24.6 C
ಪುತ್ತೂರು, ಬೆಳ್ತಂಗಡಿ
June 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.6 ರಿಂದ ಫೆ.17 ರವರೆಗೆ ತಾಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ- ಸ್ತಬ್ದಚಿತ್ರ ಸಂಚಾರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೆ ಸಂವಿಧಾನ ಜಾಗೃತಿ ಸ್ತಬ್ದಚಿತ್ರವು ಮೂಡಬಿದ್ರೆಯಿಂದ ಫೆ.6ರಂದು ಹೊಸಂಗಡಿ ಗ್ರಾ.ಪಂ.ಕ್ಕೆ ಆಗಮಿಸಲಿದ್ದು, ನಂತರ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಸಂಚರಿಸಿ ಫೆ.17 ರಂದು ಪಟ್ರಮೆ ಗ್ರಾಮದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫೆ.6ರಂದು ಬೆಳಗ್ಗೆ 10ಕ್ಕೆ ಹೊಸಂಗಡಿ, ಬಳಿಕ ಕಾಶಿಪಟ್ಣ, ಮರೋಡಿ, ಅಂಡಿಂಜೆ, ಫೆ.7ರಂದು ಬೆಳಿಗ್ಗೆ 10ಕ್ಕೆ ನಾರಾವಿ ಬಳಿಕ ಸುಲ್ಕೇರಿ, ಅಳದಂಗಡಿ, ಶಿರ್ಲಾಲು, ಫೆ.8ರಂದು ಬೆಳಿಗ್ಗೆ 10ಕ್ಕೆ ಬಳೆಂಜ, ಬಳಿಕ ಕುಕ್ಕೇಡಿ, ವೇಣೂರು, ಅರಂಬೋಡಿ, ಫೆ.9 ಬೆಳಿಗ್ಗೆ 10ಕ್ಕೆ ಮಡಂತ್ಯಾರು, ಬಳಿಕ ಮಾಲಾಡಿ, ಪಡಂಗಡಿ, ಕುವೆಟ್ಟು, ಫೆ.10ರಂದು ಬೆಳಿಗ್ಗೆ 10ಕ್ಕೆ ಮೇಲಂತಬೆಟ್ಟು, ಬಳಿಕ ಲಾಯಿಲ, ಬೆಳ್ತಂಗಡಿ ನಗರ ಪಂಚಾಯತ್, ಕೊಯ್ಯೂರು, ಫೆ.11ಕ್ಕೆ ಬೆಳಿಗ್ಗೆ 10ಕ್ಕೆ ಕಳಿಯ ಬಳಿಕ ತಣ್ಣೀರುಪಂತ, ಬಾರ್ಯ, ತೆಕ್ಕಾರು, ಫೆ.12 ಬೆಳಿಗ್ಗೆ 10ಕ್ಕೆ ಮಚ್ಚಿನ, ಕಣಿಯೂರು, ಇಳಂತಿಲ, ಬಂದಾರು, ಫೆ.13ರಂದು ಬೆಳಿಗ್ಗೆ 10ಕ್ಕೆ ಬೆಳಾಲು, ಬಳಿಕ ಉಜಿರೆ, ಕಲ್ಮಂಜ, ನಡ, ಫೆ.14ರಂದು ಬೆಳಿಗ್ಗೆ 10ಕ್ಕೆ ನಾವೂರು, ಬಳಿಕ ಇಂದಬೆಟ್ಟು, ಮಲವಂತಿಗೆ, ಮಿತ್ತಬಾಗಿಲು, ಫೆ.15ರಂದು ಬೆಳಿಗ್ಗೆ 10ಕ್ಕೆ ಕಡಿರುದ್ಯಾವರ ಬಳಿಕ ಮುಂಡಾಜೆ, ಚಾರ್ಮಾಡಿ, ನೆರಿಯ, ಫೆ.16 ರಂದು ಬೆಳಿಗ್ಗೆ 10ಕ್ಕೆ ಧರ್ಮಸ್ಥಳ ಬಳಿಕ ಪುದುವೆಟ್ಟು, ಕಳೆಂಜ, ನಿಡ್ಲೆ, ಫೆ.17ರಂದು ಬೆಳಗ್ಗೆ 10ಕ್ಕೆ ಅರಸಿನಮಕ್ಕಿ ಬಳಿಕ ಶಿಶಿಲ, ಶಿಬಾಜೆ, ಕೊಕ್ಕಡ, ಪಟ್ರಮೆ.

Related posts

ಹೆದ್ದಾರಿ ಬದಿ ಬೆಂಕಿ

Suddi Udaya

ಬಳಂಜ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಬ್ರಹ್ಮಶ್ರೀ ಮಂಡಳಿಯಿಂದ ಪೆನ್ನು ವಿತರಣೆ

Suddi Udaya

ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ‌.ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವಾಧ್ಯಕ್ಷ ಚೈತ್ರೇಶ್ ಇಳಂತಿಲರವರ ‘ಅಕ್ಷೋಭ್ಯ’ ನೂತನ ಮನೆಗೆ ಭೇಟಿ

Suddi Udaya

ಕೃಷಿಕರ ವಿರೋಧಿ, ಪರಿಶಿಷ್ಟ ವರ್ಗ ಕಡೆಗಣಿಸಿದ ಬಜೆಟ್ – ಜಿಲ್ಲಾ ಕೆ ಡಿ ಪಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್

Suddi Udaya

ಏಕಾಏಕಿ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಉಜಿರೆ : ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ

Suddi Udaya
error: Content is protected !!