September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5 ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ಸಂಪನ್ನ.

ಬಳಂಜ: ಕಳೆದ 5 ವರ್ಷಗಳ ಹಿಂದೆ ಬಳಂಜದಲ್ಲಿ ಬಿವಿಎಲ್ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿ 5 ಸೀಸನ್ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಬಿಡ್ಡಿಂಗ್ ಮಾದರಿಯ 6 ತಂಡಗಳ ಪೈಕಿ ಪ್ರಗತಿಪರ ಕೃಷಿಕ ವಿಶ್ವನಾಥ ಹೊಳ್ಳ ಮತ್ತು ಯುವ ಉದ್ಯಮಿ ಅನಂತರಾಮ ಹೊಳ್ಳ ಮಾಲಕತ್ವದ ಮಜ್ಜೇನಿಬೈಲು ಬ್ರದರ್ಸ್ ತಂಡ ಸೀಸನ್ 5 ರ ಎಲ್ಲಾ ಪಂದ್ಯಾವಳಿಯಲ್ಲಿ ಪ್ರಥಮ‌ ಸ್ಥಾನ‌ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರಾಕೇಶ್ ಹೆಗ್ಡೆ ಮಾಲಕತ್ವದ ಇಕೋಫ್ರೇಶ್ ಎಂಟರ್ಪ್ರೈಸಸ್, ಸಂತೋಷ್ ಪಿ ಕೋಟ್ಯಾನ್ ಮಾಲಕತ್ವದ ಕೋಟ್ಯಾನ್ ರಾಕರ್ಸ್, ಸಂತೋಷ್ ಕುಮಾರ್ ಮಾಲಕತ್ವದ ಶಿವಗಿರಿ ಕಾಪಿನಡ್ಕ, ಸಚಿನ್ ಶೆಟ್ಟಿ ಮಾಲಕತ್ವದ ಶ್ರೀಮಾತಾ ಅಟೆಕ್ಕರ್ಸ್,ವಿನು ಬಳಂಜ ಮಾಲಕತ್ವದ ದಿಮಿಸೋಲೆ ತಂಡವು ಭಾಗವಹಿಸಿದ್ದವು.

ಚಾಂಪಿಯನ್ ತಂಡದಲ್ಲಿ ಗುರುಪ್ರಸಾದ್ ಹೆಗ್ಡೆ ದರಿಮಾರ್,ಲತೇಶ್ ಪೆರಾಜೆ,ಯಶಸ್ಸ್ ಬಳಂಜ,ನಿಶಾಂತ್ ಹುಂಬೆಜೆ,ಶರಣ್ ಅಟ್ಲಾಜೆ,ಯತೀಶ್ ಶಾರಬೈಲು,ಪ್ರಕಾಶ್ ಶೆಟ್ಟಿ ತಾರ್ದೊಟ್ಟು,ನಿತಿನ್,ಅಭಿ,ಅನ್ವಿತ್,ರಾಹುಲ್ ಇದ್ದರು.

ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಸೇರಿದಂತೆ ತಂಡದ ಪದಾಧಿಕಾರಿಗಳು, ಆಟಗಾರರು, ವಿವಿಧ ತಂಡದ ಮಾಲಕರು ಚಾಂಪಿಯನ್ ತಂಡವನ್ನು ಅಭಿನಂದಿಸಿದರು.

ಮಜ್ಜೇನಿಬೈಲು ಬ್ರದರ್ಸ್ ತಂಡ ಚಾಂಪಿಯನ್ ಆದ ಹಿನ್ನಲೆಯಲ್ಲಿ ತಂಡದ ಎಲ್ಲಾ ಸದಸ್ಯರನ್ನು ತಂಡದ ಮಾಲಕರಾದ ವಿಶ್ವನಾಥ ಹೊಳ್ಳ,ಅನಂತರಾಮ ಹೊಳ್ಳ ಶಿರ್ಡಿ ಸಾಯಿಬಾಬಾ ಮಂದಿರ ದರ್ಶನ ಯಾತ್ರೆ ಕೈಗೊಂಡಿದ್ದಾರೆ.

Related posts

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ಪುಷ್ಪರಥೋತ್ಸವ: ಅಭಿನಂದನೆ ಕಾರ್ಯಕ್ರಮ

Suddi Udaya

ಹೊಸಂಗಡಿ : ಬಡಕೋಡಿ ಕರಿಮಣೇಲು ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಗುರುವಾಯನಕೆರೆಯಲ್ಲಿ ಡಾ. ಸವನ್ ರೈ ಬಾರ್ದಡ್ಕ ಬಳಂಜರವರ ಶ್ರೀ ಹಿತ ಡೆಂಟಲ್ ಝೋನ್ ಶುಭಾರಂಭ

Suddi Udaya

ವಾಣಿ ಕಾಲೇಜಿನ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya

ಕೋಲ್ಕತಾ ವೈದ್ಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ: ಬೆಳ್ತಂಗಡಿ ತಾಲೂಕಿನಲ್ಲಿ ತುರ್ತು ಸೇವೆ ಹೊರತುಪಡಿಸಿ ಹೊರರೋಗಿ ವಿಭಾಗ ಹಾಗೂ ಇತರ ವೈದ್ಯಕೀಯ ಸೇವೆಗಳು ಸ್ಥಗಿತ

Suddi Udaya

ಬೆಳ್ತಂಗಡಿ: ಉತ್ತರ ಕನ್ನಡದಲ್ಲಿ ನಡೆಯುವ ಗಂಗಾಷ್ಟಮಿ ಉತ್ಸವಕ್ಕೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಗೆ ಆಹ್ವಾನ

Suddi Udaya
error: Content is protected !!