25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಹೃದಯಾಘಾತದಿಂದ ರಾಧಾಕೃಷ್ಣ ಭಂಡಾರಿ ನಿಧನ

ಬೆಳ್ತಂಗಡಿ; ಮೂಲತಃ ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿ, ಪ್ರಸ್ತುತ‌ ಉಜಿರೆಯಲ್ಲಿ ನೆಲೆಸಿದ್ದ ರಾಧಾಕೃಷ್ಣ ಭಂಡಾರಿ (49) ಅವರು ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಹೃದಯ ನೋವು ಆರಂಭವಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಮಾ.24 ರಂದು ನಡೆದಿದೆ.

ಉಜಿರೆಯ ಪ್ರಸಿದ್ಧ ರಾಜ್ ಹೇರ್ ಡ್ರೆಸ್ಸಸ್ ಸಂಸ್ಥೆಯ ಮಾಲಿಕರಾಗಿರುವ ದೇವರಾಜ ಭಂಡಾರಿ ಮತ್ತು ರತ್ನಾವತಿ ದಂಪತಿ ಪುತ್ರನಾಗಿರುವ ಅವರು ತಂದೆಯ ಜೊತೆಗೇ ದೀರ್ಘ ಕಾಲ ಕ್ಷೌರಿಕ ವೃತ್ತಿ ನಡೆಸುತ್ತಿದ್ದರು. ಬಳಿಕ ಇತ್ತೀಚಿನ ಕೆಲ‌ ವರ್ಷಗಳಿಂದ ಆರ್.ಕೆ ಸೆಲೂನ್ ಎಂಬ ಸ್ವಂತ ಅಂಗಡಿ ಹೊಂದಿ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿದ್ದರು.

ಜೊತೆಗೆ ಉಜಿರೆ ಪೇಟೆಯಲ್ಲಿ ಆರ್ ಕೆ ಬೇಕರಿ ಕೂಡ ಹೊಂದಿದ್ದರು. ಇವರು ಉಜಿರೆ ಸುರ್ಯ ರಸ್ತೆಯಲ್ಲಿ ನೂತನ ಗೃಹ ನಿರ್ಮಿಸಿದ್ದು ತಿಂಗಳ ಹಿಂದಷ್ಟೇ ಅದ್ದೂರಿಯ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು.

ಮೃತರು ತಂದೆ, ತಾಯಿ, ಓರ್ವ ಸಹೋದರ ಕಮಲಾಕ್ಷ ಭಂಡಾರಿ, ಪತ್ನಿ ತಾರಾ, ಮಕ್ಕಳಾದ ತೇಜಶ್ವಿನಿ ಮತ್ತು ಪವನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಧರ್ಮಸ್ಥಳದಲ್ಲಿ ಕನ್ನಡ ಭುವನೇಶ್ವರಿ ರಥ

Suddi Udaya

ಕೊಕ್ಕಡ: ಸೌತಡ್ಕದಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷ: ನಡೆದು ಕೊಂಡು ಹೋಗುವ ಸಂದರ್ಭದಲ್ಲಿ ಆನೆ ತಿವಿದು; ಬಾಲಕೃಷ್ಣ ಶೆಟ್ಟಿ ಸ್ಥಳದಲ್ಲೇ ಸಾವು

Suddi Udaya

ಡಿ.27: ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಸಭೆ

Suddi Udaya

ವಲಯ ಮಟ್ಟದ ಖೋ ಖೋ ಪಂದ್ಯಾಟ: ಕರಂಬಾರು ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ನ.16: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

Suddi Udaya

ಧರ್ಮಸ್ಥಳ: ಪ್ರಾ.ಕೃ.ಪ.ಸ. ಸಂಘದ ವತಿಯಿಂದ ಪೊಸೋಳಿಕೆ ಅಂಗನವಾಡಿ ಕೇಂದ್ರಕ್ಕೆ ದೂರದರ್ಶನ ಕೊಡುಗೆ

Suddi Udaya
error: Content is protected !!