22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭೀಷೇಕ ‘ಶ್ರೀಮುಖ ಪತ್ರಿಕೆ’ ಬಿಡುಗಡೆ

ವೇಣೂರು: ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ವೇಣೂರು ಇದರ ವತಿಯಿಂದ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭೀಷೇಕ ಮಹೋತ್ಸವದ ‘ಶ್ರೀಮುಖ ಪತ್ರಿಕೆ’ಯ ಬಿಡುಗಡೆ ಸಮಾರಂಭ ಮೂಡುಬಿದಿರೆ ಶ್ರೀ ಜೈನಮಠದ ಪರಮಪೂಜ್ಯ ‘ಭಾರತಭೂಷಣ’ ಡಾ||ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜೀಯವರ ದಿವ್ಯ ಉಪಸ್ಥಿತಿಯಲ್ಲಿ ಡಿ.27ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಜರುಗಿತು.


ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜೀಯವರು ದೀಪ ಪ್ರಜ್ವಲಿಸಿದರು. ಶ್ರೀಮುಖ ಪತ್ರಿಕೆಯನ್ನು ಮಹಾರಾಷ್ಟ್ರ ನಾಸಿಕ್‌ನ ರವೀಂದ್ರ ಪಾಟೀಲ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಮಹಾಮಸ್ತಕಾಭೀಷೇಕ ಸಮಿತಿಯ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ ಅಜಿಲ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಹಾಮಸ್ತಕಾಭೀಷೇಕ ಸಮಿತಿ ಉಪಾಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್,
ಎಕ್ಸೆಲ್ ಪ.ಪೂ.ಕಾಲೇಜು ಗುರುವಾಯನಕೆರೆಯ ಅಧ್ಯಕ್ಷ ಬಿ. ಸುಮಂತ್ ಕುಮಾರ್ ಜೈನ್ ಭಾಗವಹಿಸಿದ್ದರು.

ಶ್ರೀ ಮತಿ ಸುಪ್ರೀಯ ಪ್ರಾಥ೯ನೆ ಬಳಿಕ ಮಹಾಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು. ಕೆ.ಹೇಮರಾಜ ಬೆಳ್ಳಿಬೀಡು ಮೆಲೋಡಿ, ಶ್ರೀಮತಿ ಮಧುರಾ ಅಜಿಲ ಅಳದಂಗಡಿ ಅರಮನೆ, ಶ್ರೀಮತಿ ಪ್ರಸನ್ನ ಆರ್.ಹೆಗ್ಡೆ ಪಡ್ಡಂದಡ್ಕ, ಎಂ.ಜೀವಂದರ್ ಕುಮಾರ್ ಪಡ್ಯೋಡಿಗುತ್ತು, ಯುವರಾಜ್ ಜೈನ್ ಎಕ್ಸಲೆಂಟ್ ಕಲ್ಲಬೆಟ್ಟು,, ಡಾ. ಶಾಂತಿಪ್ರಸಾದ್ ವೇಣೂರು, ಸ್ವಸ್ತಿಕ್ ಜೈನ್ ಬುಳೇಕ್ಕಾರ ಬೀಡು ಸ್ವಾಮೀಜಿ ಹಾಗೂ ಅತಿಥಿ -ಗಣ್ಯರನ್ನು ಗೌರವಿಸಿದರು.
ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯದರ್ಶಿ ಮಹಾವೀರ್ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆಯಲ್ಲಿ ಪ್ರವೀಣ್ ರವರ ಮಾಲೀಕತ್ವದ ಶ್ರೀ ಗಣೇಶ್ ಮಲ್ಟಿ ಬ್ರಾಂಡ್ ಟಯರ್ & ಗ್ಯಾರೇಜ್ ಶುಭಾರಂಭ

Suddi Udaya

ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು ಸೃಜಿಸಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾಮ ಪಂಚಾಯತ್

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಅದ್ಧೂರಿಯ ಚಾಲನೆ: ಸುಶಾಸನ’ ಆಡಳಿತ ಕಾಯಾ೯ಲಯ, ‘ಸುರಭಿ’ ಬ್ರಹ್ಮಕಲಶೋತ್ಸವ ಕಾಯಾ೯ಲಯ, ‘ಸಮೃದ್ಧಿ’ ಹಸಿರುವಾಣಿ ಉಗ್ರಾಣ, ‘ಸುಪ್ರಸಾದ’ ಭೋಜನ ಶಾಲೆ, ‘ಸುರುಚಿ’ ಪಾಕಶಾಲೆ ಉದ್ಘಾಟನೆ

Suddi Udaya

ವೇಣೂರು: ಶ್ರೀ ಧ. ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಕ ಸನತ್ ಕುಮಾರ್ ಬೀಳ್ಕೊಡುಗೆ ಸಮಾರಂಭ

Suddi Udaya

ಹೊಸಂಗಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಜಿರೆಯ ಕೂಸಪ್ಪರವರಿಗೆ ವಾತ್ಸಲ್ಯ ಮನೆ ಹಸ್ತಾಂತರ

Suddi Udaya
error: Content is protected !!