24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಗುರುವಾಯನಕೆರೆ: ನಿಸರ್ಗ ಆರ್ಕೇಡ್ ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ

ಗುರುವಾಯನಕೆರೆ: ಕಳೆದ ಹಲವಾರು ವರ್ಷಗಳಿಂದ ನಿಸರ್ಗ ಕರ್ಟನ್ ಹಾಗೂ ವಾಲ್ ಪೇಪರ್ ಉದ್ಯಮದೊಂದಿಗೆ ಉತ್ತಮ ಗುಣಮಟ್ಟ ಹಾಗೂ ಪ್ರಾಮಾಣಿಕ ಸೇವೆ ನೀಡಿ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ನಾಗೇಶ್ ಕೋಟ್ಯಾನ್ ರವರ ನಿಸರ್ಗ ಆರ್ಕೇಡ್ ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ ಫೆ.24 ರಂದು ನಡೆಯಿತು.

ಗುರುವಾಯನಕೆರೆಯ ಪ್ರಸಿದ್ದ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಯವರು ಉದ್ಘಾಟಿಸಿ ಶುಭ ಕೋರಿದರು.

ನಿಸರ್ಗ ಆರ್ಕೇಡ್ ಮಾಲಕ ನಾಗೇಶ್ ಕೋಟ್ಯಾನ್ ರವರ ಮಾತ- ಪಿತರಾದ ಗೋಪು ಪೂಜಾರಿ ಮತ್ತು ಶ್ರೀಮತಿ ಸುಶೀಲ ದೀಪ ಪ್ರಜ್ವಲನೆಗೈದು ಸಂಸ್ಥೆಯು ಉತ್ತರೊತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಿವೃತ ಎಸ್.ಪಿ ಪೀತಾಂಬರ ಹೇರಾಜೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಜಿ.ಪಂ ಮಾಜಿ ಸದಸ್ಯೆ ಮಮತಾ ಎಂ ಶೆಟ್ಟಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ನಾರಾಯಣ ಪೂಜಾರಿ,ತಾ.ಪಂ‌ ಸದಸ್ಯ ಗೋಪಿನಾಥ ನಾಯಕ್,ಎಸ್.ಸಿ‌.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಚಂದ್ರಹಾಸ, ಕಿರಾತಮೂರ್ತಿ ದೇವಸ್ಥಾನದ ಟ್ರಸ್ಟ್ ದಿನೇಶ್, ನಿವೃತ ಮುಖ್ಯೋಪಾಧ್ಯಾಯ ಗೋಪಾಲ್ ಪೂಜಾರಿ,ಸುದ್ದಿ ಬಿಡುಗಡೆ ವಾರಪತ್ರಿಕೆ ವ್ಯವಸ್ಥಾಪಕ ಮಂಜುನಾಥ ರೈ,ಯುವ ಉದ್ಯಮಿಗಳಾದ ಸಚಿನ್ ಶೆಟ್ಟಿ ಕುರೆಲ್ಯ,ಸಾಯಿ ಶೆಟ್ಟಿ ನವಶಕ್ತಿ,ಗೋಪಾಲ ಪೂಜಾರಿ, ವಸಂತ ಪೂಜಾರಿ ಗರ್ಡಾಡಿ,ದಿನೇಶ್ ಪೂಜಾರಿ ಅಂತರ ಬಳಂಜ,ಜಗನ್ನಾಥ್ ಸುಲ್ಕೇರಿಮೊಗ್ರು ,ಯುವ ಉದ್ಯಮಿ ಚಿದಾನಂದ ಇಡ್ಯ,ಆದರ್ಶ್ ಜೈನ್,ಪೋಟೋ ಅಸೋಸಿಯೇಷನ್ ದಾಮೋದರ ಕುಲಾಲ್, ರವಿ ಪೂಜಾರಿ,ವಸಂತ ಹೆಗ್ಡೆ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.

ಗೋಪಾಲ ಪೂಜಾರಿ, ಲೋಕಮ್ಮ, ಸುರೇಶ್ ಪೂಜಾರಿ, ಸತೀಶ್ ಪೂಜಾರಿ, ಜಗನ್ನಾಥ ಪೂಜಾರಿ, ಬೇಬಿಂದ್ರ,ಸಿಂಚನಾ, ಅನ್ವಿ,ಸಂದ್ಯಾ,ಅಮಿತಾ, ಸಮಿತಾ, ಮೋಹಿನಿ ಹಾಗೂ ಬಂಧು ಮಿತ್ರರು ಸಹಕರಿಸಿದರು.

ಸಂಸ್ಥೆಯ ಮಾಲಕರಾದ ನಾಗೇಶ್ ಕೋಟ್ಯಾನ್ ಮತ್ತು ಶ್ರೀಮತಿ ಯಶ್ಮಿತಾ ನಾಗೇಶ್, ಮಕ್ಕಳಾದ ಮಾ.ಯಶ್ವಿನ್ ಎನ್, ಮಾ.ಯುವಿನ್ ಎನ್ ಅಸಗಮಿಸಿದ ಅತಿಥಿ ಗಣ್ಯರನ್ನು ಸತ್ಕರಿಸಿದರು.

ಸುದ್ದಿ ಉದಯ ವಾರಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.

Related posts

ಮುಂಡಾಜೆ ಕಾಲೇಜಿನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

Suddi Udaya

ಸುನ್ನತ್ ಕೆರೆ ಅಲ್ ಮಸ್ಜಿದುಲ್ ಹುದಾ ಜುಮಾ‌ ಮಸ್ಜಿದ್ ನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಸ್ಕೌಟ್ ಗೈಡ್, ಕಬ್ಸ್, ಬುಲ್ ಬುಲ್ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ವಾಣಿ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿ ಕು. ಮಾನ್ಯ 620 ಅಂಕದೊಂದಿಗೆ ರಾಜ್ಯಮಟ್ಟದಲ್ಲಿ 6ನೇ ರ‍್ಯಾಂಕ್

Suddi Udaya

ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷರಾಗಿ ಗಿರಿಜಾ ನಾವರ, ಉಪಾಧ್ಯಕ್ಷರಾಗಿ ಶುಭಕರ ಪೂಜಾರಿ

Suddi Udaya

ದೀಪಕ್ ಜಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya
error: Content is protected !!