22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಸುಲ್ಕೇರಿಮೊಗ್ರು ಪುರುಷರ ಬಳಗ ವತಿಯಿಂದ ರಾಶಿ ಪೂಜೆ

ಸುಲ್ಕೇರಿಮೊಗ್ರು ಪುರುಷರ ಬಳಗ ವತಿಯಿಂದ ಗರಡಿ ವಠಾರದಲ್ಲಿ ರಾಶಿ ಪೂಜೆಯು ಭಕ್ತಿ ಶ್ರದ್ಧೆಯಿಂದ ವಿಜೃಂಭಣೆಯಿಂದ ಮಾ.30ರಂದು ಜರಗಿತು.

ಸುಗ್ಗಿ ಹುಣ್ಣಿಮೆ ದಿನ ಮೂರು ದಿನಗಳ ಕಾಲ ವಿವಿಧ ವೇಷ ಧರಿಸಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಕದ್ರಿ ದೇವಸ್ಥಾನದಿಂದ ತೀರ್ಥ ಪ್ರಸಾದ ತಂದು ರಾಶಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿರಿಯ ವೇಷಧಾರಿಗಳಾದ ರಾಮಣ್ಣ ಮೂಲ್ಯ ಅಂಬಡೆದಡಿ ಮತ್ತು ಓಬಯ್ಯ ದೇವಾಡಿಗ ಇವರಿಗೆ ಸನ್ಮಾನ ಮಾಡಲಾಯಿತು ಹಾಗೂ ಉಚಿತ ಡೋಲು ಸೇವೆ ಸಲ್ಲಿಸಿದ ಪ್ರಸಾದ್ ದಾಯಿಗುಡ್ಡೆ ಇವರನ್ನು ಗೌರವಿಸಲಾಯಿತು.

ಸಂದೀಪ್ ಪಟ್ಲ ನೇತೃತ್ವದಲ್ಲಿ ನಡೆದ ಈ ರಾಶಿ ಪೂಜೆಯಲ್ಲಿ ಊರ ಹಾಗೂ ಪರವೂರ ನೂರಾರು ಭಕ್ತರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಎಂ. ಗಂಗಾಧರ ಮಿತ್ತಮಾರು ಸೋಮನಾಥ ಬಂಗೇರ ವರ್ಪಳೆ, ಗುರುವಪ್ಪ ಪೂಜಾರಿ, ಪಟ್ಲ ರಾಮಪ್ಪ ಸಣ್ಣಪಟ್ಲ, ನಾರಾಯಣ ಪರಂಟ್ಯಾಲ, ಪುರಂದರ ಪಡುಬೈಲು, ಅಶೋಕ ಕಾಡಂಗೆ, ಅಳದಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜನಾರ್ಧನ ಕೊಡಂಗೆ, ರವಿ ಸಾಲಿಯಾನ್, ನಂದನ್ , ಗಣೇಶ್ ಕಾಡಂಗೆ, ರಾಜೇಂದ್ರ ಸಾಲಿಯಾನ್, ಧರ್ಣಪ್ಪ, ಪ್ರಮೋದ್, ವಸಂತ ಅಂಚನ್, ಆನಂದ ಅಂಚನ್, ಸಂಕೇತ್ ವರ್ಷಾಳೆ, ಕಿಶೋರ್ ,ಸತೀಶ್ ,ರಮೇಶ್, ಗೇತನ್, ಶಿವಪ್ಪ ಕೊಲ್ಲಂಗೆ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ

Suddi Udaya

ಮಂಗಳೂರುನಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ವಿರೋಧಿ ದಿನ ಆಚರಣೆ: ಬೆಳ್ತಂಗಡಿ ತಾಲೂಕಿನ ಔಷಧಿ ವ್ಯಾಪಾರಸ್ಥರು ಭಾಗಿ

Suddi Udaya

ಬೆಳಾಲು ತಾರಗಂಡಿ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ಜು.12: ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಯ ಆಯ್ದ 350 ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಣೆ

Suddi Udaya

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya

ಕುವೆಟ್ಟು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಭಾರತಿ ಎಸ್ ಶೆಟ್ಟಿ, ಉಪಾಧ್ಯಕ್ಷರಾಗಿ ಗಣೇಶ್ ಕೆ ಅವಿರೋಧವಾಗಿ ಆಯ್ಕೆ

Suddi Udaya
error: Content is protected !!