22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಹಳೇಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮಾದಕ ದ್ರವ್ಯದ ವ್ಯಸನದ ವಿರುದ್ದ ಜನಜಾಗೃತಿ ಅಭಿಯಾನ

ಉಜಿರೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಹಾಗೂ ಎಲ್ಲಾ ಕರಿಯ ಅಂಗ ಸಂಸ್ಥೆ & ಗಲ್ಫ್ ಘಟಕ ಮತ್ತು ಅಲ್ – ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಹಳೇಪೇಟೆ ಇದರ ಸಹಯೋಗದೊಂದಿಗೆ ಮಾದಕ ದ್ರವ್ಯದ ವ್ಯಸನದ ವಿರುದ್ದ ಜನಜಾಗೃತಿ ಅಭಿಯಾನ ನ. 17 ರಂದು ಬದ್ರುಲ್ ಹುದಾ ಮದರಸ ಹಾಲ್ ಹಳೇಪೇಟೆ ಉಜಿರೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಇಸ್ಮಾಯಿಲ್ ಮದನಿ ಅಲ್ ಆದಿ ತಂಗಳ್ ಉಜಿರೆ ದುವಾ ನೆರವೇರಿಸಿದರು. ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಮುದರ್ರಿಸ್, ಎಮ್.ಜೆ ಎಮ್. ಉಜಿರೆ ಉದ್ಘಾಟಿಸಿ ಯುವ ಜನರೇ ಎಚ್ಚರ ಮಾದಕ ವಸ್ತುಗಳ ಸೇವನೆ ನಾವೇ ಸಾವಿಗೆ ಆಹ್ವಾನ ಕೊಟ್ಟಂತೆ ಎಂದು ಹೇಳಿದರು.

ಕಾರ್ಯಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಧನ್ ರಾಜ್ ಟಿ.ಎಮ್ ಮಾತನಾಡುತ್ತಾ ಮಾದಕ ವಸ್ತುಗಳ ವ್ಯಸನ ಕೇವಲ ವ್ಯಕ್ತಿತ್ವಕ್ಕಷ್ಟೇ ಅಲ್ಲ. ಇಡೀ ಸಮಾಜದ ಸ್ವಾಸ್ಥ್ಯಕ್ಕೆ ದೊಡ್ಡ ಬೆದರಿಕೆ ಕುಟುಂಬ ಬದುಕನ್ನೇ ನಾಶ ಮಾಡುವ ಸಾಮಾಗ್ರಿಯಾಗಿದೆ. ಮಾದಕ ಚಟ ಹಾಗೂ ಅದರ ಸಾಗಾಣಿಕೆಯ ದುಷ್ಟರಿಣಾಮಗಳ ಕುರಿತು ಅರಿವು ಮೂಡಿಸುವ ಹಿತ ಮಾತುಗಳನ್ನಾಡಿದರು

ಈ ಸಂದರ್ಭದಲ್ಲಿ ಮೋಹಿಯುದ್ದಿನ್ ಜುಮಾ ಮಸೀದಿ ಅಧ್ಯಕ್ಷ ಬಿ.ಎಮ್ ಅಬ್ದುಲ್ ಹಮೀದ್ ಅವರು ಸಬ್ ಇನ್ಸ್ಪೆಕ್ಟರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು., ವೇದಿಕೆಯಲ್ಲಿ ಯು.ಎ ಹಮೀದ್, ಯು.ಕೆ ಹನೀಫ್, ಎಸ್.ಎಮ್ ಕೋಯಾ ತಂಗಳ್, ಇಸ್ಮಾಯಿಲ್ ಶಾಫಿ, ಇಬ್ರಾಹಿಂ ಅತ್ತಾಜೆ, ಅಬೂಬಕ್ಕರ್ ಮುಗುಳಿ ಹಾಗೂ ಅರಬಿಕ್ ಮದರಸದ ಉಸ್ತಾದ್ ರವರು ಉಪಸ್ಥಿತರಿದ್ದರು,

ಕಾರ್ಯಕ್ರಮವನ್ನು ಅಲ್ ಅಮೀನ್ ಯಂಗ್ ಮೆನ್ಸ್ ಅಧ್ಯಕ್ಷರು ಸ್ವಾಗತಿಸಿದರು, ಕಾರ್ಯದರ್ಶಿ ಫಝಲ್ ರಹಿಮಾನ್ ಕೋಯಾ ಧನ್ಯವಾದಗೈದರು. ಪಝಲ್ ರಹಿಮಾನ್ ಕೋಯ ನಿರೂಪಿಸಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿಂದನೆ ಪ್ರಕರಣ:ಸೌಜನ್ಯ ಮಾವ ವಿಠ್ಠಲ ಗೌಡನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಖಂಡಿಸಿ ಸೂಕ್ತ ಕ್ರಮಕ್ಕೆ ಬೆಳ್ತಂಗಡಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ತಹಶೀಲ್ದಾರ್, ವಿಶೇಷ ತನಿಖಾದಳಕ್ಕೆ, ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಕೆ

Suddi Udaya

ಉಜಿರೆ ಗೌಸಿಯ ಯಂಗ್ ಮೆನ್ಸ್ ನ ನೂತನ ಅಧ್ಯಕ್ಷರಾಗಿ ಸಯ್ಯದ್ ಝೈನುದ್ದೀನ್ ಹಾಗೂ ಕಾರ್ಯದರ್ಶಿಯಾಗಿ ಇಕ್ಬಾಲ್ ಉಜಿರೆ ಆಯ್ಕೆ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Suddi Udaya

ಪ್ರತಿಷ್ಠಿತ ಗಾಂಧಿಗ್ರಾಮ ಪ್ರಶಸ್ತಿಗೆ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆ

Suddi Udaya

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಡಾನೆ ನಿರಂತರ

Suddi Udaya
error: Content is protected !!