September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಇಳಂತಿಲ : ಈಶ್ವರಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಇಳಂತಿಲ : ಈಶ್ವರಿ ಸಂಜೀವಿನಿ ಮಹಿಳಾ ಒಕ್ಕೂಟ( ರಿ)ಇಳಂತಿಲ ಇದರ ವಾರ್ಷಿಕ ಮಹಾಸಭೆಯನ್ನು ನ.21 ರಂದು ಇಳಂತಿಲ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟನೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸವಿತಾ ನೆರವೇರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂಜೀವ ನಾಯ್ಕ್ ಪ್ರಾಸ್ತಾವಿಕ ಮಾತುಗಳನಾಡಿದರು. ಒಕ್ಕೂಟವು ಒಳ್ಳೆಯ ರೀತಿಯಲ್ಲಿ ಮುಂದುವರಿಯಲಿ ಎಂದು ಶುಭಹಾರೈಸಿದರು.

ರಾಜ್ಯ ಪ್ರಶಸ್ತಿ ಪಡೆದ Nrlm ಬ್ಲಾಕ್ ಮ್ಯಾನೇಜರ್ ನಿತೀಶ್ ರವರನ್ನು ಒಕ್ಕೂಟದ ಪರವಾಗಿ ಸನ್ಮಾನಿಸಲಾಯಿತು. Nrlm ಸಂಜೀವಿನಿ ಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ವೀಣಾ ಶ್ರೀ ಒಕ್ಕೂಟದ ಪದಾಧಿಕಾರಿಗಳ ಬದಲಾವಣೆ ಯನ್ನು ನೆರವೇರಿಸಿದರು. ಒಕ್ಕೂಟ ಅಧ್ಯಕ್ಷರು ನಮ್ಮ ಒಕ್ಕೂಟ ಲಾಭದಾಯಕ ರೀತಿಯಲ್ಲಿ ಸಾಗುತಿದೆ. ಅದೇ ರೀತಿ ಇನ್ನು ಮುಂದೆ ಯೂ ಮುಂದುವರಿಯಲಿ. ಸರಕಾರದ ಅನುದಾನಗಳನ್ನು ಸೂಕ್ತ ರೀತಿಯಲ್ಲಿ ಸದಸ್ಯರೆಲ್ಲರೂ ಬಳಸಿಕೊಂಡು. ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಎಂದು ಹಿತ ನುಡಿಗಳನ್ನಾಡಿದರು.

ಶ್ರೀಮತಿ ಶ್ರೀದೇವಿ ಮತ್ತು ಶ್ರೀಮತಿ ನಮಿತಾ ಪ್ರಾರ್ಥನೆ ಹಾಡಿದರು. ಎಮ್.ಬಿ.ಕೆ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಎಲ್.ಸಿ.ಆರ್ ಪಿ ಚೇತನಾ ಸ್ವಾಗತಿಸಿದರು. ಎಲ್.ಸಿ.ಆರ್ ಪಿ ಶಾಲಿನಿ ವರದಿ ಮಂಡನೆ ಮಾಡಿದರು. ಎಮ್.ಬಿ.ಕೆ ಪವಿತ್ರ ಜಮಾ ಖರ್ಚು ವಿವರ ಮಂಡಿಸಿದರು. ಸಂಘ ದ ಸದಸ್ಯೆ ಶ್ರೀಮತಿ ಅಕ್ಷತ ಧನ್ಯವಾದವಿತ್ತರು.

Related posts

ಉಜಿರೆ ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ ವಿವಿಧ ಮಹಿಳಾ ಮಂಡಲಗಳ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ವಾಹನ ಜಾಥಾ ಕಾರ್ಯಕ್ರಮ

Suddi Udaya

ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ರಿಗೆ ದಿ| ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ದೇವರಾಜ್ ಕುಟುಂಬ ಸಮೇತ ಭೇಟಿ

Suddi Udaya

ವೇಣೂರು ಮಹಿಳಾ ಮಂಡಲದ ನೂತನ ಅಧ್ಯಕ್ಷರಾಗಿ ಶ್ರೀಮತಿ ಅಮಿತಾ ಶೇಖರ್ ಆಯ್ಕೆ

Suddi Udaya

ಅಭಿವೃದ್ಧಿ ಶೂನ್ಯ ಬಜೆಟ್: ಕಿರಣ್ ಚಂದ್ರ ಡಿ. ಪುಷ್ಪಗಿರಿ

Suddi Udaya
error: Content is protected !!