22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಸುಲ್ಕೇರಿಮೊಗ್ರು ಪುರುಷರ ಬಳಗ ವತಿಯಿಂದ ರಾಶಿ ಪೂಜೆ

ಸುಲ್ಕೇರಿಮೊಗ್ರು ಪುರುಷರ ಬಳಗ ವತಿಯಿಂದ ಗರಡಿ ವಠಾರದಲ್ಲಿ ರಾಶಿ ಪೂಜೆಯು ಭಕ್ತಿ ಶ್ರದ್ಧೆಯಿಂದ ವಿಜೃಂಭಣೆಯಿಂದ ಮಾ.30ರಂದು ಜರಗಿತು.

ಸುಗ್ಗಿ ಹುಣ್ಣಿಮೆ ದಿನ ಮೂರು ದಿನಗಳ ಕಾಲ ವಿವಿಧ ವೇಷ ಧರಿಸಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಕದ್ರಿ ದೇವಸ್ಥಾನದಿಂದ ತೀರ್ಥ ಪ್ರಸಾದ ತಂದು ರಾಶಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿರಿಯ ವೇಷಧಾರಿಗಳಾದ ರಾಮಣ್ಣ ಮೂಲ್ಯ ಅಂಬಡೆದಡಿ ಮತ್ತು ಓಬಯ್ಯ ದೇವಾಡಿಗ ಇವರಿಗೆ ಸನ್ಮಾನ ಮಾಡಲಾಯಿತು ಹಾಗೂ ಉಚಿತ ಡೋಲು ಸೇವೆ ಸಲ್ಲಿಸಿದ ಪ್ರಸಾದ್ ದಾಯಿಗುಡ್ಡೆ ಇವರನ್ನು ಗೌರವಿಸಲಾಯಿತು.

ಸಂದೀಪ್ ಪಟ್ಲ ನೇತೃತ್ವದಲ್ಲಿ ನಡೆದ ಈ ರಾಶಿ ಪೂಜೆಯಲ್ಲಿ ಊರ ಹಾಗೂ ಪರವೂರ ನೂರಾರು ಭಕ್ತರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಎಂ. ಗಂಗಾಧರ ಮಿತ್ತಮಾರು ಸೋಮನಾಥ ಬಂಗೇರ ವರ್ಪಳೆ, ಗುರುವಪ್ಪ ಪೂಜಾರಿ, ಪಟ್ಲ ರಾಮಪ್ಪ ಸಣ್ಣಪಟ್ಲ, ನಾರಾಯಣ ಪರಂಟ್ಯಾಲ, ಪುರಂದರ ಪಡುಬೈಲು, ಅಶೋಕ ಕಾಡಂಗೆ, ಅಳದಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜನಾರ್ಧನ ಕೊಡಂಗೆ, ರವಿ ಸಾಲಿಯಾನ್, ನಂದನ್ , ಗಣೇಶ್ ಕಾಡಂಗೆ, ರಾಜೇಂದ್ರ ಸಾಲಿಯಾನ್, ಧರ್ಣಪ್ಪ, ಪ್ರಮೋದ್, ವಸಂತ ಅಂಚನ್, ಆನಂದ ಅಂಚನ್, ಸಂಕೇತ್ ವರ್ಷಾಳೆ, ಕಿಶೋರ್ ,ಸತೀಶ್ ,ರಮೇಶ್, ಗೇತನ್, ಶಿವಪ್ಪ ಕೊಲ್ಲಂಗೆ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

Related posts

ಮೇ 26: ಕಾಯರ್ತಡ್ಕ ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ, ಗೋನಂದಾರತಿ, ದೀಪೋತ್ಸವ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ ಮತ್ತು ಸಾತ್ವಿಕ್ ಯಂ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸನ್ಮಾನ

Suddi Udaya

ಇಳಂತಿಲದಲ್ಲಿ ಕುಣಿತ ಭಜನಾ ತರಬೇತಿ ಆರಂಭೋತ್ಸವ

Suddi Udaya

ಅಂಬಾರು: ಡಾ. ರವೀಶ್ ಪಡುಮಲೆರವರಿಗೆ ಗೌರವ ಸನ್ಮಾನ

Suddi Udaya
error: Content is protected !!