September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

ರೆಖ್ಯ: ರೆಖ್ಯದ ಬೀಡು ನಿವಾಸಿ ಬಾಲಕೃಷ್ಣ ಗೌಡ ಅವರು ತೋಟಕ್ಕೆ ಹೋಗಿದ್ದ ಸಮಯದಲ್ಲಿ ಬೋರ್‌ವೆಲ್ ವಿಷಯವಾಗಿ ಮಾತುಕತೆ ನಡೆಯುತ್ತಿರುವ ಸಂದರ್ಭ ಗಂಗಾಧರ ಎಂಬವರು ಬಾಲಕೃಷ್ಣ ಗೌಡ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದರೆಂದು ಆರೋಪಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕೃಷಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಾಲಕೃಷ್ಣರವರು ತಮ್ಮ ಸುರೇಶ್ ಎಂಬವರಿಗೆ ರೆಖ್ಯ ಗ್ರಾಮದ ದೇವಸ ಎಂಬಲ್ಲಿರುವ ಸುಮಾರು 2 ಎಕರೆ ಜಾಗದಲ್ಲಿ ತಂದೆ-ತಾಯಿ, ತಮ್ಮ ಒಟ್ಟಿಗೆ ಹಳೆ ಮನೆಯಲ್ಲಿ ಇದ್ದೇವೆ. ಇತ್ತೀಚಿಗೆ ಹೊಸಮನೆ ನಿರ್ಮಾಣದ ಕೆಲಸ ಆಗುತ್ತಿದ್ದು, ಈ ಬಗ್ಗೆ ನಾನು ನಿನ್ನೆ ದಿನ ರಾತ್ರಿ 10 ಗಂಟೆಗೆ ಮನೆಯ ಕೆಲಸದ ಬಗ್ಗೆ ಹೋದಾಗ, ತಮ್ಮನ ಜಾಗದ ಬದಿಯಲ್ಲಿ ಭವಾನಿ ಎಂಬವರು ಬೋರ್‌ವೆಲ್ ಕೊರೆಯುತ್ತಿದ್ದರು.

ಈ ಬಗ್ಗೆ ಅಲ್ಲಿಯ ಸ್ಥಳಿಯ ಪಂ. ಸದಸ್ಯರಾದ ನಾಗೇಶ್ ಎಂಬುವರು, ಯಾಕೆ ಬೋರ್‌ವೆಲ್ ಕೊರೆಯುವುದು ಎಂದು ಅವರೊಳಗೆ ಮಾತುಕತೆಯಾಗುತ್ತಿತ್ತು. ಆ ಸಮಯ ನಾನು ಯಾಕೆ ಮಾತನಾಡುವುದು ಅವರು ಪಾಪದವರು ಬೋರ್‌ವೆಲ್ ತೆಗೆಯಲಿ ಎಂದು ಹೇಳಿದಾಗ ಕೋಪಗೊಂಡ ಗಂಗಾಧರ ಬಂದು, ಬೈದು ಕೈಯಿಂದ ಹಲ್ಲೆ ನಡೆಸಿದರೆಂದು ಆರೋಪಿಸಿದ್ದಾರೆ, ಪೊಲೀಸರು ದೂರು ಸ್ವೀಕರಿಸಿದ್ದಾರೆ.

Related posts

ಮದ್ದಡ್ಕ ಬಸ್ ನಿಲ್ದಾಣದ ಬದಿಯ ಚರಂಡಿಯಲ್ಲಿ ಕೊಳಚೆ ನೀರು ಶೇಖರಣೆ: ಸಂಬಂಧಪಟ್ಟವರು ಕೂಡಲೇ ಗಮನಹರಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ಸ್ವಯಂಸೇವಕರ ಪಥಸಂಚಲನ

Suddi Udaya

ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಶಕ್ತಿನಗರದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಕಾರ್ಯಕ್ರಮ

Suddi Udaya

ಎಕ್ಸೆಲ್ ನಲ್ಲಿ ದ್ವಿತೀಯ ಪಿಯುಸಿ ರಾಜ್ಯ ಟಾಪರ್ಸ್ ಗೆ ಲಕ್ಷ ಮೊತ್ತದೊಂದಿಗೆ, ಸನ್ಮಾನ

Suddi Udaya

ಬೆಳ್ತಂಗಡಿ: ಕಳೆದು ಹೋದಂತಹ ಚಿನ್ನದ ಬ್ರೇಸ್ಲೆಟ್ ನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮಂಜೊಟ್ಟಿಯ ಶ್ರೀಧರ್ ಶೆಟ್ಟಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!