆ ಸಂತೋಷ್ ಆಚಾರ್ಯ ಕೈಪ್ಲೋಡಿ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಆಡಳಿತ ಮಂಡಳಿಯ ನೂತನ ಕಾರ್ಯಕಾರಿ ಸದಸ್ಯರುಗಳಾಗಿ ರಮೇಶ್ ಆಚಾರ್ಯ ಮದ್ದಡ್ಕ, ಗೋಪಾಲ ಆಚಾರ್ಯ ಕನ್ನಾಜೆ, ಪುರುಷೋತ್ತಮ ಆಚಾರ್ಯ ಕನ್ನಾಜೆ, ಸೀತಾರಾಮ ಆಚಾರ್ಯ ವೇಣೂರು, ಉಪೇಂದ್ರ ಆಚಾರ್ಯ ಸವಣಾಲು, ಹರೀಶ್ ಆಚಾರ್ಯ ಲಾಯಿಲ, ಬಿ.ಕೆ ಹರಿಪ್ರಸಾದ್ ಆಚಾರ್ಯ ಬೆಳ್ತಂಗಡಿ, ಸೀತಾರಾಮ ಆಚಾರ್ಯ ಕೆರಳೆಕೋಡಿ, ಪ್ರಕಾಶ್ ಆಚಾರ್ಯ ಅಲ್ಲಾಟಬೈಲು, ಶಿವಪ್ರಸಾದ್ ಪುರೋಹಿತ್ ಸವಣಾಲು, ಯೋಗೀಶ್ ಆಚಾರ್ಯ ಸವಣಾಲು, ಉಮೇಶ್ ಆಚಾರ್ಯ ಕಾನರ್ಪ, ಜಗದೀಶ್ ಆಚಾರ್ಯ ಮಾಪಲಾಡಿ, ಅಶೋಕ್ ಆಚಾರ್ಯ ಮದ್ದಡ್ಕ, ಗಣೇಶ್ ಆಚಾರ್ಯ ಮದ್ದಡ್ಕ, ಬಿ.ಕೆ ದೇವಿಪ್ರಸಾದ್ ಬೆಳ್ತಂಗಡಿ, ಕೆ.ನಾರಾಯಣ ಆಚಾರ್ಯ ಹೆಟ್ಲೊಟ್ಟು ಸವಣಾಲು, ಹರಿಶ್ಚಂದ್ರ ಆಚಾರ್ಯ ಶ್ರೀ ಗಣೇಶ್ ಜುವೆಲ್ಲರ್ಸ್ ಬೆಳ್ತಂಗಡಿ, ಜಯರಾಮ ಆಚಾರ್ಯ ಅಚ್ಚಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಸೀತಾರಾಮ ಆಚಾರ್ಯ ವೇಣೂರು ಸ್ವಾಗತಿಸಿ, ಯೋಗೀಶ್ ಆಚಾರ್ಯ ನಿರೂಪಿಸಿ, ರಾಮ್ ಪ್ರಸಾದ್ ಎನ್.ಎಸ್ ವಂದಿಸಿದರು.













