22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಗೇರುಕಟ್ಟೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್: ಖತೀಬರಾದ ತಾಜುದ್ದೀನ್ ಸಖಾಫಿರಿಗೆ ಬೀಳ್ಕೊಡುಗೆ

ಗೇರುಕಟ್ಟೆ ಸಮೀಪದ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್ ಹಬ್ಬದ ಸಾಮೂಹಿಕ ನಮಾಝ್ ಖತೀಬರಾದ ತಾಜುದ್ದೀನ್ ಸಖಾಫಿ ನೇತೃತ್ವದಲ್ಲಿ ನಡೆಯಿತು. ಶಾಂತಿ ಸೌಹಾರ್ಧತೆಯ ಬಗ್ಗೆ ಸಂದೇಶ ಭಾಷಣ ಮಾಡಿದರು.

ಖತೀಬರಾದ ತಾಜುದ್ದೀನ್ ಸಖಾಫಿರವರನ್ನು ಬೀಳ್ಕೊಡುಗೆ:

ಕಳೆದ ಮೂರು ವರ್ಷಗಳಿಂದ ಪರಪ್ಪು ಮಸೀದಿಯಲ್ಲಿ ಖತೀಬರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ತಾಜುದ್ದೀನ್ ಸಖಾಫಿ ಮದರಸ ಮಕ್ಕಳ ವಿದ್ಯಾಭ್ಯಾಸದಲ್ಲಿ ರೇಂಜ್ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಫಲಿತಾಂಶ ಬರಲು ಹಾಗೂ ಮದರಸ ಮಕ್ಕಳ ಪ್ರತಿಭೋತ್ಸವದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆಯಲು ಕೂಡಾ ಕಾರಣಕರ್ತರಾಗಿದ್ದರು.


ಇವರು ಬೇರೆ ಕಡೆ ಉದ್ಯೋಗಕ್ಕಾಗಿ ಹೋಗುವವರಾದ್ದರಿಂದ ಈದುಲ್ ಫಿತರ್ ನ ದಿನದಂದು ಆಡಳಿತ ಸಮಿತಿ ಮತ್ತು ಜಮಾಅತರಿಂದ ಗೌರವಾರ್ಪಣೆಯ ಮೂಲಕ ಬೀಳ್ಕೊಡಲಾಯಿತು.


ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ,ಸಿದ್ದೀಕ್ ಮುಈನಿ, ಅಬ್ಬಾಸ್ ಹಿಶಮಿ,ಇಕ್ಬಾಲ್ ಮರ್ಝಾಕಿ, ಸಿದ್ದೀಕ್ ಸಖಾಫಿ , ಖಾದರ್ ಹಾಜಿ,ಅಬ್ದುಲ್ ಕರೀಮ್, ಖಾದರ್ ಟಿಂಬರ್, ಬಶೀರ್ ಟಿಂಬರ್,ಇಸುಬು ಎಂ.ಕೆ., ಮಹ್ಮದ್ ಎನ್.ಎನ್, ಹಾರಿಶ್ ಎನ್.ಎ, ಅಬ್ಬಾಸ್, ಬಿ.ಎಂ. ಆದಂ ಹಾಜಿ, ಹನೀಫ್ ಬಿ.ಐ., ಆಸಿಫ್.ಎಸ್.ಯು, ಅಬೂಸಾಲಿಹ್ ,ಸಿದ್ದೀಕ್ , ಸೈಫುಲ್ಲಾ, ಹಾಗೂ ಇನ್ನೂ ಅನೇಕ ಮುಖಂಡರು, ಉಸ್ತಾದರುಗಳು ಮೊದಲಾದವರಿದ್ದರು.

Related posts

ಬೆಳ್ತಂಗಡಿ: ಮ್ಯಾಟ್ರಿಕ್ಸ್ ಹೋಂಡಾ ಬಳಿ ಮರ ಬಿದ್ದು ಹಾನಿ

Suddi Udaya

ಕಡಿರುದ್ಯಾವರ ಗ್ರಾಮ ಪಂಚಾಯತಿನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ಉಜಿರೆ ಸಂತ ಅಂತೋನಿ ಚರ್ಚ್ ನ ಅಸಕ್ತ ಕುಟುಂಬಕ್ಕೆ ಮನೆ ಹಸ್ತಾಂತರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಛತ್ರದಲ್ಲಿ ಸೆಲ್ಕೋ ಪೌಂಢೇಶನ್ ಪ್ರಾಯೋಜಕತ್ವದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ಘಟಕಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

Suddi Udaya

ಬಜೆಟ್ ನಿಂದ ಭಾರತದ ವರ್ಚಸ್ಸು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದೆ: ಕಿರಣ್ ಚಂದ್ರ ಪುಷ್ಪಗಿರಿ

Suddi Udaya

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಕಾಂಗ್ರೆಸ್ ಮುಖಂಡರಾದ ರಂಜನ್ ಜಿ. ಗೌಡ ಮತ್ತು ಅಭಿನಂದನ್ ಹರೀಶ್ ಕುಮಾರ್

Suddi Udaya
error: Content is protected !!