23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5 ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ಸಂಪನ್ನ.

ಬಳಂಜ: ಕಳೆದ 5 ವರ್ಷಗಳ ಹಿಂದೆ ಬಳಂಜದಲ್ಲಿ ಬಿವಿಎಲ್ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿ 5 ಸೀಸನ್ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಬಿಡ್ಡಿಂಗ್ ಮಾದರಿಯ 6 ತಂಡಗಳ ಪೈಕಿ ಪ್ರಗತಿಪರ ಕೃಷಿಕ ವಿಶ್ವನಾಥ ಹೊಳ್ಳ ಮತ್ತು ಯುವ ಉದ್ಯಮಿ ಅನಂತರಾಮ ಹೊಳ್ಳ ಮಾಲಕತ್ವದ ಮಜ್ಜೇನಿಬೈಲು ಬ್ರದರ್ಸ್ ತಂಡ ಸೀಸನ್ 5 ರ ಎಲ್ಲಾ ಪಂದ್ಯಾವಳಿಯಲ್ಲಿ ಪ್ರಥಮ‌ ಸ್ಥಾನ‌ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರಾಕೇಶ್ ಹೆಗ್ಡೆ ಮಾಲಕತ್ವದ ಇಕೋಫ್ರೇಶ್ ಎಂಟರ್ಪ್ರೈಸಸ್, ಸಂತೋಷ್ ಪಿ ಕೋಟ್ಯಾನ್ ಮಾಲಕತ್ವದ ಕೋಟ್ಯಾನ್ ರಾಕರ್ಸ್, ಸಂತೋಷ್ ಕುಮಾರ್ ಮಾಲಕತ್ವದ ಶಿವಗಿರಿ ಕಾಪಿನಡ್ಕ, ಸಚಿನ್ ಶೆಟ್ಟಿ ಮಾಲಕತ್ವದ ಶ್ರೀಮಾತಾ ಅಟೆಕ್ಕರ್ಸ್,ವಿನು ಬಳಂಜ ಮಾಲಕತ್ವದ ದಿಮಿಸೋಲೆ ತಂಡವು ಭಾಗವಹಿಸಿದ್ದವು.

ಚಾಂಪಿಯನ್ ತಂಡದಲ್ಲಿ ಗುರುಪ್ರಸಾದ್ ಹೆಗ್ಡೆ ದರಿಮಾರ್,ಲತೇಶ್ ಪೆರಾಜೆ,ಯಶಸ್ಸ್ ಬಳಂಜ,ನಿಶಾಂತ್ ಹುಂಬೆಜೆ,ಶರಣ್ ಅಟ್ಲಾಜೆ,ಯತೀಶ್ ಶಾರಬೈಲು,ಪ್ರಕಾಶ್ ಶೆಟ್ಟಿ ತಾರ್ದೊಟ್ಟು,ನಿತಿನ್,ಅಭಿ,ಅನ್ವಿತ್,ರಾಹುಲ್ ಇದ್ದರು.

ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಸೇರಿದಂತೆ ತಂಡದ ಪದಾಧಿಕಾರಿಗಳು, ಆಟಗಾರರು, ವಿವಿಧ ತಂಡದ ಮಾಲಕರು ಚಾಂಪಿಯನ್ ತಂಡವನ್ನು ಅಭಿನಂದಿಸಿದರು.

ಮಜ್ಜೇನಿಬೈಲು ಬ್ರದರ್ಸ್ ತಂಡ ಚಾಂಪಿಯನ್ ಆದ ಹಿನ್ನಲೆಯಲ್ಲಿ ತಂಡದ ಎಲ್ಲಾ ಸದಸ್ಯರನ್ನು ತಂಡದ ಮಾಲಕರಾದ ವಿಶ್ವನಾಥ ಹೊಳ್ಳ,ಅನಂತರಾಮ ಹೊಳ್ಳ ಶಿರ್ಡಿ ಸಾಯಿಬಾಬಾ ಮಂದಿರ ದರ್ಶನ ಯಾತ್ರೆ ಕೈಗೊಂಡಿದ್ದಾರೆ.

Related posts

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷರಾಗಿ ತುಕರಾಮ್ ಬಿ., ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ ಬಳಂಜ

Suddi Udaya

ಅಂಡಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ “ಕ್ಷೀರ ಸಮೃದ್ಧಿ” ಲೋಕಾರ್ಪಣೆ

Suddi Udaya

ಎಸ್. ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೌರತ್ವ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭ

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಶತ ಚಂಡಿಕಾಯಾಗದ ಪೂರ್ವಭಾವಿ ಸಭೆ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಲಿಂಗ ಸಮಾನತಾ ಪ್ರೇರಣಾ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿ

Suddi Udaya

ಸುಬ್ರಹ್ಮಣ್ಯದಲ್ಲಿ ಡೆಂಗು ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತಾ ಕಾರ್ಯ

Suddi Udaya
error: Content is protected !!