ಬಳಂಜ ಬಿಲ್ಲವ ಸಂಘದ ಧತ್ತಿನಿಧಿಗೆ ಹುಂಬೆಜೆ ರಾಮಣ್ಣ ಪೂಜಾರಿ ಸ್ಮರಣಾರ್ಥ ರೂ.10 ಸಾವಿರ ದೇಣಿಗೆ

Suddi Udaya

ಬಳಂಜ: ಇತ್ತೀಚೆಗೆ ನಿಧನರಾದ ದೈವದ ಮದ್ಯಸ್ಥ ನಾಲ್ಕೂರು ಗ್ರಾಮದ ಹುಂಬೆಜೆ ಮನೆಯ ರಾಮಣ್ಣ ಪೂಜಾರಿಯವರ ಸ್ಮರಣಾರ್ಥ ಅವರ ಕುಟುಂಬಿಕರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿನಿಧಿಗೆ ರೂ.10 ಸಾವಿರ ದೇಣಿಗೆಯನ್ಮು ನೀಡಿದರು.

ಬಳಂಜ ಬಿಲ್ಲವ ಸಂಘವು ಕಳೆದ ಎರಡು ದಶಕಗಳಿಂದ ಸಂಘದ ಧತ್ತಿನಿಧಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ನೀಡುತ್ತ ಬರುತ್ತಿದ್ದು ಈ ಯೋಜನೆಗೆ ಹಲವಾರು ಮಂದಿ ದೇಣಿಗೆ ನೀಡಿ ಸಹಕರಿಸಿದ್ದಾರೆ.

ಧತ್ತಿನಿಧಿಯನ್ನು ದಿ.ರಾಮಣ್ಣ ಪೂಜಾರಿಯವರ ಪುತ್ರ ದುಗ್ಗಯ ಪೂಜಾರಿಯವರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ಸದಸ್ಯರು, ದಿ.ರಾಮಣ್ಣ ಪೂಜಾರಿಯವರ ಕುಟುಂಬಿಕರು ಉಪಸ್ಥಿತರಿದ್ದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

Leave a Comment

error: Content is protected !!