23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕುಣಿತಾ ಭಜನೆಯಲ್ಲಿ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ತಂಡಕ್ಕೆ ಪ್ರಥಮ ಸ್ಥಾನ

ಮಡಂತ್ಯಾರು:ಶ್ರೀ ರಾಮ ದೇವಸ್ಥಾನ ಪಡುಕೋಣೆ ನಾಡ ಬೈಂದೂರು ತಾಲೂಕಿನಲ್ಲಿಸೀತಾರಾಮ ಕಲ್ಯಾಣೊತ್ಸವದ ಪ್ರಯುಕ್ತ ನಡೆದ ಅಹ್ವಾನಿತ ತಂಡಗಳ ಅಂತರ್ ಜಿಲ್ಲಾ ಮಟ್ಟದ (30 ನಿಮಿಷಗಳ) ಕುಣಿತ ಭಜನಾ ಸ್ಪರ್ಧೆ ಯಲ್ಲಿ ಹಾಗೂ ಶ್ರೀ ಹುಲಿಗಿರ್ತಿ ಮತ್ತು ಸಹ ಪರಿವಾರ ದೇವಸ್ಥಾನ ಸರ್ಪನ ಕಟ್ಟೆ ಭಟ್ಕಳ ತಾಲೂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಕುಣಿತಾ ಭಜನೆ ಸ್ಪರ್ಧೆಯಲ್ಲಿ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ,ಮಡಂತ್ಯಾರು ತಂಡವು ಎರಡು ಕಡೆಯು ಪ್ರಥಮ ಸ್ಥಾನ ವನ್ನ ಪಡೆದುಕೊಂಡಿತು.

30 ವರ್ಷಗಳಿಂದ ನಿರಂತರವಾಗಿ ಪಾರೆಂಕಿ ದೇವಸ್ಥಾನದಲ್ಲಿ ಭಜನಾ ಸೇವೆಗೈಯುತ್ತ ಕಳೆದ 2 ವರ್ಷಗಳಿಂದ ಕುಣಿತಾ ಭಜನೆ ಸ್ಪರ್ಧೆಯಲ್ಲಿ ತಂಡವು ಭಾಗವಹಿಸುತಿದ್ದು ಹಲವಾರು ಜಿಲ್ಲಾ, ರಾಜ್ಯ ಮಟ್ಟದ ಕುಣಿತ ಭಜನೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನ ಪಡೆದಿದೆ, ಜೊತೆಗೆ ನಿರಂತರವಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಜನೆ ಕಾರ್ಯಕ್ರಮವನ್ನ ನೀಡುತ್ತಿದೆ.

ಪ್ರಶಸ್ತಿ ಪಡೆದ ತಂಡದಲ್ಲಿ ಚಂದ್ರಹಾಸ ಬಳಂಜ, ಧೀರಾಜ್ ಮಡಂತ್ಯಾರು, ಗಿರೀಶ್, ಶೈಲೇಶ್, ಮೋಹನಂದ, ನೀಶಾಂತ್, ದೀಕ್ಷಿತ್,ಸುಕೇಶ್ ರಕ್ಷಾ, ಚೈತ್ರ, ಯಶ್ವೀತಾ, ಮನೀಷಾ ಭಾಗವಹಿಸಿದ್ದು ತಂಡದೊಂದಿಗೆ ಮಂಡಳಿಯ ಗೌರವಾಧ್ಯಕ್ಷರಾದ ಯೋಗೀಶ್ ಹೆಗ್ಡೆ, ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ ಸದಸ್ಯರಾದ ಗುರುರಾಜ್, ಅಭಿಲಾಷ್ ಹಾಗೂ ಕೀರ್ತನ್ ಜೊತೆಗಿದ್ದು ಸಹಕರಿಸಿದರು.ತಂಡಕ್ಕೆ ಪ್ರಖ್ಯಾತ ತರಬೇತುದಾರರಾದ ವಿಜಯ್ ನಿರ್ಕೇರೆಯವರು ತರಬೇತಿ ನೀಡಿದ್ದಾರೆ.

Related posts

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ

Suddi Udaya

ನೂತನ ಬಿಇಒ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಭಿನಂದನೆ

Suddi Udaya

ನಿರಂತರ ನೆಟ್‌ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ಗ್ರಾಮಸ್ಥರು, ಏರ್‌ಟೆಲ್ ವಿರುದ್ಧ ತೆಂಕಕಾರಂದೂರು ಗ್ರಾಮಸ್ಥರ ಪ್ರತಿಭಟನೆ

Suddi Udaya

ಕೊಲ್ಪಾಡಿ ಕಾರ್ಯಕ್ಷೇತ್ರದ ಓಂ ಶ್ರೀ ಜ್ಞಾನವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಚಾರ್ಮಾಡಿಯಲ್ಲಿ ಕಾಡುಪ್ರಾಣಿ ಬೇಟೆ ಪ್ರಕರಣ: ಇಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲು

Suddi Udaya

8 ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾದ ಗುರುವಾಯನಕರೆಯ ಏಕನಾಥ ಶೆಟ್ಟಿ ಸಹಿತ 29 ಸೈನಿಕರಿದ್ದ ಭಾರತೀಯ ಏರ್ ಫೋರ್ಸ್ ವಿಮಾನದ ಕುರುಹು ಪತ್ತೆ ವರದಿ

Suddi Udaya
error: Content is protected !!