25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕುಣಿತಾ ಭಜನೆಯಲ್ಲಿ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ತಂಡಕ್ಕೆ ಪ್ರಥಮ ಸ್ಥಾನ

ಮಡಂತ್ಯಾರು:ಶ್ರೀ ರಾಮ ದೇವಸ್ಥಾನ ಪಡುಕೋಣೆ ನಾಡ ಬೈಂದೂರು ತಾಲೂಕಿನಲ್ಲಿಸೀತಾರಾಮ ಕಲ್ಯಾಣೊತ್ಸವದ ಪ್ರಯುಕ್ತ ನಡೆದ ಅಹ್ವಾನಿತ ತಂಡಗಳ ಅಂತರ್ ಜಿಲ್ಲಾ ಮಟ್ಟದ (30 ನಿಮಿಷಗಳ) ಕುಣಿತ ಭಜನಾ ಸ್ಪರ್ಧೆ ಯಲ್ಲಿ ಹಾಗೂ ಶ್ರೀ ಹುಲಿಗಿರ್ತಿ ಮತ್ತು ಸಹ ಪರಿವಾರ ದೇವಸ್ಥಾನ ಸರ್ಪನ ಕಟ್ಟೆ ಭಟ್ಕಳ ತಾಲೂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಕುಣಿತಾ ಭಜನೆ ಸ್ಪರ್ಧೆಯಲ್ಲಿ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ,ಮಡಂತ್ಯಾರು ತಂಡವು ಎರಡು ಕಡೆಯು ಪ್ರಥಮ ಸ್ಥಾನ ವನ್ನ ಪಡೆದುಕೊಂಡಿತು.

30 ವರ್ಷಗಳಿಂದ ನಿರಂತರವಾಗಿ ಪಾರೆಂಕಿ ದೇವಸ್ಥಾನದಲ್ಲಿ ಭಜನಾ ಸೇವೆಗೈಯುತ್ತ ಕಳೆದ 2 ವರ್ಷಗಳಿಂದ ಕುಣಿತಾ ಭಜನೆ ಸ್ಪರ್ಧೆಯಲ್ಲಿ ತಂಡವು ಭಾಗವಹಿಸುತಿದ್ದು ಹಲವಾರು ಜಿಲ್ಲಾ, ರಾಜ್ಯ ಮಟ್ಟದ ಕುಣಿತ ಭಜನೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನ ಪಡೆದಿದೆ, ಜೊತೆಗೆ ನಿರಂತರವಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಜನೆ ಕಾರ್ಯಕ್ರಮವನ್ನ ನೀಡುತ್ತಿದೆ.

ಪ್ರಶಸ್ತಿ ಪಡೆದ ತಂಡದಲ್ಲಿ ಚಂದ್ರಹಾಸ ಬಳಂಜ, ಧೀರಾಜ್ ಮಡಂತ್ಯಾರು, ಗಿರೀಶ್, ಶೈಲೇಶ್, ಮೋಹನಂದ, ನೀಶಾಂತ್, ದೀಕ್ಷಿತ್,ಸುಕೇಶ್ ರಕ್ಷಾ, ಚೈತ್ರ, ಯಶ್ವೀತಾ, ಮನೀಷಾ ಭಾಗವಹಿಸಿದ್ದು ತಂಡದೊಂದಿಗೆ ಮಂಡಳಿಯ ಗೌರವಾಧ್ಯಕ್ಷರಾದ ಯೋಗೀಶ್ ಹೆಗ್ಡೆ, ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ ಸದಸ್ಯರಾದ ಗುರುರಾಜ್, ಅಭಿಲಾಷ್ ಹಾಗೂ ಕೀರ್ತನ್ ಜೊತೆಗಿದ್ದು ಸಹಕರಿಸಿದರು.ತಂಡಕ್ಕೆ ಪ್ರಖ್ಯಾತ ತರಬೇತುದಾರರಾದ ವಿಜಯ್ ನಿರ್ಕೇರೆಯವರು ತರಬೇತಿ ನೀಡಿದ್ದಾರೆ.

Related posts

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya

ತಾಲೂಕು ಮಟ್ಟದ ಕ್ರೀಡಾಕೂಟ : ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಪಿಎಂ ಶ್ರೀ ಸರ್ಕಾರಿ ಮಾದರಿ ಬೆಳ್ತಂಗಡಿ ಶಾಲೆಗೆ ಧರ್ಮಸ್ಥಳದ ‘ಜ್ಞಾನ ವಿಕಾಸ’ ತಂಡ ಭೇಟಿ: ಸ್ಮಾರ್ಟ್ ಕ್ಲಾಸ್ ವೀಕ್ಷಣೆ

Suddi Udaya

ಲಾಯಿಲ: ಪುತ್ರ ಬೈಲು ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಉಜಿರೆ: ರೇಡಿಯೋ‌ ನಿನಾದ 90.4 ಎಫ್ ಎಂ; ಸಮುದಾಯ ಬಾನುಲಿಯಲ್ಲಿ‌ ಬ್ಯಾರಿ‌ ಕಾರ್ಯಕ್ರಮ ಪ್ರಸಾರದ ಬಗ್ಗೆ ಸಮಾಲೋಚನೆ

Suddi Udaya

ಗುಂಡೂರಿ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!