September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಹೃದಯಾಘಾತದಿಂದ ರಾಧಾಕೃಷ್ಣ ಭಂಡಾರಿ ನಿಧನ

ಬೆಳ್ತಂಗಡಿ; ಮೂಲತಃ ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿ, ಪ್ರಸ್ತುತ‌ ಉಜಿರೆಯಲ್ಲಿ ನೆಲೆಸಿದ್ದ ರಾಧಾಕೃಷ್ಣ ಭಂಡಾರಿ (49) ಅವರು ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಹೃದಯ ನೋವು ಆರಂಭವಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಮಾ.24 ರಂದು ನಡೆದಿದೆ.

ಉಜಿರೆಯ ಪ್ರಸಿದ್ಧ ರಾಜ್ ಹೇರ್ ಡ್ರೆಸ್ಸಸ್ ಸಂಸ್ಥೆಯ ಮಾಲಿಕರಾಗಿರುವ ದೇವರಾಜ ಭಂಡಾರಿ ಮತ್ತು ರತ್ನಾವತಿ ದಂಪತಿ ಪುತ್ರನಾಗಿರುವ ಅವರು ತಂದೆಯ ಜೊತೆಗೇ ದೀರ್ಘ ಕಾಲ ಕ್ಷೌರಿಕ ವೃತ್ತಿ ನಡೆಸುತ್ತಿದ್ದರು. ಬಳಿಕ ಇತ್ತೀಚಿನ ಕೆಲ‌ ವರ್ಷಗಳಿಂದ ಆರ್.ಕೆ ಸೆಲೂನ್ ಎಂಬ ಸ್ವಂತ ಅಂಗಡಿ ಹೊಂದಿ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿದ್ದರು.

ಜೊತೆಗೆ ಉಜಿರೆ ಪೇಟೆಯಲ್ಲಿ ಆರ್ ಕೆ ಬೇಕರಿ ಕೂಡ ಹೊಂದಿದ್ದರು. ಇವರು ಉಜಿರೆ ಸುರ್ಯ ರಸ್ತೆಯಲ್ಲಿ ನೂತನ ಗೃಹ ನಿರ್ಮಿಸಿದ್ದು ತಿಂಗಳ ಹಿಂದಷ್ಟೇ ಅದ್ದೂರಿಯ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು.

ಮೃತರು ತಂದೆ, ತಾಯಿ, ಓರ್ವ ಸಹೋದರ ಕಮಲಾಕ್ಷ ಭಂಡಾರಿ, ಪತ್ನಿ ತಾರಾ, ಮಕ್ಕಳಾದ ತೇಜಶ್ವಿನಿ ಮತ್ತು ಪವನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಸುಂದರ ಭಾರತ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ಸರಕಾರಿ ಶಾಲೆಗಳಿಗೆ ನೀಡಲಾಗುವ ಉಚಿತ ನೋಟ್ ಪುಸ್ತಕ ಗಳ ವಿತರಣೆ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರ ಕೇಂದ್ರ ನಿರ್ಮಾಣಕ್ಕೆ ರೂ. 50 ಲಕ್ಷ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜರ ಮನವಿಗೆ ಸ್ಪಂದಿಸಿದ ಸರ್ಕಾರ

Suddi Udaya

ವೇಣೂರು: ಸಹೋದರರಿಬ್ಬರಿದ್ದ ಬೈಕ್ ಗೆ ಗೂಡ್ಸ್ ರಿಕ್ಷಾ ಡಿಕ್ಕಿ: ಓರ್ವ ಸ್ಥಳದಲ್ಲೇ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ

Suddi Udaya

ತಣ್ಣೀರುಪಂತ: ಕುದ್ರಡ್ಕದಲ್ಲಿ ಮೂವರು ಮಕ್ಕಳಿಗೆ ಹಾವು ಕಡಿತ

Suddi Udaya

ಉಜಿರೆಯ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Suddi Udaya

ಹಾಡು ಹಗಲೇ ಗರ್ಡಾಡಿಯಲ್ಲಿ ಮನೆಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಸಹಿತ ನಗದು ಕಳವು

Suddi Udaya
error: Content is protected !!