24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಿಯೋ ಕ್ಲಬ್ ಬೆಳ್ತಂಗಡಿ “ಧ್ವನಿ” ವಾಯ್ಸ್ ಆಫ್ ಸರ್ವಿಸ್ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ

ಬೆಳ್ತಂಗಡಿ : ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ, ಜಿಲ್ಲಾ ಲಿಯೋ ತಂಡ 317D ಏರ್ಪಡಿಸಿದ “ಧ್ವನಿ” ವಾಯ್ಸ್ ಆಫ್ ಸರ್ವಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ತಂಗಡಿ ಲಿಯೋ ಕ್ಲಬ್ ಪ್ರಥಮ ಸ್ಥಾನ ಪಡೆದಿದೆ.


ಫೆ. 25 ರಂದು ಮಂಗಳೂರು ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ದಕ್ಷಿಣ ಕನ್ನಡ, ಚಿಕ್ಕಮಂಗಳೂರು, ಹಾಸನ, ಕೊಡಗು, ಜಿಲ್ಲೆ ಒಳಗೊಂಡ ಲಯನ್ಸ್ ಜಿಲ್ಲೆ, 317D ಜಿಲ್ಲಾ ಲಿಯೋ ಕ್ಲಬ್ ಅಧ್ಯಕ್ಷರಾದ ಲಿಯೋ ಡಾ| ರಂಜಿತಾ ಶೆಟ್ಟಿ ಕಾವು ಅಧ್ಯಕ್ಷತೆಯಲ್ಲಿ ಧ್ವನಿ ವಾಯ್ಸ್ ಆಫ್ ಸರ್ವಿಸ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೇಲ್ವಿನ್ ಡಿಸೋಜಾ ಉದ್ಘಾಟನೆ ಮಾಡಿದರು. ನಾಯಕತ್ವ, ಅನುಭವ, ಅವಕಾಶ, ಬಳಸಿಕೊಂಡು ಮೊದಲು ಭಾಗವಹಿಸುವುದು ಮುಖ್ಯ ಎಂಬಂತೆ, ನಿರ್ಣಯ, ಯೋಜನೆ ಮತ್ತು ಕಠಿಣ ಪರಿಶ್ರಮವನ್ನು ತೆಗೆದುಕೊಂಡು ಮುಂದಿನ ಸಮಾಜದ ಯೋಚನೆಯನ್ನು ಹಾಗೂ ಯುವಕ ಯುವತಿಯರನ್ನು ಸಮಾಜದ ಆಸ್ತಿಗಳನ್ನಾಗಿ ಮಾಡುವ ಚಿಂತನೆಯೊಂದಿಗೆ ಅದ್ಭುತವಾದ ಪ್ರದರ್ಶನವನ್ನು ವೇದಿಕೆಯ ಮುಖಾಂತರ ಧ್ವನಿ ವಾಯ್ಸ್ ಆಫ್ ಸರ್ವಿಸ್ ಪ್ರಸ್ತುತಪಡಿಸಲಾಯಿತು. ಸಾಧನೆಗಳ ಪ್ರದರ್ಶನ ಹಾಗೂ ಒಗ್ಗಟ್ಟಾಗಿ ಸೇವಾ ಚಟುವಟಿಕೆಯನ್ನು ಮಾಡಿದರೆ ಗೆಲುವು ನಮ್ಮ ಆತ್ಮವಿಶ್ವಾಸದಿಂದ ಶಾಶ್ವತವಾದ ಪರಿಣಾಮವನ್ನು ಬೀರಲು ಸಾಧ್ಯ ಇದನ್ನು ಬೆಳ್ತಂಗಡಿಯ ಲಿಯೋ ಸದಸ್ಯರು ಜಿಲ್ಲೆಯಲ್ಲಿ ನಿರೂಪಿಸಿದ್ದಾರೆ.

ಧ್ವನಿ ವಾಯ್ಸ್ ಆಫ್ ಸರ್ವಿಸ್ ಗೆ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಉಮೇಶ್ ಶೆಟ್ಟಿ ಸಹಕಾರ, ಲಿಯೋ ಅಡ್ವೈಸರ್ ಡಾ. ದೇವಿಪ್ರಸಾದ್ ಬೊಲ್ಮ ರವರು ಬರಹ ಹಾಗೂ ವರದಿ, ಲಿಯೋ ಕಾರ್ಯದರ್ಶಿ ನಿರೀಕ್ಷಾ ನಾವರ ಇವರು ವಾಯ್ಸ್, ಲಿಯೋ ಮನೋಜ್ ಧರ್ಮಸ್ಥಳ ಎಡಿಟಿಂಗ್, ಲಿಯೋ ದೀಕ್ಷಿತ್ ನಿಡ್ಲೆ ಇವರು ವಿಡಿಯೋ, ಲಿಯೋ ಅಧ್ಯಕ್ಷೆ ಅಪ್ಸರ ಗೌಡ, ಲಿಯೋ ಕೋಶಾಧಿಕಾರಿ ಅಭಿಜ್ಞಾ ಬೊಲ್ಮ, ಲಿಯೋ ನಿಕ್ಷೇಪ್ ನಾವರ, ಲಿಯೋ ಕರಣ್ ಪವರ್, ಲಿಯೋ ತೇಜಸ್, ಲಿಯೋ ಸದಸ್ಯರು ಹಾಗೂ ಲಯನ್ಸ್ ಸದಸ್ಯರು ಸಹಕರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಥಮ VDG ಲ. ಬಿ. ಎಂ. ಭಾರತಿ, ದ್ವಿತೀಯ VDG ಲ. ಕುಡುಪಿ ಅರವಿಂದ ಶೆಣೈ, ಜಿಲ್ಲಾ ಲಿಯೋ ಚೇರ್ ಪರ್ಸನ್ ಲಯನ್ ಆಲ್ವಿನ್ ನೋರೊನ್ಹ, ಪ್ರಿಯಲತಾ ಬಿಸಿಲ್ವಾ, ಜಿಲ್ಲಾ ಲಿಯೋ ಅಡ್ವೈಸರ್ ರಶ್ಮಿ ಕನಡ, ಲಿಯೋ ಜಿಲ್ಲಾ ಮಾಜಿ ಅಧ್ಯಕ್ಷ ಕವನ್ ಕುಬೇವೂರ್, ಕಿಶನ್ ಬಿಸಿಲ್ವಾ, ಲಿಯೋ ಸಮೀಕ್ಷಾ , ಲಿಯೋ ಲಿರಿಸ ಮಸ್ಕರೇನ್ಹಸ್, ಲಿಯೋ ಅಭಿಲಾಶ್, ಲಿಯೋ ರಿಸಲ್ ಡಿಸೋಜ, ಲಿಯೋ ಪ್ರಸನ್ನ ಪೈ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

Related posts

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ತೋರಿದ ‘ಆಸರೆ’ – ಕುಂಭಶ್ರೀ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆಗೆ ಅಭೂತಪೂರ್ವ ಸ್ಪಂದನೆ

Suddi Udaya

ಸೆ.17: ನಾರಾವಿ ಸಂತ ಅಂತೋನಿ ಪದವಿ ಕಾಲೇಜು ಎನ್ ಎಸ್ ಎಸ್ ವತಿಯಿಂದ ಉಚಿತ ಫಿಸಿಯೋಥೆರಪಿ ಹಾಗೂ ಹೊಮಿಯೋಪತಿಕ್ ತಪಾಸಣಾ ಶಿಬಿರ

Suddi Udaya

ಸುಲ್ಕೇರಿಮೊಗ್ರು: ಸೇನರಪಲ್ಕೆ ನಿವಾಸಿ ಅಶ್ವಿನಿ ಅಸೌಖ್ಯದಿಂದ ನಿಧನ

Suddi Udaya

ಕಳೆಂಜ: ಸ.ನಂ 309 ರಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರನೀಡುವ ಸಲುವಾಗಿ ಜಮೀನಿನ ಜಂಟಿ ಸರ್ವೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೆ.ಎಸ್.ಎಂ.ಸಿ.ಎ ನೇತೃತ್ವದಲ್ಲಿ ವಿ.ಪ. ಸದಸ್ಯ ಐವನ್ ಡಿಸೋಜ ರವರಿಗೆ ಮನವಿ

Suddi Udaya

ನಿವೃತ್ತ ಮುಖ್ಯೋಪಾಧ್ಯಾಯಿನಿ ಉಮಾ ಡಿ. ಗೌಡ ಹಟ್ಟತ್ತೋಡಿರವರಿಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya
error: Content is protected !!