24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಫೆ.1-5: ನಿಟ್ಟಡೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ

ವೇಣೂರು : ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ 9 ನೇ ವರ್ಷದ ಜಾತ್ರಾ ಮಹೋತ್ಸವವು ಫೆ.1 ರಿಂದ ಫೆ.5 ರವರೆಗೆ ನಡೆಯಲಿದೆ.

ಫೆ.1 ರಾತ್ರಿ ವಾಸ್ತು ಪೂಜೆ, ವಾಸ್ತು ಹೋಮ, ದಿಕ್ ಬಲಿ. ಫೆ.2 ನಾಗದೇವರ ಸನ್ನಿಧಿಯಲ್ಲಿ ನಾಗತಂಬಿಲ ಹಾಗೂ ದುರ್ಗಾದೇವಿ ಗುಡಿಯಲ್ಲಿ ಮಹಾ ಚಂಡಿಕಾ ಪೂಜೆ,

ಫೆ.3 108 ಕಳಶಾಭಿಷೇಕ, ಗಣಹೋಮ, ರಂಗ ಪೂಜೆ ಹಾಗೂ ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ.

ಮಧ್ಯಾಹ್ನ 2.00ಗಂಟೆಯಿಂದ ಭಜನಾ ಕಾರ್ಯಕ್ರಮ ಹಾಗೂ 4.00 ಗಂಟೆಗೆ ವಿಶ್ವಾವಿಖ್ಯಾತ ಡಾ. ಸುಧಾಕರ್ ರವರಿಂದ ಜಾದೂ ಪ್ರದರ್ಶನ, ಸಂಜೆ 5 ಗಂಟೆಗೆ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಲಾ ಸಿಂಚನ, ರಾತ್ರಿ 7 ಗಂಟೆಗೆ ಮಹಾಪೂಜೆ, ರಾತ್ರಿ 7.30 ಗಂಟೆಗೆ ವಿಠಲ ನಾಯಕ್ ಕಲ್ಲಡ್ಕರವರಿಂದ ವಿನೂತನ ಶೈಲಿಯ ಕಾರ್ಯಕ್ರಮ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ.

ಫೆ.4 ಬೆಳಿಗ್ಗೆ 8 ಗಂಟೆಯಿಂದ ಪರಿವಾರ ದೈವಗಳ ಗಗ್ಗರ ಸೇವೆ, ಮೈಸಂದಾಯ, ದುಗಲಾಯ, ಪಂಜುರ್ಲಿ, ಮೈಯಂತಿ, ಮಂತ್ರದೇವತೆ, ಸನ್ಯಾಸಿ ಗುಳಿಗ, ಕೊರಗಜ್ಜ ಹಾಗೂ ಸಂಜೆ 6.00 ಗಂಟೆಗೆ 18 ಗುಳಿಗಗಳ ಗಗ್ಗರ ಸೇವೆ ಹಾಗೂ ರಾತ್ರಿ 8.00 ಕ್ಕೆ ಅನ್ನಸಂತರ್ಪಣೆ ಮತ್ತು ರಾತ್ರಿ 9.00 ಗಂಟೆಗೆ ಶಿವದೂತ ಗುಳಿಗ ನಾಟಕ ನಡೆಯಲಿದೆ.

ಫೆ.5 ಪರಿವಾರ ದೈವಗಳ ಪರ್ವಸೇವೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ ರವರು ತಿಳಿಸಿದ್ದಾರೆ.

Related posts

ನೆರಿಯ: ಅಣಿಯೂರು ನಿವಾಸಿ ಇಂದಿರಾ ನಿಧನ

Suddi Udaya

ಧರ್ಮಸ್ಥಳ : ಅಸಹಜ ಸಾವು ಪ್ರಕರಣ : ಮಾಸಾಂತ್ಯಕ್ಕೆ ಎಸ್‌ಐಟಿ ಯಿಂದ ವರದಿ ಸಲ್ಲಿಕೆ

Suddi Udaya

ಧಮ೯ಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ದೂರು ನೀಡಿದ ಪ್ರಕರಣ: ದೂರುದಾರ ಫೋಟೋ ಹೊರತುಪಡಿಸಿ ಯಾವುದೇ ಕಳೆಬರಹವನ್ನು ಪೊಲೀಸ್ ಠಾಣೆಗೆ ನೀಡಿಲ್ಲ: ಪೊಲೀಸ್ ವರಿಷ್ಠಾಧಿಕಾರಿಗಳ ಸ್ವಷ್ಟನೆ

Suddi Udaya

ಡೆಂಗ್ಯೂ ವಿರೋಧ ಮಾಸಾಚಾರಣೆ ಅಂಗವಾಗಿ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮುಂಜಾಗೃತ ಮಾಹಿತಿ

Suddi Udaya

ಕೊಕ್ಕಡ: ತಲೆಗೆ ಮರಬಿದ್ದು ಮಹಿಳೆಯ ಧಾರುಣ ಸಾವು:

Suddi Udaya

ಜೆಸಿಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಬೆಳ್ತಂಗಡಿ ಕಿರಣ್ ಕುಮಾರ್ ಶೆಟ್ಟಿ ರಿಗೆ ಸನ್ಮಾನ

Suddi Udaya
error: Content is protected !!