22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ಮಹಿಳೆಯ ಕಾಲಿನ ಮೇಲೆ ಹರಿದ ಕಾರು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಧರ್ಮಸ್ಥಳ: ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ದ್ವಾರದ ಬಳಿ ಕಾರೊಂದು ಮಹಿಳೆಯ ಕಾಲಿನ ಮೇಲೆ ಹರಿದು ಹೋದ ಪರಿಣಾಮ ಕಾಲಿನ ಬೆರಳುಗಳಿಗೆ ರಕ್ತ ಗಾಯವಾದ ಘಟನೆ ಮಾ.5ರಂದು ವರದಿಯಾಗಿದೆ.

ಘಟನೆ ವಿವರ: ಚನ್ನರಾಯಪಟ್ಟಣ ತಾಲೂಕು, ಹಾಸನ ನಿವಾಸಿ ಶ್ರೀಮತಿ ರೇಖಾ ಸಿ.ಎಸ್ (39ವ) ಎಂಬವರ ದೂರಿನಂತೆ, ಸದ್ರಿಯವರು ತನ್ನ ನೆರೆಕೆರೆಯವರಾದ ಜಯಲಕ್ಷ್ಮಿ, ಮಂಜುಳಮ್ಮರವರುಗಳೊಂದಿಗೆ, ಮಾ.05 ರಂದು ರಾತ್ರಿ ದೇವರ ದರ್ಶನ ಮಾಡುವ ಸಲುವಾಗಿ, ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ದ್ವಾರದ ಬಳಿ ನಿಂತುಕೊಂಡಿರುವಾಗ, KA52B9983 ನೇ ಕಾರನ್ನು ಅದರ ಚಾಲಕ ಮಣಿಕಂಠ ಎಂಬವರು ದುಡುಕುತನದಿಂದ ಚಲಾಯಿಸಿಕೊಂಡು ಬಂದು, ರೇಖಾ ಸಿ.ಎಸ್. ರವರ ಎರಡು ಕಾಲಿನ ಮೇಲೆ ಕಾರಿನ ಚಕ್ರ ಹರಿದು ಹೋದ ಪರಿಣಾಮ, ರೇಖಾರವರ ಕಾಲಿನ ಬೆರಳುಗಳಿಗೆ ರಕ್ತಗಾಯವಾಗಿರುತ್ತದೆ.

ಅವರನ್ನು ಚಿಕಿತ್ಸೆಗಾಗಿ ಉಜಿರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂಬುದಾಗಿ, ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 26/2024 ಕಲಂ: 279,337 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಗುರುವಾಯನಕೆರೆ -ಬೆಳ್ತಂಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

Suddi Udaya

ಫ್ಯಾಷನ್ ಡಿಸೈನ್ ನಲ್ಲಿ ಮಂಗಳೂರು ವಿ.ವಿ. ಗೆ 3ನೇ ರ‍್ಯಾಂಕ್ ಪಡೆದ ಉಜಿರೆಯ ಹವನ ಪಿ. ಪೂಜಾರಿ

Suddi Udaya

ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಪ್ರಕರಣ: ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ, ಪರಿಶೀಲನೆ

Suddi Udaya

ತೋಟತ್ತಾಡಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ದಿನಕರ ನಾಯಕ್ ಬೆಳ್ತಂಗಡಿ ಮಾದರಿ ಶಾಲೆಗೆ ವಗಾ೯ವಣೆ

Suddi Udaya

ತನ್ನ ತಾಯಿಯನ್ನು ಎತ್ತಿಕೊಂಡು ಬಂದು ಮತಚಲಾಯಿಸಿದ ಮಗ: ಅನಾರೋಗ್ಯದ ನಡುವೆಯೂ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ ರೋಹಿಣಿ

Suddi Udaya

ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಕಾರ್ಯಕಾರಿ ಸಮಿತಿಯ ಸಹಮಿಲನ

Suddi Udaya
error: Content is protected !!