ಬೆಳ್ತಂಗಡಿ: ಭಾವನಾತ್ಮಕ ವಿಚಾರವನ್ನು ಕೆರಳಿಸಿ ರೈತರು, ಬಡವರು ಮತ್ತು ಮಧ್ಯಮ ವರ್ಗದವರನ್ನು ಕೇವಲ ವೋಟಿಗಾಗಿ ಬಳಕೆ ಮಾಡಲಾಗುತ್ತಿದೆ. ಈ ವರ್ಗದ ಪರವಾಗಿ ಯಾವುದೇ ದೊಡ್ಡ ಕಾರ್ಯಕ್ರಮ ಘೋಷಣೆ ಆಗಿಲ್ಲ
ಎಂದು ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ರಕ್ಷಿತ್ ಶಿವರಾಂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಲೆಗಿಂತ ಕಿರೀಟ ದೊಡ್ಡದು ಎನ್ನುವ ರೀತಿಯಲ್ಲಿದೆ.2024-25 ರ ಬಜೆಟ್ ಒಟ್ಟು ಗಾತ್ರ 47 ಲಕ್ಷ ಕೋಟಿ 2024-25 ರ ಎಲ್ಲಾ ಮೂಲಗಳಿಂದ ಅಂದಾಜಿಸಿರುವ ಆದಾಯ 33 ಲಕ್ಷ ಕೋಟಿ
2023-24 ರ ಎಲ್ಲಾ ಮೂಲಗಳಿಂದ ಅಂದಾಜಿಸಿರುವ ಆದಾಯ 26 ಲಕ್ಷ ಕೋಟಿ ಆದರಿಂದ ಮೋದಿಯವರ ಭಾಷೆಯಲ್ಲಿ ಹೇಳುವುದಾದರೆ ಇದು ಒಂದು “ಜುಮ್ಲಾ ಬಜೆಟ್ ” ಎಂದಿದ್ದಾರೆ.













